ನಿಂಬೋಳಿ ತಿಪ್ಪಣ್ಣನವರ ನಿತ್ಯಾನಂದ ತತ್ವಪದಗಳು

Author : ಲಿಂಗಾರೆಡ್ಡಿ ಶೇರಿ

Pages 92

₹ 90.00




Year of Publication: 2020
Published by: ಶ್ರೀ ಸಸಾ ಪ್ರಕಾಶನ
Address: ಜಾಕನಹಳ್ಳಿ, ತಾಲೂಕು ಸೇಡಂ, ಜಿಲ್ಲೆ ಕಲಬುರಗಿ

Synopsys

ಲೇಖಕ ಲಿಂಗಾರೆಡ್ಡಿ ಶೇರಿ ಅವರು ನಿಂಬೋಳಿ ತಿಪ್ಪಣ್ಣನವರ  (1922-83) ತತ್ವಪದಗಳನ್ನು ಸಂಪಾದಿಸಿದ ಕೃತಿ-ನಿತ್ಯಾನಂದ ತತ್ವಪದಗಳು. ಸುಮಾರು 66 ಕನ್ನಡ ಹಾಗೂ ತೆಲುಗು 03 ತತ್ವಪದಗಳು ಸಂಕಲನಗೊಂಡಿವೆ. ಸೇಡಂ ತಾಲೂಕು ತೆಲಂಗಾಣ ರಾಜ್ಯದ ಗಡಿ ತಾಲೂಕು ಆಗಿದ್ದರಿಂದ ತೆಲುಗು ಪ್ರಭಾವವನ್ನೂ ನಿರ್ಲಕ್ಷಿಸುವಂತಿಲ್ಲ. ತತ್ವಪದಗಳು ಅಧ್ಯಾತ್ಮಕ, ಜೀವ, ನಿರ್ಜೀವ, ಸಮಾಜ ಹಾಗೂ ಮನುಕುಲದ  ಮಹತ್ವ, ಮೂಢನಂಬಿಕೆ ವಿರೋಧಿ ಭಾವ, ಕೋಮು ಸೌಹಾರ್ದತೆ ಇತ್ಯಾದಿ ಅಂಶಗಳು ಇವರ ತತ್ವಪದಗಳು ವಸ್ತುಗಳಾಗಿವೆ. ಸೇಡಂ ತಾಲೂಕಿನ ರಂಜೋಳ ಗ್ರಾಮದವರಾದ ತಿಪ್ಪಣ್ಣನವರ ಮನೆತನದ ಅಡ್ಡ ಹೆಸರು ನಿಂಬೋಳಿ. ಹೀಗಾಗಿ ಅವರನ್ನು ನಿಂಬೋಳಿ ತಿಪ್ಪಣ್ಣ ಎಂದೇ ಕರೆಯಲಾಗುತ್ತಿತ್ತು. ಇವರ ತತ್ವಪದಗಳು ವಿಶೇಷವಾಗಿ ತೆಲುಗು ಭಾಷೆಯಲ್ಲಿ ರಚಿತವಾದ ತತ್ವಪದಗಳನ್ನು ಲೇಖಕರು ಸಂಶೋಧಿಸುತ್ತಿದ್ದಾರೆ. 

About the Author

ಲಿಂಗಾರೆಡ್ಡಿ ಶೇರಿ
(01 April 1951)

ಲೇಖಕ ಲಿಂಗಾರೆಡ್ಡಿ ಸೇರಿ  ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಾಕನಹಳ್ಳಿ ಗ್ರಾಮದವರು. ತಂದೆ ಬಸರೆಡ್ಡಿ, ತಾಯಿ ವೀರಮ್ಮ. ಜಾಕನಹಳ್ಳಿ, ಕೊಲಕುಂದಾ ಹಾಗೂ ಮದನಾ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದರು. ಕಲಬುರಗಿಯ ಎಸ್.,ಬಿ. ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ಕರ್ನಾಟಕ ವಿವಿ ಯಿಂದ ಬಿ.ಎ, ಹಾಗೂ ಬೆಂಗಳೂರು ವಿ.ವಿ.ಯಿಂದ ಬಿ.ಇಡಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ತೆಲುಗು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಬಾಹ್ಯ) ಪದವೀಧರರು.   ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾ ಸಂಸ್ಥೇಯಲ್ಲಿ ಶಿಕ್ಷಕ ವೃತ್ತಿ ಆರಂಭ, ನಂತರ ಅವರು ಕಡಕೋಳ, ತೂಲಹಳ್ಳಿ, ರಾಣೇಬೆನ್ನೂರು ಹೀಗೆ ...

READ MORE

Related Books