ನಿಮ್ಮ ಖುಷಿ ನಿಮ್ಮ ಕೈಯಲ್ಲಿ

Author : ಹುಲಿಕಲ್ ನಟರಾಜ್

Pages 160

₹ 108.00




Year of Publication: 2015
Published by: ಪವಾಡ ಸಂಶೋಧನಾ ಕೇಂದ್ರ
Address: ದೊಡ್ಡಬಳ್ಳಾಪುರ, ಜಿ: ಬೆಂಗಳೂರು ಗ್ರಾಮಾಂತರ

Synopsys

ಪವಾಡ ಕಾರ್ಯಕ್ರಮ ಖ್ಯಾತಿಯ ಹುಲಿಕಲ್ ನಟರಾಜ್ ಅವರು ಬರೆದ ಕೃತಿ-ನಿಮ್ಮ ಖುಷಿ ನಿಮ್ಮ ಕೈಯಲ್ಲಿ. ಅಜ್ಞಾನವೇ ಎಲ್ಲ ರೀತಿಯ ಶೋಷಣೆಗೆ ಮೂಲ. ಈ ಅಜ್ಞಾನ ತೊಡೆದು ಹಾಕಲು ಅರಿವು-ತಿಳಿವಳಿಕೆ ಅಗತ್ಯ. ಈ ಹಿನ್ನೆಲೆಯಲ್ಲಿ, ನಮ್ಮ  ಖುಷಿಯ ಮೂಲ ನಮ್ಮ ಮನದಲ್ಲೇ ಇದ್ದರೂ ಹೊರಗಡೆ ಅದನ್ನು ಹುಡುಕುತ್ತಿರುತ್ತೇವೆ. ವೃಥಾ ಸಮಯ ಹಾಳು ಮಾಡುತ್ತೇವೆ. ಇಂತಹ ಅಂಶಗಳನ್ನು ಒಳಗೊಂಡ ಕೃತಿಯು ನಮ್ಮ ಅರಿವೇ ನಮಗೆ ಗುರು ಎಂಬ ಅಂಶವನ್ನು ಮನದಟ್ಟು ಮಾಡಿಸುತ್ತದೆ.

About the Author

ಹುಲಿಕಲ್ ನಟರಾಜ್

ಹುಲಿಕಲ್ ನಟರಾಜ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನವರು. ಪವಾಡ ಬಯಲು ಕಾರ್ಯಕ್ರಮದ ಮೂ;ಲಕ ಜನಸಾಮಾನ್ಯರಲ್ಲಿಯ ಮೂಢನಂಬಿಕೆಗಳ ನಿರ್ಮೂಲನೆಗಾಗಿ ತಮ್ಮ ವ್ಯಕ್ತಿಗತ ನೆಲೆಯಲ್ಲಿ ಹೊರಾಟವನ್ನೇ ಆರಂಭಿಸಿದವರು. ವೈಜ್ಞಾನಿಕ ತಳಹದಿಯ ಸಂಸ್ಥೆ-ಸಂಘಟನೆಗಳೊಂದಿಗೆ ಸೇರಿ ಸಾಮಾಜಿಕ ವೈಜ್ಞಾನಿಕತೆಯ ಬಲವರ್ಧನೆಗೆ ಶ್ರಮಿಸುತ್ತಿದ್ದು, ಇವರ ಈ ಸೇವೆಗಾಗಿ ರಾಷ್ಟ್ರ ಪ್ರಶಸ್ತಿಯೂ ದೊರಕಿದೆ. ಹುಲಿಕಲ್ ನಟರಾಜ್ ನೀವೂ, ಆರೋಗ್ಯದತ್ತ ನಮ್ಮ ಪಯಣ, ಮನಸೇಕೆ ಹೀಗೆ, ನಿಮ್ಮ ಯಶಸ್ಸಿಗೆ ನೀವೇ ರೂವಾರಿ, ನಿಮ್ಮ ಖುಷಿ ನಿಮ್ಮ ಕೈಯಲ್ಲಿ, ಅಂಗೈಯಲ್ಲಿ ಆರೋಗ್ಯ, ಜೀವ ಕೊಡುವ ಅಮೃತ ಬಿಂದು, ಇದೂ ಸಾಧ್ಯ, ನೀವೂ ಮಾಡಿ ಪವಾಡ, ಭಾಗ-1, ನೀವೂ ಂಆಡಿ ...

READ MORE

Related Books