ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ

Author : ಎಂ. ಅಬ್ದುಲ್ ರೆಹಮಾನ್ ಪಾಷಾ

Pages 116

₹ 70.00




Year of Publication: 2014
Published by: ನವಕರ್ನಾಟಕ ಪ್ರಕಾಶನ

Synopsys

ಮಾತು-ಉಚ್ಚಾರಣೆ-ಭಾಷೆಯ ಬಳಕೆಯಲ್ಲಿ ಕುಟುಂಬದ ಸದಸ್ಯರು, ಶಿಕ್ಷಕರು, ನೆರೆಹೊರೆಯವರು, ಮಾಧ್ಯಮಗಳು ಮಗುವಿನ ಮೇಲೆ ಪ್ರಭಾವ ಬೀರುತ್ತವೆ. ಆ ಪ್ರಭಾವ ಯಾವ ರೀತಿ ಮಗುವಿನ ಅಕಾರ-ಹಕಾರ, ಅಲ್ಪಪ್ರಾಣ-ಮಹಾಪ್ರಾಣಗಳ ಉಚ್ಚಾರಣೆ, ಭಾವನೆಗಳ ಪ್ರಕಟಣೆ, ವಿಷಯ-ವಿಚಾರ ಮಂಡನೆಯ ಶೈಲಿ, ಆತ್ಮೀಯತೆ ಅಥವಾ ಯಾಂತ್ರಿಕತೆಯನ್ನು ನಿರ್ಧರಿಸುತ್ತವೆ ಎನ್ನುವುದರ ಸಮಗ್ರವಾದ ಮಾಹಿತಿಯನ್ನು ಒಳಗೊಂಡಿರುವ ಪುಸ್ತಕ ಇದು. ಸರಿ ಉಚ್ಚಾರಣೆಗೆ ಪ್ರೋತ್ಸಾಹ ನೀಡಿ, ತಪ್ಪು ಉಚ್ಚಾರಣೆ-ಸಂವಹನಕ್ಕೆ ಯಾವ ರೀತಿ ಕಡಿವಾಣ ಹಾಕಬಹುದು ಎಂಬುದನ್ನು ಈ ಪುಸ್ತಕವನ್ನು ಓದಿ ತಿಳಿದುಕೊಳ್ಳಬಹುದು. ವ್ಯಕ್ತಿತ್ವ ಚೆನ್ನಾಗಿರಲು, ಜನಪ್ರಿಯವಾಗಲು, ಪ್ರಭಾವಶಾಲಿಯಾಗಲು ಒಳ್ಳೆಯ ಧ್ವನಿ ಮತ್ತು ಮಾತು ಬಹುಮುಖ್ಯ. ಯಾವ ರೀತಿ ಇವೆರಡನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂಬುದರ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ. ನಾವು ಹೇಗೆ ಮಾತಾಡಬೇಕು, ಧ್ವನಿ-ಮಾತಿನ ಮುಖಾಂತರ ನಮ್ಮ ಅನಿಸಿಕೆ, ಭಾವನೆ, ಪ್ರತಿರೋಧ, ಸಹಮತವನ್ನು ಪರಿಣಾಮಕಾರಿಯಾಗಿ ಇತರರಿಗೆ ಹೇಗೆ ತಲುಪಿಸಬೇಕು, ಉತ್ತಮ ಸಂವಹನದ ಗುಣ ಲಕ್ಷಣಗಳೇನು ಎಂಬುದನ್ನೆಲ್ಲಾ ನಿಖರವಾಗಿ, ಓದುಗರಿಗೆ ಅರ್ಥವಾಗುವ ಹಾಗೆ ಲೇಖಕರು ಬರೆದಿದ್ದಾರೆ. ಸರಳ ಭಾಷಾ ಪ್ರಯೋಗ ಈ ಪುಸ್ತಕದ ಪ್ರಮುಖ ಆಕರ್ಷಣೆ.

About the Author

ಎಂ. ಅಬ್ದುಲ್ ರೆಹಮಾನ್ ಪಾಷಾ

ಸಿನಿಮಾ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದಂತೆ  ಬರೆಯುವ ಅಬ್ದುಲ್ ರೆಹಮಾನ್ ಪಾಷಾ ಕನ್ನಡ ಲೇಖಕರು. ಗಾಂಧೀ ನೆಹರೂ ಆಯ್ದ ಪತ್ರಗಳು, ಅಭಿವೃದ್ಧಿ ಸಂವಹನ ಕೌಶಲ್ಯಗಳು, ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ, ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ, ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ, ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆಯಲ್ಲಿ ಮಹಾತ್ಮ ಗಾಂಧಿ, ಟೀಪು ಸುಲ್ತಾನ, ಜವಾಹರಲಾಲ್ ನೆಹರೂ, ಪ್ರವಾದಿ ಮುಹಮ್ಮದ್ ಕಿರುಹೊತ್ತಿಗೆಗಳು ಮುದ್ರಣ ಕಂಡಿವೆ. ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ’ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015), ಶಿವಮೊಗ್ಗದ ...

READ MORE

Related Books