‘ನಿರ್ದಿಗಂತವಾಗಿ ಏರಿ’ ಲೇಖಕ ಸುಭಾಷ್ ರಾಜಮಾನೆ ಅವರ ವಿಮರ್ಶಾ ಲೇಖನಗಳ ಸಂಕಲನ. ಬೆಳಗಾವಿ ಸೀಮೆಯವರಾದ ರಾಜಮಾನೆ, ಗ್ರಾಮೀಣ ಪ್ರದೇಶದ ದಲಿತರು ಸಾಮಾನ್ಯವಾಗಿ ಅನುಭವಿಸುವ ಕಷ್ಟ ಅಪಮಾನ ಕಂಡವರು. ಅವರಂತೆ ಕಷ್ಟಪಟ್ಟು ಬೆಳೆದವರನ್ನು ನಾನು ಹೆಚ್ಚು ನೋಡಲಿಲ್ಲ. ಆದರೆ ರಾಜಮಾನೆಯವರಿಗೆ ಸಾಹಿತ್ಯದ ಓದು ಮತ್ತು ಬರೆಹಗಳು ಆತ್ಮವಿಶ್ವಾಸ ಮತ್ತು ಘನತೆಯ ಬದುಕನ್ನು ಕಟ್ಟಿಕೊಳ್ಳುವ ಹಾದಿಯಾಗಿ ಪರಿಣಮಿಸಿರುವುದು ಸ್ಪಷ್ಟವಾಗಿದೆ ಎನ್ನುತ್ತಾರೆ ಹಿರಿಯ ಲೇಖಕ ರಹಮತ್ ತರೀಕೆರೆ.
ಕನ್ನಡದ ಕತೆ ಕಾವ್ಯ ಕಾದಂಬರಿಗಳನ್ನೇ ಓದುವವರು ಅಥವಾ ಅವನ್ನು ಆಕರವಾಗಿಸಿಕೊಂಡು ಸಂಶೋಧನೆ ಮಾಡುವವರು ಸಾಕಷ್ಟಿದ್ದಾರೆ. ಆದರೆ ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಗಳನ್ನು ಪ್ರೀತಿಯಿಂದ ಓದುವವರು ಅಥವಾ ಅವನ್ನಿಟ್ಟುಕೊಂಡು ಸಂಶೋಧನೆ ಮಾಡುವವರು ಕಡಿಮೆ. ರಾಜಮಾನೆ ಅವರಿಗೆ ಸಾಹಿತ್ಯ ವಿಮರ್ಶೆಯ ಜತೆ ಹಿಂದಿನಿಂದ ಒಡನಾಟ ಇದ್ದುದರಿಂದ ಅದನ್ನು ಅಧ್ಯಯನ ಮಾಡುವುದು ಸುಲಭವಾಯಿತು. ಈ ಪುಸ್ತಕ ಅವರ ಓದಿನ ಹರಹನ್ನೂ ವಿಶ್ಲೇಷಣ ಪ್ರತಿಭೆಯನ್ನೂ ಈ ಕೃತಿ ಒಳಗೊಂಡಿದೆ.
ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಆಗಿರುವ ಸುಭಾಷ ರಾಜಮಾನೆ ಅವರು ಮೂಲತಃ ಬೆಳಗಾವಿಯವರು. ಧಾರವಾಡದ ಕರ್ನಾಟಕ ಕಾಲೇಜಿನ ವಿದ್ಯಾರ್ಥಿಯಾಗಿ ಪದವಿ ಪಡೆದ ಅವರು ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದ ಕನ್ನಡ ವಿಮರ್ಶೆ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದರು. ಕನ್ನಡ ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಗಳಲ್ಲಿ ಉತ್ತಮ ಗತಿ ಇರುವ ಸುಭಾಷ ಅವರಿಗೆ ಸಿನಿಮಾ-ಸಾಹಿತ್ಯ ಅಚ್ಚುಮೆಚ್ಚು. ಸಿನಿಮಾ ಬಗ್ಗೆ ಗಂಭೀರ ಅಧ್ಯಯನ ನಡೆಸುತ್ತಿರುವ ಅವರು ದಿ ಆರ್ಟಿಸ್ಟ್ ಸಿನಿಮಾದ ಚಿತ್ರಕತೆಯನ್ನು ಕನ್ನಡೀಕರಿಸಿ ಪ್ರಕಟಿಸಿದ್ದಾರೆ. ...
READ MORE