ನಿತ್ಯಾನಂದ ತತ್ವಪದಗಳು

Author : ಲಿಂಗಾರೆಡ್ಡಿ ಶೇರಿ

₹ 3.00




Year of Publication: 1983
Published by: ಬಸವ ಪ್ರಕಾಶನ
Address: ಜಾಕನಹಳ್ಳಿ, ತಾ: ಸೇಡಂ, ಜಿಲ್ಲೆ:ಕಲಬುರಗಿ

Synopsys

ನಿತ್ಯಾನಂದ ತತ್ವಪದಗಳು (ಭಜನೆ ಹಾಡುಗಳ ಸಂಗ್ರಹ). ಲೇಖಕ ಲೀಂಗಾರೆಡ್ಡಿ ಶೇರಿ ಸಂಪಾದಕರು. ನಿಂಬೋಳಿ ತಿಪ್ಪಣ್ಣನ ಭಜನೆಯ ಪದಗಳು, ಇಟಕಾಲದ(ಮೋಟ್ನಳ್ಳಿ) ಹಾಸನ ಸಾಹೇಬರ 1 ತತ್ವಪದ, ಶ್ರೀ ಗುಡ್ಡ ಗವಿಸಿದ್ಧ ಲಿಂಗ ಅನಾಮಿಕ ಕವಿಯ ಹಾಡು, ಕೋನಾಪುರದ ರಾಮಪ್ಪ ನವರ ಪೂಜಿ ನಡಿತಾದ ಎನ್ನುವ ಪದ, ಹಾಗೂ ಒಂದು ಆರತಿ ಪದ ಸೇರಿದಂತೆ ಒಟ್ಟು 46 ತತ್ವಪದಗಳನ್ನು ಒಳಗೊಂಡಿವೆ. ಬೇರೆ ತತ್ವಪದಕಾರರ ಪ್ರಭಾವ ಇದ್ದರೂ ತಿಪ್ಪಣ್ಣ ಅವರ ಅನೇಕ ರಚನೆಗಳು ಸ್ವತಂತ್ರವಾಗಿವೆ. ನೆಲದ ಭಾಷೆ ಮತ್ತು ವಸ್ತು ಈ ಭಜನೆ ಹಾಡುಗಳ ಮೂಲ ದ್ರವ್ಯ. ಕವಿ ತನ್ನ ಅನುಭವವನ್ನು ನಿರ್ಭಿಡೆಯಿಂದ ಹೇಳಿಕೊಂಡಿದ್ದಾನೆ’ ಎಂದು ಸಂಪಾದಕರು ಸಮರ್ಥಿಸಿಕೊಂಡಿದ್ದಾರೆ.

About the Author

ಲಿಂಗಾರೆಡ್ಡಿ ಶೇರಿ
(01 April 1951)

ಲೇಖಕ ಲಿಂಗಾರೆಡ್ಡಿ ಸೇರಿ  ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಾಕನಹಳ್ಳಿ ಗ್ರಾಮದವರು. ತಂದೆ ಬಸರೆಡ್ಡಿ, ತಾಯಿ ವೀರಮ್ಮ. ಜಾಕನಹಳ್ಳಿ, ಕೊಲಕುಂದಾ ಹಾಗೂ ಮದನಾ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದರು. ಕಲಬುರಗಿಯ ಎಸ್.,ಬಿ. ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ಕರ್ನಾಟಕ ವಿವಿ ಯಿಂದ ಬಿ.ಎ, ಹಾಗೂ ಬೆಂಗಳೂರು ವಿ.ವಿ.ಯಿಂದ ಬಿ.ಇಡಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ತೆಲುಗು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಬಾಹ್ಯ) ಪದವೀಧರರು.   ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾ ಸಂಸ್ಥೇಯಲ್ಲಿ ಶಿಕ್ಷಕ ವೃತ್ತಿ ಆರಂಭ, ನಂತರ ಅವರು ಕಡಕೋಳ, ತೂಲಹಳ್ಳಿ, ರಾಣೇಬೆನ್ನೂರು ಹೀಗೆ ...

READ MORE

Related Books