ನಿವೇದನೆ (ಧರ್ಮಾನಂದ ಕೊಸಾಂಬಿ ಆತ್ಮಕಥನ)

Author : ಗೀತಾ ಶೆಣೈ

Pages 228

₹ 160.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಶಿವಾನಂದ ಸರ್ಕಲ್‌ ಹತ್ತಿರ, ಕುಮಾರಕೃಪಾ ಪಶ್ಚಿಮ, ಬೆಂಗಳೂರು
Phone: 08030578020

Synopsys

ಧರ್ಮಾನಂದ ಕೊಸಾಂಬಿಯವರ ಬದುಕು, ಬರಹ ಸಾಧನೆಗಳ ಕುರಿತು ಈ ಕೃತಿಯು ಕಟ್ಟಿಕೊಡುತ್ತದೆ. ಚಿಂತಕರಾಗಿ ಅವರು ಸಮಾಜವಾದದ ಸಿದ್ಧಾಂತವನ್ನು ಬೌದ್ಧಧರ್ಮದ ನೀತಿ ತತ್ವದೊಂದಿಗೆ ಮತ್ತು ಇವೆರಡನ್ನೂ ಮಹಾತ್ಮಾ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ತತ್ವದೊಂದಿಗೆ ಸಂಯೋಜಿಸಿ, ಸಮಾನತಾವಾದ ಮತ್ತು ಜಾಗತಿಕ ಶಾಂತಿಯ ಕಲ್ಪನೆಗಳನ್ನು ರಾಷ್ಟ್ರೀಯ ಗಡಿಗಳನ್ನು ದಾಟಿ ಪ್ರಸಾರ ಮಾಡುವ ಪ್ರಯತ್ನವನ್ನು ಧರ್ಮಾನಂದ ಕೊಸಾಂಬಿ ಅವರು ನಡೆಸಿದ್ದಾರೆ.

ಅಧ್ಯಾತ್ಮಿಕ ಮತ್ತು ನೈತಿಕ ಪ್ರಾಮಾಣಿಕತೆಯನ್ನು ಹೊಂದಿದ್ದ ಧರ್ಮಾನಂದರು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಸಾಮಾಜಿಕ ಮತ್ತು ರಾಜಕೀಯ ಕಾಳಜಿಗಳನ್ನು ಆಧರಿಸಿ, ತಮ್ಮ ಹುಡುಕಾಟದಿಂದ ಸಾಪೇಕ್ಷವಾಗಿ ನಿರ್ದಿಷ್ಟ ಹಾಗೂ ಪ್ರತ್ಯೇಕ ಸ್ಥಾನವನ್ನು ಪಡೆಯುತ್ತಾರೆ. 20ನೆಯ ಶತಮಾನದ ಭಾರತದಲ್ಲಿ ಬೌದ್ಧಧರ್ಮವನ್ನು ಜೀವಂತ ಧರ್ಮವಾಗಿ ಪುನಶ್ವೇತನಗೊಳಿಸಿದ ಕೀರ್ತಿ ಧರ್ಮಾನಂದರಿಗೆ ಸಲ್ಲುತ್ತದೆ. ಬೌದ್ಧಧರ್ಮವನ್ನು ಪುನಶ್ವೇತನ ಗೊಳಿಸುವ ಕಾರ್ಯದಲ್ಲಿ ಅವರು ಧರ್ಮದ ಸಿದ್ದಾಂತವನ್ನು ಮತ್ತು ಆಚರಣೆಗಳನ್ನು ಮತ್ತೆ ಪರಿಚಯಿಸಿದ್ದಲ್ಲದೆ, ಅದರ ಪ್ರಸಕ್ತತೆಯನ್ನು ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಸಿದ್ದಾಂತಗಳೊಂದಿಗೆ ಸ್ಥಾಪಿಸುವುದರ ಮೂಲಕ ಹೊಸದಾದ ಮತ್ತು ಸಮಂಜಸವಾದ ಜಾಗತಿಕ ದೃಷ್ಟಿಕೋನವನ್ನು ಸೃಷ್ಟಿಸಿದ್ದಾರೆ. ಇದು ಹೇಗೆ ಮತ್ತು ಯಾಕೆ ನಡೆಯಿತೆನ್ನುವ ಕಥೆಯು ಮರಾಠಿಯಲ್ಲಿ 'ನಿವೇದನ' ಎಂಬ ಸಂಕ್ಷಿಪ್ತ ಶೀರ್ಷಿಕೆಯೊಂದಿಗೆ ಪರಿಚಿತವಾಗಿರುವ ಅವರ ಆತ್ಮಕಥನದ ನಿರೂಪಣೆ (ಆತ್ಮ-ನಿವೇದನ)ಯ ಮೂಲಕ ಅನಾವರಣಗೊಂಡಿದೆ. ಈ ಕೃತಿಯನ್ನು ಗೀತಾ ಶೆಣೈ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Related Books