ನೂರರ ನೋಟ

Author : ಎಚ್. ಎಸ್. ದೊರೆಸ್ವಾಮಿ

Pages 134

₹ 110.00




Year of Publication: 2019
Published by: ಗೌರಿ ಮೀಡಿಯಾ ಟ್ರಸ್ಟ್ (ರಿ)
Address: ನಂ.960, 7ನೇ ಅಡ್ಡರಸ್ತೆ, ಶ್ರೀನಿವಾಸನಗರ, ಬನಶಂಕರಿ, 1ನೇ ಹಂತ, ಬೆಂಗಳೂರು- 560050
Phone: 080-26622817

Synopsys

ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿ ನೂರರ ನೋಟ - ಎಚ್. ಎಸ್. ದೊರೆಸ್ವಾಮಿಯವರ ಲೇಖನಗಳ ಸಂಕಲನ. ಈ ಕೃತಿಗೆ ಲೇಖಕ, ಹೋರಾಟಗಾರ ವಿಕಾಸ್ ಆರ್. ಮೌರ್ಯ ಅವರು ಮುನ್ನುಡಿ ಬರೆದಿದ್ದಾರೆ. ವಿಕಾಸ್ ಅವರೇ ಹೇಳುವಂತೆ ‘ಈ ಸಂಕಲನದ ಉದ್ದಕ್ಕೂ ಹಿರಿಯಜ್ಜ ದೊರೆಸ್ವಾಮಿಯವರ ಅನುಭವ ಮತ್ತು ಓದಿನ ಆಳವನ್ನು ಪರಿಚಯಿಸುತ್ತದೆ. ಸ್ವತಂತ್ರ್ಯ ಭಾರತದ ಆರಂಭದ ದಿನಗಳಿಗೆ ಇಂದಿನ ಭಾರತವನ್ನು ಹೋಲಿಸುತ್ತಾ ಬಡವ ಬಲ್ಲಿದರ ಪ್ರಗತಿಯಲ್ಲಿ ಎಳ್ಳಷ್ಯೂ ಬದಲಾಗಿಲ್ಲ ಎಂದು ಅಂಕಿಅಂಶಗಳ ಸಮೇತ ಚರ್ಚಿಸುತ್ತಾರೆ. ಹೀಗೆ ಚರ್ಚಿಸುವಾಗ ಮಾನವ ಅಭಿವೃದ್ಧಿ ಮತ್ತು ಭೌತಿಕ ಸಂಪನ್ಯೂಲಗಳ ಅಭಿವೃದ್ಧಿಯನ್ನು ಬಹಳ ಎಚ್ಚರದಿಂದಲೇ ಪ್ರತ್ಯೇಕಿಸುತ್ತಾರೆ. ನಮ್ಮ ಭಾರತ ಸಮಾಜದ ಸುಸ್ಥಿರತೆ ನಿಂತಿರುವುದು ಕೇವಲ ತಲಾದಾಯದ ಮೇಲಲ್ಲ ನಮ್ಮ ಇಡೀ ವ್ಯವಸ್ಥೆಯ ಸಂಕೀರ್ಣತೆಗಳಾದ ಜಾತೀಯತೆ, ಕೋಮುವಾದ, ಅಸ್ಪೃಶ್ಯತೆಗಳನ್ನು ನಾವು ಎಷ್ಟು ಪ್ರಬುದ್ಧರಾಗಿ ನಿಭಾಯುಸುತ್ತೇನೆ ಎನ್ನುವುದರ ಮೇಲೆ ಎಂಬುದು ಅವರ ಖಡಾಖಂಡಿತ ಗ್ರಹಿಕೆ.’ ಚುನಾವಣಾ ರಾಜಕಾರಣದ ಬೆಳವಣಿಗೆಯನ್ನು ಕೂಲಂಕುಶವಾಗಿ ಗಮನಿಸಿರುವ ಹಿರಿಯಜ್ಜ ಬಂಡವಾಳಶಾಹಿ ಮತ್ತು ಜೀತಿವಾದಿಗಳು ಸೃಷ್ಟಿಸಿರುವ ಭ್ರಮೆಗಳನ್ನು ಎಳೆಎಳೆಯಾಗಿ ಬಿಡಿಸಿಡಬಲ್ಲರು. 

ಸಮಕಾಲೀನ ರಾಜಕಾರಣದ ಬಗ್ಗೆ ಭ್ರಮನಿರಸನ ಹೊಂದಿರುವ ಹಿರಿಯಜ್ಜ ಯುವಜನತೆಯ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ. ಪ್ರಭುತ್ವದ ಧಮನದ ವಿರುದ್ಧ ಯುವಜನತೆಯ ಆಕ್ರೋಶಕ್ಕೆ ದನಿಗೂಡಿಸುತ್ತಾ ಜಿಗ್ನೇಶ್ ಮೆವಾನಿ, ಕನ್ನಯ್ಯ ಕುಮಾರ್, ಅಲ್ಫೇಶ್ ಠಾಕೂರ್, ಹಾರ್ಧಿಕ್ ಪಟೇಲ್ ಮುಂತಾದ ಯುವ ನಾಯಕರ ಕುರಿತು ‘ಇಂತಹ ಯುವ ನಾಯಕತ್ವದಲ್ಲಿ ಹೊಸ ಮನ್ವಂತರ ಹುಟ್ಟಿಕೊಳ್ಳಲಿದೆ. ಅವರ ಜೊತೆಗೆ ನಾವೆಲ್ಲಾ ಕೈ ಜೋಡಿಸಬೇಕಿದೆ’ ಎನ್ನುತ್ತಾ ಯುವಜನತೆಯ ನಾಯಕತ್ವದತ್ತ ಆಸೆಗಣ್ಣಿನಿಂದ ನೋಡುತ್ತಾರೆ.  ‘ನೂರರ ನೋಟ’ ಕಳೆದೆರಡು ವರ್ಷಗಳಿಂದ ‘ಗೌರಿ ಮೀಡಿಯಾ ಟ್ರಸ್ಟ್’ನ ನ್ಯಾಯಪಥ ಪತ್ರಿಕೆಯಲ್ಲಿ ಪ್ರಕಟವಾದ ದೊರೆಸ್ವಾಮಿಯವರ ಅಂಕಣ ಬರಹಗಳ ಸಂಕಲನ. 

About the Author

ಎಚ್. ಎಸ್. ದೊರೆಸ್ವಾಮಿ
(10 April 1918)

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಪೂರ್ಣ ಹೆಸರು ಹಾರೋಹಳ್ಳಿ ಶ್ರೀನಿವಾಸಯ್ಯ ದೋರೆಸ್ವಾಮಿ. ಹಾರೋಹಳ್ಳಿಯಲ್ಲಿ ಜನಿಸಿದ ದೊರೆಸ್ವಾಮಿ ತಮ್ಮ 5ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು. ಆ ಬಳಿಕ ಅಜ್ಜನ ಬಳಿ ಬೆಳೆದ ಅವರು ಹಾರೋಹಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಮಹಾತ್ಮ ಗಾಂಧಿ ‘ಮೈ ಅರ್ಲಿ ಲೈಫ್’ ಪುಸ್ತಕವನ್ನು ಓದಿ ಅದರಿಂದ ಪ್ರಭಾವಿತರಾದ ದೊರೆಸ್ವಾಮಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಿದರು. ಕಾಲೇಜು ಶಿಕ್ಷಣದ ಜೊತೆಗೆ ಸ್ವತಂತ್ರ್ಯ ಹೋರಾಟದಲ್ಲೂ ಭಾಗಿಯಾಗುತ್ತಿದ್ದ ದೊರೆಸ್ವಾಮಿ 1942ರ ಹೊತ್ತಿಗೆ ತಮ್ಮ ಬಿ.ಎಸ್.ಸಿ ಪೂರ್ಣಗೊಳಿಸಿ ಉಪನ್ಯಾಸಕ ವೃತ್ತಿ ಆರಂಭಿಸಿದರು. ಅದೇ ವರ್ಷ ...

READ MORE

Related Books