ನೂರೊಂದು ವಚನಗಳು

Author : ಬೇಲೂರು ರಘುನಂದನ್

Pages 105

₹ 100.00




Year of Publication: 2013
Published by: ಶ್ವೇತಪ್ರಿಯ ಪ್ರಕಾಶನ
Address: ಕೊಡಿಗೇಹಳ್ಳಿ ಬೆಂಗಳೂರು

Synopsys

‘ನೂರೊಂದು ವಚನಗಳು’ ಕೃತಿಯು ಬೇಲೂರು ರಘನಂದನ್ ಅವರ ಲೇಖನಗಳ ಸಂಕಲನವಾಗಿದೆ. ಕುವೆಂಪು ಧ್ಯಾನದಲ್ಲೇ ಬರೆದಿರುವ ಕವಿಶೈಲದ ಕವಿತೆಗಳು ಇಲ್ಲಿ ಮುಖ್ಯವೆನಿಸಿದೆ. ಈ ವಚನ ರಚನೆಯ ಆಕರ್ಷಣೆ ಎಷ್ಟು ಗಾಡವಾದದ್ದೆಂದರೆ ಪ್ರತಿಯೊಬ್ಬ ಕವಿಗೂ ಈ ವ್ಯವಹಾರದಲ್ಲಿ ವಿವರಿಸಬೇಕಿಲ್ಲ ಎಂದೆನಿಸುತ್ತದೆ. ಈ ನೂರೊಂದು ವಚನಗಳಲ್ಲಿ ಹಾದು ಹೋಗಿರುವುದನ್ನು ನೆನೆಯಲು ಕುತೂಹಲಕರ ಎನಿಸುತ್ತದೆ. ಹೆತ್ತ ತಾಯಿಯ ಮಹತ್ವ, ಜಾತಿ ಮೀರಿದ ,ಮಠಾಧೀಶರ ಡೌಲು, ಅಪ್ಪಟ ದಾಂಪತ್ಯದ ಅರ್ಥ, ಅಭಿವೃದ್ದಿಯಲ್ಲಿ ಗ್ರಾಮನಗರಗಳ ತಾರತಮ್ಯ, ನಿಜ ಕಾಮದ ರಹಸ್ಯ, ಜನಸ್ತೋಮಕ್ಕೆ ಚೈತನ್ಯ ಕೊಡುವ ಬಗ್ಗೆ, ಮಾತಿನ ಸನ್ನಿಗೆ ಈಡಾಗದಿರಬೇಕಾದ ಎಚ್ಚರ, ಬರೇ ಕಣ್ಣಿಂದ ನೋಡುವ ಜಾಡ್ಯ, ಅಳುವುದನ್ನು ಬಿಟ್ಟು ಹೆಣ್ಣು ಅರಿವಿನ ದಾರಿ ಕಂಡುಕೊಳ್ಳಬೇಕಾದ ಅವಶ್ಯಕತೆ, ಅಂದಂದಿನ ಕೆಲಸ ಅಂದಂದೇ ಮಾಡಬೇಕಾದ ಅಗತ್ಯ, ಬೆವರು ಸುರಿಸಿ ದುಡಿಯುವ ಧನ್ಯತೆ ಹೀಗೆ ನೂರೊಂದು ವಚನಗಳಲ್ಲಿ ಹಲವು ವಿಷಯಗಳನ್ನು ಕುರಿತು ಕಘುನಂದನ್ ವಿಶ್ಲೇಷಿಸಿದ್ದಾರೆ.

About the Author

ಬೇಲೂರು ರಘುನಂದನ್
(21 May 1982)

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು.  ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಪ್ರಕಟಗೊಂಡಿವೆ..  ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ...

READ MORE

Related Books