ನೋಟ-ನಿಲುವು- 4

Author : ಬಸವರಾಜ ಪಿ. ಡೋಣೂರ

Pages 278

₹ 200.00




Year of Publication: 2015
Published by: ಶ್ರೀಅನ್ನಪೂರ್ಣ ಪ್ರಕಾಶನ
Address: #176, 12ನೇ ಮುಖ್ಯರಸ್ತೆ, ಅಗ್ರಹಾರದಾಸರಹಳ್ಳಿ, ಮಾಗಡಿ ಮುಖ್ಯರಸ್ತೆ, ಬೆಂಗಳೂರು- 79

Synopsys

'ನೋಟ-ನಿಲುವು- 4' ಬಸವರಾಜ ಡೋಣೂರರು ಬರೆದ ವ್ಯಕ್ತಿ ಚಿತ್ರಣಗಳ 4ನೇ ಸಂಪುಟ. ತಮ್ಮನ್ನು ಪ್ರಭಾವಿಸಿದ ಮತ್ತು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಮುಖ್ಯ ಪಾತ್ರ ವಹಿಸಿದ ವ್ಯಕ್ತಿಗಳ ಕುರಿತ ಬರಹಗಳಿವೆ. ಹೋರಾಟಗಾರರು, ಬರಹಗಾರರು, ನಟರು, ಶಿಕ್ಷಣ ತಜ್ಞರ ಸಾಧನೆಗಳ ಲೋಕ ಇಲ್ಲಿ ಬಿಚ್ಚಿಕೊಂಡಿದೆ. ಅಲ್ಲದೆ, ಅವರ ಜೀವನದ ಆತ್ಮೀಯ ಪ್ರಸಂಗಗಳು ಕೂಡ ದಾಖಲಾಗಿವೆ.

ರಾಜಕುಮಾರ, ಕುರ್ತಕೋಟಿ, ಲಂಕೇಶ್, ಚಂಪಾ ಕುರಿತ ಲೇಖನಗಳಲ್ಲಿ ಡೋಣೂರರ ಮನಸ್ಸು ತೀವ್ರವಾಗಿ ಮಿಡಿದಿದೆ. ಹಿರಿಯರ ಬೌದ್ಧಿಕ ಎಚ್ಚರ, ಸಾಂಸ್ಕೃತಿಕ ಕಾಳಜಿಗಳನ್ನು ಗುರುತಿಸುತ್ತದೆ. ಪ್ರೀತಿ, ಮೆಚ್ಚುಗೆ, ಆರಾಧನೆ ಧಾಟಿಯ ಈ ಬರಹಗಳು ಆಪ್ತವಾಗಿವೆ. ಕನ್ನಡಿಗರಿಗೆ ಗೊತ್ತಿರದ ಹಲವು ಹೊಸ ಮಗ್ಗುಲುಗಳನ್ನು ಇಲ್ಲಿನ ಬರಹಗಳು ತೋರಿಸಿವೆ. 

About the Author

ಬಸವರಾಜ ಪಿ. ಡೋಣೂರ
(26 July 1969)

ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು.  1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ...

READ MORE

Related Books