ನುಡಿ ಬೆಳಗು

Author : ನಾಗೇಂದ್ರ ಮಸೂತಿ

Pages 94

₹ 80.00




Published by: ಶ್ರೀ ರೇವಣಸಿದ್ದೇಶ್ಚರ್‌ ಪ್ರಕಾಶನ ಕಲಬುರಗಿ

Synopsys

ಈ ಕೃತಿಯಲ್ಲಿ  ಭಾಷೆ, ಶೋಧ, ಸಮೀಕ್ಷೆಗೆ ಸಂಬಂಧಿಸಿದ ಒಟ್ಟು 12  ಲೇಖನಗಳಿವೆ. 10ನೇ ಶತಮಾನ ಕನ್ನಡ ಸಾಹಿತ್ಯ ಸೃಷ್ಟಿಯಾಗಿ ಸುವರ್ಣ ಶಿಖರವನ್ನು ತಲುಪಿದರ ಕುರಿತು  ವಿವರಿಸಲಾಗಿದೆ. ಅಂದಿನ ಭಾಷೆಯ ಪರಿಕಲ್ಪನೆ,  ಪ್ರಕ್ರಿಯೆಗಳನ್ನು ಬದಲಾಗುತ್ತಿರುವ ಭಾಷೆಯ ವಿವರಗಳನ್ನು ದಾ‍ಖಲಿಸುವ ಕಾರ್ಯಗಳನ್ನು ಈ ಕೃತಿಯಲ್ಲಿರುವ ಲೇಖನಗಳು ಕಾರ್ಯನಿರ್ವಹಿಸುತ್ತದೆ. ಹಲ್ಮಿಡಿಶಾಸನ, ಇತರೆ ಶಾಸನಗಳ ಭಾಷೆಯ ಪ್ರಕ್ರಿಯೆಗಳ ವಿವರಗಳನ್ನು ನೀಡಲಾಗಿದೆ. ಪಂಪ, ನಯನಸೇನರ, ಭಾಷೆಯ ವ್ಯಾಖ್ಯಾನ ಹಾಗೂ ಪ್ರಸ್ತುತ  ಕನ್ನಡ ಭಾಷೆಯ ಸೃಷ್ಟಿಗೆ ಕಾರಣವಾದ ಸಂಗತಿಗಳ ಮೇಲೆ ಈ ಕೃತಿಯಲ್ಲಿ ಬೆಳಕನ್ನ ಚೆಲ್ಲಲಾಗಿದೆ. ಸ್ವತಂತ್ರವಾಗಿರುವ ಕನ್ನಡಕ್ಕೆ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ತರುವ ಸಂದರ್ಭಗಳು ಹೆಚ್ಚಾಗುತ್ತಿವೆ ಎಂಬುದರ ಬಗ್ಗೆಯೂ ಕೂಡ ಮಾಹಿತಿಯನ್ನು ಒದಗಿಸಲಾಗಿದೆ.

About the Author

ನಾಗೇಂದ್ರ ಮಸೂತಿ
(20 June 1964)

ಕಲಬುರಗಿ ನಿವಾಸಿಯಾಗಿರುವ ಡಾ. ನಾಗೇಂದ್ರ ಎಸ್. ಮಸೂತಿ ಅವರು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲಬುರಗಿಯ ವಿ.ಜಿ. ಮಹಿಳಾ ಪದವಿ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ.  ಕಲಬುರ್ಗಿ ಕನ್ನಡ; ವರ್ಣನಾತ್ಮಕ ವ್ಯಾಕರಣ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿ.ವಿ. ಪಿಎಚ್.ಡಿ. ನೀಡಿದೆ. ’ಗುರುಸಿದ್ಧ’ ಅಂಕಿತದಲ್ಲಿ ಇವರು ವಚನಗಳನ್ನು ಬರೆಯುತ್ತಾರೆ. ಕಲ್ಯಾಣರಾವ ಪಾಟೀಲ್‌ ಮತ್ತು ಶಿವಶರಣಪ್ಪ ಮೋತಕಪಲ್ಲಿ ಅವರು ಮಸೂತಿ ಅವರ ಜೀವನ- ಸಾಹಿತ್ಯ ಕುರಿತ ’ನುಡಿತೋರಣ’ ಪುಸ್ತಕವನ್ನು ಸಂಪಾದಿಸಿದ್ದಾರೆ. ...

READ MORE

Related Books