ನುಡಿಚಿತ್ರ

Author : ನಿರಂಜನ ವಾನಳ್ಳಿ

Pages 140

₹ 125.00




Year of Publication: 2016
Published by: ವಿಸ್ಮಯ ಪ್ರಕಾಶನ
Address: 366, ನವಿಲು ರಸ್ತೆ, ಕುವೆಂಪು ನಗರ, ಮೈಸೂರು-570023
Phone: 9008798406

Synopsys

ನುಡಿಚಿತ್ರಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕನ್ನಡದಲ್ಲಿ ಮೊದಲ ಪುಸ್ತಕ ಬರೆದವರು ನಿರಂಜನವಾನಳ್ಳಿ. ನುಡಿಚಿತ್ರಕಲೆಗೊಂದು ದಿಕ್ಸೂಚಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ (1993) ಪಡೆದಿದ್ದಾರೆ.  ನಿರಂಜನವಾನಳ್ಳಿಯವರು ವಿಶ್ವವಿದ್ಯಾನಿಲಯದಲ್ಲಿ ನುಡಿಚಿತ್ರದ ಪಾಠ ಮಾಡುತ್ತಿದ್ದಾರೆ ಹಾಗೂ ಕನ್ನಡ ಪತ್ರಿಕೆಗಳಿಗೆ ನುಡಿಚಿತ್ರ ಬರೆಯುತ್ತಿದ್ದಾರೆ. ನುಡಿಚಿತ್ರದ ಸಿದ್ದಾಂತ ಮತ್ತು ಪ್ರಯೋಗಗಳ ಬಗ್ಗೆ ಕನ್ನಡದಲ್ಲಿ ಬರೆದಿದ್ದಾರೆ. ಅವರ ಓದು ಮತ್ತು ಅನುಭವದ ಫಲವೇ ಈ ಕೃತಿ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಪತ್ರಿಕಾ ಬರವಣಿಗೆಯಲ್ಲಿ ಆಸಕ್ತಿ ಇರುವವರಿಗೆಲ್ಲ ಇದು ಮಾರ್ಗದರ್ಶಿ. ಈ ಪುಸ್ತಕದ ವಿಶೇಷವೆಂದರೆ ನುಡಿಚಿತ್ರದ ಬಗ್ಗೆ ಹೇಳುವುದಷ್ಟೇ ಅಲ್ಲ, ತಾವೇ ಬರೆದ ನುಡಿಚಿತ್ರಗಳ ಆಧಾರದಲ್ಲಿ ಬರವಣಿಗೆಯನ್ನು ಕಲಿಸುತ್ತಾರೆ. ಇಲ್ಲಿನ ಎಷ್ಟೋ ನುಡಿಚಿತ್ರಗಳು ವಸ್ತು, ಭಾಷೆ, ಬರವಣಿಗೆಯ ಲಾಲಿತ್ಯದ ದೃಷ್ಟಿಯಿಂದ ಎಲ್ಲ ಕಾಲಕ್ಕೂ ಸಲ್ಲುವ ಅನನ್ಯ ಮಾದರಿಗಳಾಗಿವೆ.

About the Author

ನಿರಂಜನ ವಾನಳ್ಳಿ

ನಿರಂಜನ ವಾನಳ್ಳಿ ಹುಟ್ಟಿದ್ದು(1965) ಉತ್ತರ ಕನ್ನಡ ಜಿಲ್ಲೆಯ 'ವಾನಳ್ಳಿ'ಯಲ್ಲಿ. ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಕವಿ, ವಿಮರ್ಶಕ, ಸಂಶೋಧಕ, ನುಡಿಚಿತ್ರಕಾರ, ಅಂಕಣಕಾರ, ಫ್ರೀಲಾನ್ಸ್ ಪತ್ರಕರ್ತ. ಪ್ರಾಧ್ಯಾಪಕ. ಸದಾ ಒಂದಲ್ಲೊಂದು ಪತ್ರಿಕೆ, ನಿಯತಕಾಲಿಕಗಳಲ್ಲಿ ವೈವಿಧ್ಯಮಯ ಬರಹಗಳನ್ನು ಪ್ರಕಟಿಸುತ್ತಿದ್ದರು.  ದ.ಕ.ಜಿಲ್ಲೆಯ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಗಿದ್ದರು. ಪ್ರಸ್ತುತ ಸಂಗೀತ ವಿಶ್ವವಿದ್ಯಾನಿಲಯದ ಕುಲಸಚಿವರು.  ನಿಯತಕಾಲಿಕ ಪತ್ರಿಕೋದ್ಯಮ, ಪರಿಸರ ಪತ್ರಿಕೋದ್ಯಮ, ಎಲ್ಲರಿಗೂ ಬೇಕು ಸಂವಹನದ ಕಲೆ, ಪತ್ರಿಕಾ ಮಂಡಳಿ ಏನು? ಎತ್ತ? ಸೇರಿದಂತೆ 'ಒಂದು ಅಡಿ ಭೂಮಿ, ಬೊಗಸೆ ತುಂಬ ಪ್ರೀತಿ-ಕವನ ಸಂಕಲನ' ಇದು 31 ನೇ ಕೃತಿ. ಕಂಡಿದ್ದು ಕಾಡಿದ್ದು-ಇವರ ಅಂಕಣ ಬರೆಹ. ಪ್ರೀತಿಗೆಷ್ಟು ಮುಖಗಳು, ಹುಡುಕಾಟದ ಹೊತ್ತು, ಆ ಕ್ಷಣದ ...

READ MORE

Related Books