ನುಡಿ ನೆರಳು

Author : ಶ್ರೀಧರ ಗೌಡರ

Pages 176

₹ 150.00




Year of Publication: 2021
Published by: ಬಸವ ಪ್ರಕಾಶನ
Address: ಶ್ರೀಧರ ಗೌಡರ, ಕೂಡಲಸಂಗಮ -587115, ತಾ.ಹುನಗುಂದ ಜಿ.ಬಾಗಲಕೋಟೆ
Phone: 9480226372

Synopsys

ಲೇಖಕ ಶ್ರೀಧರ ಗೌಡರ ಅವರ ಪ್ರತಿಕಾ ಲೇಖನಗಳ ಕೃತಿ-ನುಡಿ ನರಳು. ಬಸವಣ್ಣನ ವಿದ್ಯಾಭೂಮಿ, ಐಕ್ಯಸ್ಥಳವಾದ ಕೂಡಲಸಂಗಮ ಹಾಗೂ ಸುತ್ತಲ್ಲಿನ ಪರಿಸರದ ಕುರಿತ ಒಟ್ಟು 72 ಲೇಖನಗಳಿವೆ. ಇತಿಹಾಸ, ಶಿಕ್ಷಣ, ಕೃಷಿ, ಕ್ರೀಡೆ, ಉದ್ಯಮ, ಧರ್ಮ ಮತ್ತು ಸಂಸ್ಕತಿ, ವೈಚಾರಿಕತೆ , ಜನಪರ ಕಾಳಜಿ ಹಾಗೂ ಪರಿಸರ ಎಂಬ 9 ಭಾಗಗಳಡಿ ಲೇಖನಗಳನ್ನು ವಿಂಗಡಿಸಿದೆ. ಕೂಡಲಸಂಗಮ ಪರಿಸರ, ಐತಿಹಾಸಿಕ ಅಂಶಗಳ ಮೇಲೆ ಈ ಕೃತಿಯು ಹೆಚ್ಚಾಗಿ ಬೆಳಕು ಚೆಲ್ಲುತ್ತದೆ. ಇಲ್ಲಿಯ ಬಹುತೇಕ ಲೇಖನಗಳು ಪ್ರಜಾವಾಣಿಯಲ್ಲಿ ಪ್ರಕಟಗೊಂಡಿವೆ. 

About the Author

ಶ್ರೀಧರ ಗೌಡರ
(07 May 1982)

ಲೇಖಕ ಶ್ರೀಧರ ಗೌಡರ ಅವರು ಬಾಗಲಕೋಟೆ ಜಿಲ್ಲೆ ಕೂಡಲಸಂಗಮ ದವರು.  1982 ಜುಲೈ 5 ರಂದು ಜನಿಸಿದರು. ಕೂಡಲಸಂಗಮ, ಚಿಮ್ಮಲಗಿ, ಇಲಕಲ್ಲ, ರಾಯಚೂರಗಳಲ್ಲಿ ವಿದ್ಯಾಬ್ಯಾಸ ಮಾಡಿದ್ದು,  ಇತಿಹಾಸ, ಕನ್ನಡ, ರಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯಗಳಲ್ಲಿ ಸ್ನಾತಕೋತರ ಪದವಿ, ಬಿಇಡಿ ಪದವಿ ಪಡೆದಿದ್ದಾರೆ. 2013 ಜುಲೈ 12 ರಿಂದ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹಿರೇಓತಗೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಪ.ಗು ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ತೋಟದಾರ್ಯ ಮಠದ ಸಮಾಜ ಮುಖಿ ಚಳುವಳಿಗಳು : ವಿಶ್ಲೇಷಣಾತ್ಮಕ ...

READ MORE

Related Books