ನುಡಿಹಾರ ೬

Author : ಅರುಣಕುಮಾರ್ ಎಸ್. ಆರ್.

Pages 114

₹ 100.00




Year of Publication: 2014
Published by: ಕಾಂತಾವರ ಕನ್ನಡ ಸಂಘ
Address: ಕಾಂತಾವರ, ಕಾರ್ಕಳ, ಉಡುಪಿ ಜಿಲ್ಲೆ- 574129
Phone: 9900701666

Synopsys

ಜಾಗತೀಕರಣದ ಧಾವಂತದಲ್ಲಿ ಭಾರತದ ಹಲವಾರು ಹಳ್ಳಿಗಳು ಮೈಕೊಡವಿ ಏಳುವುದಕ್ಕೂ ಸಾಧ್ಯವಾಗದಿರುವಾಗ, ಒಂದು ಕಾಲಕ್ಕೆ ಕುಗ್ರಾಮವೆನಿಸಿಕೊಂಡಿದ್ದ ಕಾರ್ಕಳ ತಾಲೂಕಿನ ಕಾಂತಾವರ ತನ್ನ ಚಿಂತನೆಯ ಹರಹಿನೊಂದಿಗೆ ಜಾಗತೀಕರಣಕ್ಕೆ ಸವಾಲೊಡ್ಡುವ ಬೌದ್ದಿಕ ಚೈತನ್ಯವನ್ನು, ವಿಕಾಸವನ್ನು ಹೊಂದಿತ್ತು ಎಂದರೆ ಯಾರೂ ಅಲ್ಲಗಳೆಯಲಾರರು. ಇದಕ್ಕೆ ಕಾರಣ ಇಲ್ಲಿನ ಕನ್ನಡ ಸಂಘ, ಇದರಿಂದಾಗಿ ಈ ಊರಿನ ನರನಾಡಿಗಳಲ್ಲಿ ಕನ್ನಡ ಕಂಪು ಹರಿದಾಡುತ್ತಿರುವುದು.

ಇಂದು ಕಾಂತಾವರವನ್ನು ಪುಟ್ಟಹಳ್ಳಿ ಎಂದು ಪಕ್ಕಕ್ಕೆ ಸರಿಸಿ ಬಿಡುವಂತಿಲ್ಲ. ಆ ಬಗೆಯಲ್ಲಿ ಕನ್ನಡಸಂಘ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. 'ನುಡಿನಮನ' ಕಾರ್ಯಕ್ರಮದ ಅಕ್ಷರರೂಪದ ಹೊತ್ತಗೆ 'ನುಡಿಹಾರ'. ಇಂತಹ ನುಡಿಹಾರಕ್ಕೆ ಆರನೇ ಕುಸುಮದ ಸೇರ್ಪಡೆ -'ನುಡಿಹಾರ 6'. 'ಪುಸ್ತಕ ಪ್ರಕಟಣೆ' ಕನ್ನಡ ಸಂಘದ ಪ್ರಾತಿನಿಧಿಕ ಕೆಲಸಗಳಲ್ಲಿ ಒಂದು. 2008ರಿಂದ ಕನ್ನಡ ಸಂಘವು ಪ್ರತಿ ತಿಂಗಳು 'ನುಡಿನಮನ' ಎಂಬ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಅದರಲ್ಲಿ ರೂಪುಗೊಂಡ ಉಪನ್ಯಾಸಗಳೆಲ್ಲ ಬರಹದ ರೂಪ ಪಡೆದು “ನುಡಿಹಾರ’ವಾಗಿವೆ. ವಿವಿಧ ವಿಷಯಗಳಿಂದ ಓದುಗರನ್ನು ತತ್ಸಂಬಂಧೀ ಮಾಹಿತಿಗಳ ಕಡೆಗೆ ಆಕರ್ಷಿಸುವುದರೊಂದಿಗೆ ಅವುಗಳ ಆಳ, ವ್ಯಾಪ್ತಿಯನ್ನು ಪರಿಚಯಿಸುವ ಉದ್ದೇಶದಿಂದಲೇ ನುಡಿಹಾರದ ಮಾಲಿಕೆ ಕಾರ್ಯತತ್ಪರವಾಗಿದೆ. 

About the Author

ಅರುಣಕುಮಾರ್ ಎಸ್. ಆರ್.

ಅರುಣಕುಮಾರ್ ಎಸ್.ಆರ್. ಅವರು ಮೂಲತಃ ಧರ್ಮಸ್ಥಳ ಸಮೀಪದ ಕನ್ಯಾಡಿಯವರು. ಉಜಿರೆ ಮತ್ತು ಮೈಸೂರಿನಲ್ಲಿ ಶಿಕ್ಷಣ ಪಡೆದು, ಕನ್ನಡ ಮತ್ತು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಳುನಾಡಿನ ಸಿರಿ ಆಲಡೆಗಳ ಅಧ್ಯಯನದೊಂದಿಗೆ ಪಿ.ಹೆಚ್.ಡಿ ಪಡೆದಿದ್ದಾರೆ. ಜಾನಪದದಷ್ಟೇ ಶಿಷ್ಟಸಾಹಿತ್ಯದಲ್ಲೂ ಗಂಭೀರ ಅಧ್ಯಯನ ಆಸಕ್ತರು. ಮುಲ್ಕಿಯ ವಿಜಯ ಕಾಲೇಜು, ಉಡುಪಿಯ ಎಂ.ಜಿ.ಎಂ. ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜು, ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲೂ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಜಾವಾಣಿಯಲ್ಲಿ 2 ವರ್ಷ ಕಾಲ  'ಸಿರಿದೊಂಪ' ಅಂಕಣ ಬರೆದಿದ್ದಾರೆ. ಉಡುಪಿಯಲ್ಲಿ ಜರುಗಿದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ...

READ MORE

Related Books