ನುಡಿಹಾರ-೭

Author : ಅರುಣಕುಮಾರ್ ಎಸ್. ಆರ್.

Pages 134

₹ 120.00




Year of Publication: 2015
Published by: ಕಾಂತಾವರ ಕನ್ನಡ ಸಂಘ
Address: ಕಾಂತಾವರ, ಕಾರ್ಕಳ, ಉಡುಪಿ ಜಿಲ್ಲೆ- 574129
Phone: 9900701666

Synopsys

‘ನುಡಿಹಾರ -7’ ಕಾಂತಾವರ ಕನ್ನಡ ಸಂಘದಿಂದ ಪ್ರಕಟವಾದ ಕೃತಿ. ಸಾಹಿತ್ಯ ಸಂಸ್ಕೃತಿ ಕುರಿತ ಮಹಿಳಾ ಚಿಂತನ ಬರಹಗಳಿವೆ. ಕಾಂತಾವರ ಕನ್ನಡ ಸಂಘವು 2013ರಿಂದೀಚೆಗೆ ಎರಡು ವರ್ಷಕ್ಕೊಮ್ಮೆ ನಿರ್ದಿಷ್ಟವಾದ ವಸ್ತು ವಿಷಯವನ್ನು ಆರಿಸಿಕೊಂಡು ಅದನ್ನು ವಿಸ್ತರಿಸುವ ಸಲುವಾಗಿ ಕೃತಿ ಸಂಪಾದಿಸಿ ಪ್ರಕಟಿಸುವ ಕಾರ್ಯಮಾಡುತ್ತಿದೆ. ಅದರ ಭಾಗವಾಗಿ ಪ್ರಕಟವಾದ ಏಳನೇ ಕೃತಿ ನುಡಿಹಾರ-7.

ಕೃತಿಯಲ್ಲಿ ಅನುಪಮಾ ನಿರಂಜನ ಅವರ ಕಾದಂಬರಿ-ಎಳೆ” ಶ್ರೀಮತಿ ಪರಮೇಶ್ವರಿ ಲೋಕೇಶ್ವರ್‌, ಫಣಿಯಮ್ಮ- ಎ.ಪಿ. ಮಾಲತಿ, ಸೀತೆ-ರಾಮ-ರಾವಣ' ಕಾದಂಬರಿಯ ಮರು ಓದು ಶ್ರೀಮತಿ ಬಿ.ಎಂ.ರೋಹಿಣಿ, ಲಕ್ಷ್ಮಿ ಕುಂಜತ್ತೂರು ಎಂಬ ಎಲೆಯಮರೆಯ ಹೂ ಅವರ ಕಾದಂಬರಿ ಸರಣಿಯ ಕುರಿತು ಮಹೇಶ್ವರಿ, ಕುಸುಮಾಕರ ದೇವರಗಣ್ಣೂರ ಅವರ ನಾಲ್ಕನೆಯ ಆಯಾಮ ಒಂದು ಸಮೀಕ್ಷೆ- ಪೂರ್ಣಿಮಾ ಸುಧಾಕರ, ಸಂಧ್ಯಾರಾಗ ತರುವ ದೈವೀಕ ಪರಿವರ್ತನೆ- ಜ್ಯೋತಿ ಗುರುಪ್ರಸಾದ್, ಇಂದಿರೆ ಅಥವಾ ನಿರ್ಭಾಗ್ಯವನಿತೆ- ಶಶಿಕಲಾ ಚೊಕ್ಕಾಡಿ ಕಾಲಾವಂತೆಯ ಅಂತರಂಗವನ್ನು ತೆರೆದಿಡುವ ಕಾರಂತರ 'ಮೈಮನಗಳ ಸುಳಿಯಲ್ಲಿ'- ಡಾ. ಪಾರ್ವತಿ ಜಿ. ಐತಾಳ್, ಶಂಕರ ಮೊಕಾಶಿ ಪುಣೇಕರ ಅವರ ಗಂಗವ್ವ ಗಂಗಾಮಾಯಿ ಮರು ಓದು- ಡಾ. ಶುಭಾ ಮರವಂತೆ, ಸೇರಿದಂತೆ ಹಲವು ಸಾಹಿತ್ಯ ಸಾಂಸ್ಕೃತಿಕ ಕೃತಿಗಳ ವಿಶ್ಲೇಷಣೆಗಳಿವೆ.

About the Author

ಅರುಣಕುಮಾರ್ ಎಸ್. ಆರ್.

ಅರುಣಕುಮಾರ್ ಎಸ್.ಆರ್. ಅವರು ಮೂಲತಃ ಧರ್ಮಸ್ಥಳ ಸಮೀಪದ ಕನ್ಯಾಡಿಯವರು. ಉಜಿರೆ ಮತ್ತು ಮೈಸೂರಿನಲ್ಲಿ ಶಿಕ್ಷಣ ಪಡೆದು, ಕನ್ನಡ ಮತ್ತು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಳುನಾಡಿನ ಸಿರಿ ಆಲಡೆಗಳ ಅಧ್ಯಯನದೊಂದಿಗೆ ಪಿ.ಹೆಚ್.ಡಿ ಪಡೆದಿದ್ದಾರೆ. ಜಾನಪದದಷ್ಟೇ ಶಿಷ್ಟಸಾಹಿತ್ಯದಲ್ಲೂ ಗಂಭೀರ ಅಧ್ಯಯನ ಆಸಕ್ತರು. ಮುಲ್ಕಿಯ ವಿಜಯ ಕಾಲೇಜು, ಉಡುಪಿಯ ಎಂ.ಜಿ.ಎಂ. ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜು, ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲೂ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಜಾವಾಣಿಯಲ್ಲಿ 2 ವರ್ಷ ಕಾಲ  'ಸಿರಿದೊಂಪ' ಅಂಕಣ ಬರೆದಿದ್ದಾರೆ. ಉಡುಪಿಯಲ್ಲಿ ಜರುಗಿದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ...

READ MORE

Related Books