ನುಡಿಹಾರ-೮

Author : ಅರುಣಕುಮಾರ್ ಎಸ್. ಆರ್.

Pages 154

₹ 150.00




Year of Publication: 2017
Published by: ಕಾಂತಾವರ ಕನ್ನಡ ಸಂಘ
Address: ಕಾಂತಾವರ, ಕಾರ್ಕಳ, ಉಡುಪಿ ಜಿಲ್ಲೆ - 574129
Phone: 9900701666

Synopsys

ಕಾಂತಾವರ ಕನ್ನಡ ಸಂಘ ಹಲವು ವರ್ಷಗಳಿಂದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಅದರ ಭಾಗವಾಗಿ ನುಡಿಹಾರ ಸರಣಿ ಕೃತಿಗಳನ್ನು ಪ್ರಕಟಿಸುತ್ತಾ ಬಂದಿದೆ. ಆ ಸರಣಿ ಕೃತಿಗಳ ಸಾಲಿನಲ್ಲಿ ಪ್ರಕಟವಾದ ಕೃತಿ ’ನುಡಿಹಾರ-”.

ನುಡಿಹಾರ ಸರಣಿ ಕೃತಿಗಳನ್ನು ಸಂಪಾದಿಸಿರುವ ಲೇಖಕ ಅರುಣಕುಮಾರ್ ಎಸ್.ಆರ್, ಕೃತಿಯಲ್ಲಿ ಗೋಪಾಲಕೃಷ್ಣ ಅಡಿಗ- ವ್ಯಕ್ತಿ ಮತ್ತು ಕಾವ್ಯ- ಎಸ್. ದಿವಾಕರ್, ಬೇಂದ್ರೆಯವರ ‘ಪ್ರೀತಿ’ ಭಾವಗೀತೆಯಾದ ಬಗೆ- ಶ್ಯಾಮಸುಂದರ ಬಿದರಕುಂದಿ, ಕುವೆಂಪು ಕಾವ್ಯದ ಮರು ಓದು- ಡಾ. ಶ್ರೀಕಂಠ ಕೂಡಿಗಿ, ನಿಸಾರ್ ಅಹಮದ್ ಅವರ ಕವನಗಳ ಮರು ಓದು- ನಾ. ದಾಮೋದರ ಶೆಟ್ಟಿ, ಚಂಪಾ ಎಂಬ ಕಿಡಿ- ಪ್ರೊ. ಧರಣೇಂದ್ರ ಕುರಕರಿ, ಸಿದ್ಧಲಿಂಗಯ್ಯನವರ ಕಾವ್ಯದ ಹೊಸ ಓದು- ಡಾ. ಟಿ.ಯಲ್ಲಪ್ಪ, ತೀವ್ರ ಭಾವ ಶಕ್ತಿಯನ್ನೇ ನೆಚ್ಚಿದ ಕಾವ್ಯ- ಗಂಗಾಧರ ಚಿತ್ತಾಲರ ಸಮಗ್ರ ಕಾವ್ಯದ ಹೊಸ ಓದು- ಸುಬ್ರಾಯ ಚೊಕ್ಕಾಡಿ, ಕೆ.ಎಸ್. ನರಸಿಂಹಸ್ವಾಮಿ - ಹೊಸ ಓದು- ಡಾ.ಟಿ.ಎ. ಬಾಲಕೃಷ್ಣ ಅಡಿಗ ಸೇರಿದಂತೆ ಹಲವು ಮಹತ್ವದ ಲೇಖಕರ ಕೃತಿ ಮತ್ತು ವಿಚಾರಗಳ ಬಗ್ಗೆ ಹಿರಿಯ ಲೇಖಕರ ಅಭಿಪ್ರಾಯ ವಿಶ್ಲೇಷಣೆಗಳಿವೆ.

About the Author

ಅರುಣಕುಮಾರ್ ಎಸ್. ಆರ್.

ಅರುಣಕುಮಾರ್ ಎಸ್.ಆರ್. ಅವರು ಮೂಲತಃ ಧರ್ಮಸ್ಥಳ ಸಮೀಪದ ಕನ್ಯಾಡಿಯವರು. ಉಜಿರೆ ಮತ್ತು ಮೈಸೂರಿನಲ್ಲಿ ಶಿಕ್ಷಣ ಪಡೆದು, ಕನ್ನಡ ಮತ್ತು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಳುನಾಡಿನ ಸಿರಿ ಆಲಡೆಗಳ ಅಧ್ಯಯನದೊಂದಿಗೆ ಪಿ.ಹೆಚ್.ಡಿ ಪಡೆದಿದ್ದಾರೆ. ಜಾನಪದದಷ್ಟೇ ಶಿಷ್ಟಸಾಹಿತ್ಯದಲ್ಲೂ ಗಂಭೀರ ಅಧ್ಯಯನ ಆಸಕ್ತರು. ಮುಲ್ಕಿಯ ವಿಜಯ ಕಾಲೇಜು, ಉಡುಪಿಯ ಎಂ.ಜಿ.ಎಂ. ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜು, ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲೂ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಜಾವಾಣಿಯಲ್ಲಿ 2 ವರ್ಷ ಕಾಲ  'ಸಿರಿದೊಂಪ' ಅಂಕಣ ಬರೆದಿದ್ದಾರೆ. ಉಡುಪಿಯಲ್ಲಿ ಜರುಗಿದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ...

READ MORE

Related Books