ನುಡಿಹಾರ- ೯

Author : ಅರುಣಕುಮಾರ್ ಎಸ್. ಆರ್.

Pages 134

₹ 120.00




Year of Publication: 2015
Published by: ಕಾಂತಾವರ ಕನ್ನಡ ಸಂಘ
Address: ಕಾಂತಾವರ, ಕಾರ್ಕಳ, ಉಡುಪಿ ಜಿಲ್ಲೆ - 574129
Phone: 9900701666

Synopsys

ಕಾಂತಾವರ ಕನ್ನಡ ಸಂಘದ ನುಡಿಹಾರ ಸರಣಿ ಕೃತಿಯ ಒಂಬತ್ತನೇ ಕೃತಿ ನುಡಿಹಾರ-9. ಕಾಲದಿಂದ ಕಾಲಕ್ಕೆ ನಡೆಯಬೇಕಾದ ಈ ಮರು ಓದು ಸಮಕಾಲೀನ ದೃಷ್ಟಿಕೋನದ ಹೂರಣದಿಂದಾಗಿರುತ್ತದೆ. ಕನ್ನಡ ಕಾವ್ಯದ ನಡೆಯಲ್ಲಿ ಅಂದಂದಿನ ಕೊಡುಕೊಳ್ಳುವಿಕೆಯನ್ನು ಇಂದಿನ ಓದುಗ ಗ್ರಹಿಸುವ ರೀತಿ ಬೇರೆಯೇ ಆಗಿರುತ್ತದೆ. ಇಂತಹ ಓದು ಸಮಕಾಲೀನ ಸಂದರ್ಭಗಳಲ್ಲಿ ಆಯಾ ಕೃತಿಗಳನ್ನು ಮತ್ತೆ ಓದುಗರೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಇಂಥಹ ವಿಶೇಷ ಓದನ್ನು ಈ ಕೃತಿ ಮರುಸೃಷ್ಟಿಸುತ್ತದೆ.

ಕೃತಿಯಲ್ಲಿ ಬೆಟಗೇರಿ ಕೃಷ್ಣಶರ್ಮರ ಕಾವ್ಯದ ಹೊಸ ಓದು- ಡಾ.ಬಿ.ಪಿ. ಸಂಪತ್ ಕುಮಾರ್, ಮಂಜೇಶ್ವರ ಗೋವಿಂದ ಪೈ ಅವರ ಕಾವ್ಯದ ಮರು ಓದು ಸದಾನಂದ ಪೆರ್ಲ, ಲಂಕೇಶರ ಕವಿತೆಗಳು- ಡಾ. ರಾಜಶೇಖರ ಹಳೆಮನೆ, ಹೆಚ್.ಎಸ್. ವೆಂಕಟೇಶಮೂರ್ತಿಯವರ ಕಾವ್ಯದ ಹೊಸ ಓದು- ರಾಘವೇಂದ್ರ ಪಾಟೀಲ, ಡಾ. ಜಿ.ಎಸ್.ಶಿವರುದ್ರಪ್ಪ ಅವರ ಕಾವ್ಯದ ಮರು ಓದು- ಡಾ. ಸುಲತಾ ವಿದ್ಯಾಧರ್, ಮೂಡಬಿದ್ರೆ, ಡಾ. ಚೆನ್ನವೀರ ಕಣವಿ ಅವರ ಕಾವ್ಯದ ಮರು ಓದು- ಶ್ರೀಮತಿ ಸುಧಾರಾಣಿ, ಸು.ರಂ. ಎಕ್ಕುಂಡಿ ಅವರ ಕಾವ್ಯದ ಮರು ಓದು- ಸತ್ಯನಾರಾಯಣ ಮಲ್ಲಿಪಟ್ಲ, ಪೇಜಾವರ ಸದಾಶಿವರಾವ್ ಅವರ ಕಾವ್ಯದ ಮರು ಓದು- ಡಾ. ಆರ್. ನರಸಿಂಹಮೂರ್ತಿ ಮಂಗಳೂರು, ಡಾ. ಎ.ಕೆ. ರಾಮಾನುಜನ್ ಅವರ ಕಾವ್ಯಾಭಿವ್ಯಕ್ತಿ- ಡಾ. ವೇಣುಗೋಪಾಲ ಶೆಟ್ಟಿ, ಸೇರಿದಂತೆ ಹಲವು ಮಹತ್ವದ ಕೃತಿಗಳ ಮರು ಓದು, ವಿಶ್ಲೇಷಣೆಗಳಿವೆ.

About the Author

ಅರುಣಕುಮಾರ್ ಎಸ್. ಆರ್.

ಅರುಣಕುಮಾರ್ ಎಸ್.ಆರ್. ಅವರು ಮೂಲತಃ ಧರ್ಮಸ್ಥಳ ಸಮೀಪದ ಕನ್ಯಾಡಿಯವರು. ಉಜಿರೆ ಮತ್ತು ಮೈಸೂರಿನಲ್ಲಿ ಶಿಕ್ಷಣ ಪಡೆದು, ಕನ್ನಡ ಮತ್ತು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಳುನಾಡಿನ ಸಿರಿ ಆಲಡೆಗಳ ಅಧ್ಯಯನದೊಂದಿಗೆ ಪಿ.ಹೆಚ್.ಡಿ ಪಡೆದಿದ್ದಾರೆ. ಜಾನಪದದಷ್ಟೇ ಶಿಷ್ಟಸಾಹಿತ್ಯದಲ್ಲೂ ಗಂಭೀರ ಅಧ್ಯಯನ ಆಸಕ್ತರು. ಮುಲ್ಕಿಯ ವಿಜಯ ಕಾಲೇಜು, ಉಡುಪಿಯ ಎಂ.ಜಿ.ಎಂ. ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜು, ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲೂ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಜಾವಾಣಿಯಲ್ಲಿ 2 ವರ್ಷ ಕಾಲ  'ಸಿರಿದೊಂಪ' ಅಂಕಣ ಬರೆದಿದ್ದಾರೆ. ಉಡುಪಿಯಲ್ಲಿ ಜರುಗಿದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ...

READ MORE

Related Books