ನುಡಿಯ ಬೆಡಗು

Author : ಚಂದ್ರಕಾಂತ ಕರದಳ್ಳಿ

Pages 80

₹ 50.00




Year of Publication: 20014
Published by: ಬಸವ ಪ್ರಕಾಶನ
Address: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು ಮುಖ್ಯಬೀದಿ, ಕಲಬುರಗಿ - 585 101
Phone: 08472-222431 94498 25431

Synopsys

'ನುಡಿಯ ಬೆಡಗು'ವಿನಲ್ಲಿ ಚಂದ್ರಕಾಂತ್ ಕರದಳ್ಳಿಯವರು ಬರೆದ, ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಪ್ರಸಾರಗೊಂಡ ಮೂವತ್ತೈದು ಚಿಂತನಾ ಲೇಖನಗಳನ್ನು ಒಟ್ಟುಗೂಡಿಸಲಾಗಿದೆ. ನಾಡು, ನುಡಿ, ಜೀವನಪ್ರೀತಿ, ಕೌಟುಂಬಿಕ ಸಂಬಂಧ, ದೇಶಭಕ್ತಿ, ಮಾನವೀಯ ಮೌಲ್ಯಗಳು- ಹೀಗೆ ಮೌಲಿಕ ಚಿಂತನೆಗಳು ಕರದಳ್ಳಿಯವರ ಪ್ರತಿಯೊಂದು ಲೇಖನಗಳಲ್ಲೂ ಮೂಡಿ ಬಂದಿವೆ. ಬರಹ ಸರಳ ಭಾಷೆಯಲ್ಲಿದ್ದರೂ ಅವುಗಳು ಧ್ವನಿಸುವ ವಿಚಾರಗಳಿಂದಾಗಿ ಓದುಗರಿಗೆ ಹೊಸ ಅನುಭವವನ್ನು ಕೊಡುತ್ತವೆ.

About the Author

ಚಂದ್ರಕಾಂತ ಕರದಳ್ಳಿ
(25 August 1952)

ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ಚಂದ್ರಕಾಂತ ಕರದಳ್ಳಿಯವರು‌ ಯಾದಗಿರಿ ಜಿಲ್ಲೆಯ ಶಹಾಪುರದವರು.‌ 1952ರ ಆಗಸ್ಟ್ 25ರಂದು ಜನಿಸಿದರು. ತಂದೆ ರಾಚಯ್ಯಸ್ವಾಮಿ ಕರದಳ್ಳಿ. ತಾಯಿ ಮುರಿಗೆಮ್ಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (1985) ಪದವಿ‌ ಪಡೆದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಪ್ರೌಢಶಾಲಾ ಶಿಕ್ಷಕರಾದರು. 2012ರಲ್ಲಿ ನಿವೃತ್ತರಾದರು.  ಮಕ್ಕಳ ಕತೆ, ಕಾದಂಬರಿ, ಕಾವ್ಯ ರಚಿಸಿರುವ ಕರದಳ್ಳಿ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ...

READ MORE

Related Books