ನುಡಿಯೆಂಬುದು ಉರಿಯ ಕೆಂಡ

Author : ಶಶಿಕಲಾಗೌಡ ಎಂ. ಎಸ್.

Pages 350

₹ 220.00




Year of Publication: 2018
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ನಾಡು ಕಂಡ ಅಪರೂಪದ ರಾಜಕಾರಣಿ ಎ.ಕೆ. ಸುಬ್ಬಯ್ಯನವರ ಶಾಸನಸಭೆಯ ಭಾಷಣ ಮತ್ತು ಚರ್ಚೆಯ ಪುಸ್ತಕ ರೂಪ ’ನುಡಿಯೆಂಬುದು ಉರಿವ ಕೆಂಡ’. ಪ್ರಾಮಾಣಿಕತೆಯ ಮತ್ತೊಂದು ಹೆಸರಾದ ಇವರು ಸದನದಲ್ಲಿ ನಿಂತರು ಎಂದರೆ ಗುಡುಗು-ಸಿಡಿಲು ಕಟ್ಟಿಟ್ಟ ಬುತ್ತಿ. ತಮ್ಮ ನಿಷ್ಠುರ ನಿಲುವಿನ ಕಾರಣಕ್ಕಾಗಿಯೇ ಪ್ರಸ್ತುತ ರಾಜಕಾರಣಕ್ಕೆ ಅಪವಾದದಂತೆಯೂ ಇದ್ದಾರೆ. ಅವರು ಖಂಡತುಂಡವಾದ ಮಾತಿನ ತುಣುಕೊಂದು ಹೀಗಿದೆ: 

"ಸರ್ಕಾರ ನಡೆಸಿದ ನಂತರವೂ ಜನರ ಸುಧಾರಣೆಯಾಗಿಲ್ಲ ಅಂದರೆ ಅದಕ್ಕೆ ಅಧಿಕಾರದಲ್ಲಿ ಇದ್ದವರೇ ಕಾರಣ ಹೊರತು ಬೇರೆ ಯಾರೂ ಅಲ್ಲ. ಈ ಹಣ ಜನರಿಗೆ ಮುಟ್ಟಿದ್ದರೆ ಅವರ ಜೀವನ ಈ ರೀತಿ ಇರಬೇಕಾದ ಅವಶ್ಯಕತೆ ಇರಲಿಲ್ಲ. ಅವರಿಗೆ ಮೋಸ ಮಾಡಿ, ಅವರ ಆಹ್ವಾನದ ದುರುಪಯೋಗ ಪಡೆದು, ಅವರ ಬಲಹೀನತೆಯ ದುರುಪಯೋಗ ಮಾಡಿ, ಪ್ರತಿಭಟನೆ ಮಾಡುವುದಕ್ಕೆ ಸಾಧ್ಯವಾಗಿಲ್ಲದವರ ಅನುಕೂಲ ಪಡೆದು ಅಧಿಕಾರ ಮಾಡಿದ ಜನ ಪಟ್ಟಭದ್ರ ಹಿತಾಸಕ್ತಿಗಳ ದೃಷ್ಟಿಯಿಂದ ಅವರಿಂದ ಓಟ್ ತೆಗೆದುಕೊಳ್ಳಕ್ಕೆ ಎಷ್ಟು ಬೇಕೋ ಅಷ್ಟು ಕಾರ್ಯಕ್ರಮ ಬಿಟ್ಟರೆ ನಿಖರವಾಗಿಯೂ ಇವರ ಸುಧಾರಣೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ"

ಸುಬ್ಬಯ್ಯನವರ ಪಾಂಡಿತ್ಯವನ್ನೂ, ಜನಪರತೆಯನ್ನೂ ನೇರವಾಗಿ ಅರಿಯಲು ಸಾಧನವಾಗಬಲ್ಲ ಕೃತಿ ಇದು. 

About the Author

ಶಶಿಕಲಾಗೌಡ ಎಂ. ಎಸ್.
(12 October 1969)

ಶಶಿಕಲಾಗೌಡ ಎಂ.ಎಸ್., ಎಂ.ಎ., ರಾಷ್ಟಭಾಷಾ ಪ್ರವೀಣ್, ಡಿ.ಫಾರ್ಮಾ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ 12-10-1969ರಂದು ಜನಿಸಿದರು. ಇವರ ಕೃತಿಗಳು: ಎ.ಕೆ. ಸುಬ್ಬಯ್ಯ (ಜೀವನ ಚರಿತ್ರೆ-ಪ್ರತಿಭಾವಂತ ಸಂಸದೀಯ ಪಟುಗಳ ಮಾಲಿಕೆ) ಗಾಂಧಾರಿ (ಕೋಮಲ್ ಗಾಂಧಾರ್‌ ನಾಟಕದ ಅನುವಾದ ಹಿಂದಿಯಿಂದ) ಕೃತಿ ಪ್ರಕಟವಾಗಿದೆ. ಕನ್ನಡದಿಂದ ಹಿಂದಿಗೆ, ಹಿಂದಿಯಿಂದ ಕನ್ನಡಕ್ಕೆ ಕನ್ನಡದಿಂದ ಇಂಗ್ಲಿಷಿಗೆ ಕೃತಿಗಳ ಅನುವಾದ ಕೆಲಸವನ್ನು ಮಾಡಿದ್ದಾರೆ.  ವಸಂತ ಬಿರುಗಾಳಿ ಎಂಬ ಅಸ್ಸಾಮಿ ಮೂಲದ ಕನ್ನಡ ಅನುವಾದ ನಾಟಕ ರಾಷ್ಟ್ರೀಯ ನಾಟಕ ಮಾಲಿಕೆಯಲ್ಲಿ ಪ್ರಸಾರವಾಗಿದೆ. ನಾಟಕ ರಚನೆ, ಅಭಿನಯ, ವಸ್ತ್ರವಿನ್ಯಾಸ ಇತ್ಯಾದಿಯಲ್ಲಿ ಸಕ್ರಿಯರು. ಚಂದನವಾಹಿನಿಯ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 1998ರಿಂದಲೂ ರಾಷ್ಟ್ರ ...

READ MORE

Related Books