ಒಡಲೊಳಗಣ ಕಡೆಗೋಲು

Author : ಎಸ್‌. ಬಿ. ಜೋಗುರ

Pages 300

₹ 240.00




Year of Publication: 2016
Published by: ಅಂಬಾರಿ ಪ್ರಕಾಶನ
Address: ನಂ-77, ಕುಮಾರವ್ಯಾಸ ರಸ್ತೆ. ಐಶ್ಚರ್ಯ ನಗರ, ಕುವೆಂಪು ನಗರ, ಎನ್. ಬ್ಲಾಕ್, ಮೈಸೂರು- 570023
Phone: 9845890353

Synopsys

‘ಒಡಲೊಳಗಣ ಕಡೆಗೋಲು’ ಲೇಖಕ ಡಾ. ಎಸ್. ಬಿ. ಜೋಗುರ ಅವರ ಲೇಖನ ಸಂಕಲನ. ಇಲ್ಲಿ ಆಯಾ ಸಂದರ್ಭಕ್ಕೆ ಹೊಳೆದ, ಕಾಡಿದ ವಿಷಯಗಳನ್ನು ಹೆಕ್ಕಿ ಬರೆದ ಲೇಖನಗಳಿವೆ. ಎಲ್ಲ ಲೇಖನಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ ಎಂದು ಹೇಳಲಾಗದಿದ್ದರೂ ಬಹುತೇಕ ಲೇಖನಗಳು ಸಕಾಲಿಕ ಎನ್ನುವಂತಿವೆ.

ತಮ್ಮ ಸುತ್ತಮುತ್ತಲಿನ ಹತ್ತಾರು ಸಂಗತಿಗಳುನ್ನು ತಮ್ಮದೇ ರೀತಿಯಲ್ಲಿ ಲೇಖಕರು ದಾಖಲಿಸಿದ್ದಾರೆ. ಭಾರತೀಯ ನೊರೆಯೆದ್ದು ಹೆಪ್ಪುಗಟ್ಟುವ ಮುನ್ನವೇ ಅಲ್ಲಿ ಕಡೆಗೋಲು ಇಳಿಸಿ ಹದವಾಗಿ ಕಡೆದರೆ ಮೂಡುವ ಬೆಳಕಿಗೆ ಮುಖ ಒಡ್ಡುವುದರಲ್ಲಿಯೇ ಅಗಾಧವೆನ್ನುವ ಲೇಖಕರು ತಮಗೆ ದಕ್ಕಿದ ವಿಚಾರಗಳನ್ನು ತಮ್ಮದೇ ದಾಟಿಯಲ್ಲಿ ವಿಶ್ಲೇಷಿಸಿದ್ದಾರೆ.

About the Author

ಎಸ್‌. ಬಿ. ಜೋಗುರ

ವೈಚಾರಿಕ ಬರಹಗಾರ ಎಸ್‌. ಬಿ. ಜೋಗುರ ಅವರುಕಥೆಗಳನ್ನೂ, ಕಾದಂಬರಿ, ಲೇಖನಗಳನ್ನು ಬರೆದಿದ್ದಾರೆ.ಇವರ  ನಿದರ್ಶನ' ಕಾದಂಬರಿಯು ಒಂದು ಕುಟುಂಬದ ಮೂರು ತಲೆಮಾರಿನ ಬದುಕನ್ನು ಕೇವಲ 147 ಪುಟಗಳಲ್ಲಿ ಅನಾವರಣಗೊಳಿಸಿದ ಕಾದಂಬರಿಯಾಗಿದೆ. ಅಸ್ಪಶ್ಯತೆಯೆಂಬ ವಿಷ ಕೂಸಿನ ಸುತ್ತ, ಓಡಿ ಹೋದ ಹುಡುಗ ಮರಳಿ ಬಂದ ಕಥೆ, ‘ಅಂತರಾಳದ ಮಾತು, ಇರದೇ ತೋರುವ ಬಗೆ’ ಅವರ ಮತ್ತೆರಡು ಕೃತಿಗಳು.  ಕತೆಗಾರ ಮತ್ತು ಪತ್ರಕರ್ತ ಎಸ್. ಬಿ. ಜೋಗುರ ಅವರು ಮೂಲತಃ ಸಿಂದಗಿಯವರು. ಧಾರವಾಡದಲ್ಲಿ ನೆಲೆಸಿದ್ದರು. ‘ಮುಗ್ಗಲು ಮನಸಿನ ಪದರು’ ಅವರ ಕತಾ ಸಂಕಲನ. ಸಿಂದಗಿಯಲ್ಲಿ ‘ಜೋಗುರ ಪತ್ರಿಕೆ’ ನಡೆಸುತ್ತಿದ್ದರು. ಕಾರವಾರದ ಕರಾವಳಿ ಮುಂಜಾವು ಪತ್ರಿಕೆ ...

READ MORE

Related Books