ಒಡನಾಟದ ನೆನಪುಗಳು

Author : ಸಿ.ಎನ್. ರಾಮಚಂದ್ರನ್

Pages 144

₹ 150.00




Year of Publication: 2021
Published by: ಅಂಕಿತ ಪುಸ್ತಕ
Address: # 53 ಶ್ಯಾಮಸಿಂಗ್ ಸಂಕೀರ್ಣ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 0802661 7100

Synopsys

ಖ್ಯಾತ ಭಾಷಾ ತಜ್ಞ ಡಾ. ವಿವೇಕ ರೈ ಅವರ ವಿಚಾರಗಳನ್ನು ಒಡನಾಟದ ನೆನಪುಗಳು ಶೀರ್ಷಿಕೆಗಳಡಿ ವಿಮರ್ಶಕ ಡಾ. ಸಿ.ಎನ್. ರಾಮಚಂದ್ರನ್ ಅವರು ಸಂಪಾದಿಸಿದ ಕೃತಿ-ವಿವೇಕ ರೈ ಒಡನಾಟದ ನೆನಪುಗಳು. ವಿವೇಕ ರೈ ಅವರ ಶಿಷ್ಯರು, ಸಹೋದ್ಯೋಗಿಗಳು, ಚಿಂತಕ ಅಭಿಮಾನಿಗಳು ಅವರೊಂದಿಗಿನ ಒಡನಾಟಗಳನ್ನು ಸ್ಮರಿಸಿ ಬರೆದ ಲೇಖನಗಳನ್ನು ಇಲ್ಲಿ ಸಂಪಾದಿಸಲಾಗಿದೆ. ವಿವೇಕ ರೈ ಅವರಿಗೆ 76 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಗ್ರಂಥ ಮೂಲಕ ಅಭಿನಂದನೆ ಸಲ್ಲಿಸಲಾಗಿದೆ.

About the Author

ಸಿ.ಎನ್. ರಾಮಚಂದ್ರನ್

ರಾಮಚಂದ್ರನ್ ಅವರು ಜನಿಸಿದ್ದು (ಜ ೧೯೩೬) ಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಅಮೆರಿಕೆಯ ಮಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ. ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾಗಳಲ್ಲಿ ಅಧ್ಯಾಪಕರಾಗಿ ಕಾರ್‍ಯ ನಿರ್ವಹಿಸಿದ್ದಾರೆ. ೧೯೯೬ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಧ್ಯಾಪಕರಾಗಿ ನಿವೃತ್ತಿ. ಸಾಹಿತ್ಯ ವಿಮರ್ಶೆ, ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಪ್ರತಿರೋಧ, ಎಡ್ವರ್ಡ್ ಸೈದ್, ಬಯಲುರೂಪ, ರಕ್ತ-ರೂಪಣೆ, ಹೊಸ ಮಡಿಯ ಮೇಲೆ ಚದುರಂಗ, ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು ವಿಮರ್ಶಾ ಕೃತಿಗಳು. ಶೋಧ ಕಾದಂಬರಿ, ಕಸಾಂದ್ರ ಕಥಾ ಸಂಕಲನ. ಇನಾಂದಾರ್ ಪ್ರಶಸ್ತಿ, ...

READ MORE

Reviews

‘ಬಿ ಎ ವಿವೇಕ ರೈ ಒಡನಾಟದ ನೆನಪುಗಳು’ ಕೃತಿಯ ವಿಮರ್ಶೆ

ಜಾನಪದ ಕ್ಷೇತ್ರದ ವಿದ್ವಾಂಸರೂ, ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಪಾಂಡಿತ್ಯ ಹೊಂದಿರುವವರೂ ಆಗಿರುವ ಡಾ. ಬಿ. ಎ. ವಿವೇಕ ಅವರಿಗೆ 75 ತುಂಬಿದ ಸಂದರ್ಭದಲ್ಲಿ, ಆದರ ಜೀವನವ ಮತ್ತು ಸಾಧನೆಯನ್ನು ನೆನಪಿಸಿಕೊಳ್ಳುವ ಈ ಪುಸ್ತಕವು ಸಿ. ಎನ್.ರಾಮಚಂದ್ರನ್ ಅವರ ಸಂಪಾದಕತ್ವದಲ್ಲಿ ಹೊರ ಬಂದಿದೆ. ವಿವೇಕ ರೈಯವರನ್ನು ಹತ್ತಿರದಿಂದ ಕಂಡ ಐವರು, ತಮ್ಮ ಮತ್ತು ಧೈಯವರ ಒಡನಾಟವನ್ನು ನೆನಪಿಸಿಕೊಂಡು ಬರೆದ ಐದು ಲೇಖನಗಳು ಇಲ್ಲಿವೆ. ಆ ಓಡನಾಟದ ನೆನಪುಗಳನ್ನು ಮೂಲಕ, ರೈಯವರು ಕನ್ನಡ ಮತ್ತು ತುಳು ಭಾಷೆಗಳಿಗೆ ನೀಡಿದ ಸಾಂಸ್ಕೃತಿಕ ಕೊಡುಗೆ ಯನ್ನು ಓದುಗರು ಮನನ ಮಾಡಿಕೊಳ್ಳಬಹುದು. ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ದ್ದಾಗ ಹಲವು ಸಂಶೋಧನೆಗಳಿಗೆ ಮತ್ತು ಗ್ರಂಥ ಪ್ರಕಟಣೆಗೆ ರೈಯವರು ಶ್ರಮಿಸಿದ ವಿಧಾನ ಅನನ್ಯ, ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದೊಂದಿಗೆ ಆರಂಭದಿಂದಲೂ ತೊಡಗಿಸಿಕೊಂಡಿದ್ದ ರೈಯ ವರು, ಶ್ರಮಿಸಿದ ವಿಧಾನ ಅಗತ್ಯ ಅಲ್ಲಿನ ಪ್ರಸಾರಂಗದ ಸ್ಥಾಪಕ ನಿರ್ದೇಶಕರೂ ಆಗಿದ್ದರು. ತುಳು ಜನಪದ ಸಾಹಿತ್ಯದ ಅಧ್ಯಯನದಲ್ಲಿ ಅವರ ಕೊಡುಗೆ ಮಹತ್ತರ ಈ ಪುಸ್ತಕದಲ್ಲಿ ಅವರ ಒಡನಾಟವನ್ನು ನೆನಪಿಸಿಕೊಂಡ ಕಾಮ ಸಿ.ಎಸ್.ರಾಮಚಂದ್ರನ್, ಪುರುಷೋತ್ತಮ ಬಿಳಿಮಲೆ, ಚಿನ್ನಪ್ಪ ಗೌಡ, ಹೀ. ಚಿ.ಬೋರಲಿಂಗಯ್ಯ ಮತ್ತು ಹೈಡ್ರುನ್ ಜೂಟ್‌ನರ್ ಒಡನಾಡಿಗಳ ನೆನಪುಗಳ ಮೂಲಕ ಸಾಧಕರೊಬ್ಬರನ್ನು ಸಮರ್ಥವಾಗಿ ಪರಿಚಯಿಸಿ ಕೊಡುವ ಹೊಸ ವಿಧಾನ ಈ ಪ್ರಸಕದಲ್ಲಿ ರೂಪುಗೊಂಡಿದೆ. ಈ ಪುಸ್ತಕ ಮುದ್ರಣದ ಗುಣಮಟ್ಟ, ಮುಖಪುಟದ ವಿನ್ಯಾಸ(ಅಪಾರ)ಬಹು ಸುಂದರ, ಸಂಗ್ರಹಯೋಗ್ಯ.

(ಕೃಪೆ:  ವಿಶ್ವವಾಣಿ) 

Related Books