ಒಗಟು ಬಿಡಿಸೋ ಜಾಣ

Author : ಚಂದ್ರಗೌಡ ಕುಲಕರ್ಣಿ

Pages 40

₹ 15.00




Year of Publication: 1991
Published by: ನವಕರ್ನಾಟಕ ಪ್ರಕಾಶನ
Address: #11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001

Synopsys

ಲೇಖಕ ಚಂದ್ರಗೌಡ ಕುಲಕರ್ಣಿ ಅವರು ಮಕ್ಕಳಿಗಾಗಿ ರಚಿಸಿದ ಕೃತಿ-ಒಗಟು ಬಿಡಿಸೋ ಜಾಣ. ಬಹಳ ಕುತೂಹಲಕಾರಿಯಾದ ಒಗಟು ಪದ್ಯಗಳಿವೆ. ಶಾಬ್ದಿಕ ಮಾಯಾಜಾಲದ ವಿನೂತನ ರಚನೆಗಳು. ಮೂರಕ್ಷರದ ಒಂದು ಶಬ್ದ, ಆ ಶಬ್ದದ ಮೊದಲೆರಡು ಅಕ್ಷರಕೆ ಈ ಅರ್ಥ, ಕೊನೆಯೆರಡು ಅಕ್ಷರಕೆ ಈ ಅರ್ಥ ಹಾಗೂ ಮೊದಲ- ಕೊನೆ ಅಕ್ಷರಕೆ ಈ ಅರ್ಥ...ಎಂದು ಪದ್ಯ ಒಗಟಿನ ಸುಳುಹು ಕೊಡುತ್ತದೆ..ಯಾವುದೆ ಒಂದು ಶಬ್ದ ಹೊಳೆದರೆ ಅದನ್ನು ಮೂರು ರೀತಿಯಲ್ಲಿ ಪರೀಕ್ಷಿಸಿ ಸರಿ ಎಂದು ಗುರುತಿಸಬೇಕು. ಸರಳ ಪದಗಳ ಈ ಆಟ ಮಗುವಿನ ಶಬ್ದ ವಿಕಸನಕ್ಕೆ,ಭಾಷಾ ಕುಶಲತೆಗೆ, ಶೋಧ ಪ್ರವೃತ್ತಿಗೆ ಪ್ರೇರಣೆ ನೀಡುತ್ತದೆ. ಮಗುವಿನ ಊಹೆ, ಕಲ್ಪನೆ, ಸಂಭಾವ್ಯಗಳು ಸತ್ಯವಾದಾಗ ಅವರ್ಣನೀಯ ಆನಂದ ನೀಡುತ್ತದೆ.. ಇಂತಹ ಒಟ್ಟು 24 ಒಗಟು ಪದ್ಯಗಳು ಇಲ್ಲಿವೆ..

ಈ ಪದ್ಯಗಳು ತರಂಗ ವಾರ ಪತ್ರಿಕೆಯಲ್ಲಿ ವಾರವಾರವೂ ಪ್ರಕಟವಾದವು. ಮುಂದಿನ ವಾರದ ಉತ್ತರಕ್ಕಾಗಿ ಕಾಯುವಂತೆ ಮಾಡಿದ್ದವು. ಆಬಾಲವೃದ್ಧರು ಈ ಶಬ್ದ ಜಗತ್ತಿನ ವಿಸ್ಮಯದ ಪಲಕುಗಳನ್ನು ಸವಿದಿದ್ದಾರೆ. ಒಂದು ಒಗಟಿಗೆ ಹತ್ತಿಪ್ಪತ್ತು ಪದಗಳನ್ನು ತಕ್ಕಡಿಯಲ್ಲಿಟ್ಟು ತೂಗಹಚ್ಚುವ ಈ ಆಟ ಮಕ್ಕಳ ಮನಸ್ಸಿಗೆ,ಜಾಣ್ಮೆಗೆ ಒರೆಗಲ್ಲಾಗಿದೆ..

ನಮ್ಮ ಪರಂಪರೆಯಲ್ಲಿ ಒಗಟುಗಳಿವೆ. ರೂಪಕ ಉಪಮೆಗಳ ಮೂಲಕ ಹೊಸ ಲೋಕವನ್ನೇ ಸೃಜಿಸುತ್ತವೆ. ಆ ಜನಪದ ಒಗಟುಗಳ ತಂತ್ರವನ್ನೇ ಈ ಶಾಬ್ದಿಕ ಒಗಟುಗಳಿಗೆ ಬಳಸಿ ಹೊಸ ಸೃಷ್ಟಿಯನ್ನು ಮಾಡಲಾಗಿದೆ. ಈ ರಚನೆಗಳು ಲಯಬದ್ಧ ಪದ್ಯಗಳಾಗಿರುವುದರಿಂದ ಮಕ್ಕಳು ಆಡುತ್ತ, ಹಾಡುತ್ತ ಒಗಟು ಬಿಡಿಸಲು ಯತ್ನಿಸುವುದು ಈ ಕೃತಿಯ ಹೆಚ್ಚುಗಾರಿಕೆ. .ಗ್ರಂಥಾಲಯದ ಕಪ್ಪು ಹಲಗೆ ಯೋಜನೆಯಡಿ..ರಾಜ್ಯದ ಎಲ್ಲ ಸರಕಾರಿ ಪ್ರಾಥಮಿಕ ಶಾಲೆಗಳಿಗೂ ತಲುಪಿದ 
ಈ ಕೃತಿಯು 8 ಮುದ್ರಣಗಳನ್ನು ಕಂಡಿದೆ.

About the Author

ಚಂದ್ರಗೌಡ ಕುಲಕರ್ಣಿ

ಕವಿ, ಲೇಖಕ ಚಂದ್ರಗೌಡ ಕುಲಕರ್ಣಿ ಅವರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದವರು. ಹುಟ್ಟೂರು, ಅಮರಗೋಳ, ಧಾರವಾಡ ಹಾಗೂ ನರಗುಂದದಲ್ಲಿ ಶಿಕ್ಷಣ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವೀಧರರು. ವಿಜಯಪುರ ಜಿಲ್ಲೆಯ ತಾಳಿಕೋಟೆಯ ಖಾಸ್ಗತೇಶ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರು.   ಕಥೆ,ಕವನ,  ಪ್ರಾಸಬಂಧ, ಪದಬಂಧ, ಪದಶೋಧ, ಪದಚಲ್ಲಾಟ, ಅಕ್ಷರ ಸುಡೋಕು, ಹುಡುಕಾಟ - ತೊಡಕಾಟ ಅಂಕ ಮೋಡಿಯಲ್ಲಿ ಬೆರೆತ ಮನಸಿಗೆ ಜನಪದ ಲೆಕ್ಕ - ಕವಡ ಕಂಟಗ ಲೆಕ್ಕ, ಒಗಟು, ಬೆಡಗು, ಭಾಷಾ ಚಮತ್ಕಾರ, ಮೋಜಿನ ಮಾಯಾ ಚೌಕ ಹೀಗೆ ವಿವಿಧ ವಲಯದಲ್ಲಿ ಆಸಕ್ತಿ. ದೂರದರ್ಶನದ ಬೆಳಗು ...

READ MORE

Related Books