ಒಂದಿಷ್ಟು ಲಘು; ಒಂದಷ್ಟು ಗಂಭೀರ

Author : ಶ್ರೀನಿವಾಸ ಹಾವನೂರ

Pages 186

₹ 84.00




Year of Publication: 1999
Published by: ಕರ್ನಾಟಕ ಸಂಘ
Address: ಪುತ್ತೂರು, ದಕ್ಷಿಣ ಕನ್ನಡ- 574202

Synopsys

ಲೇಖಕ ಶ್ರೀನಿವಾಸ ಹಾವನೂರರ ಪ್ರಬಂಧಗಳ ಸಂಕಲನ ‘ಒಂದಿಷ್ಟು ಲಘು; ಒಂದಷ್ಟು ಗಂಭೀರ’. ಈ ಕೃತಿಯಲ್ಲಿ ಈತ ಶ್ರೀಸತ್ಯನಾರಾಯಣ, ವಿಷ್ಣುವಿನ ಅವತಾರಗಳು ಹತ್ತು ಮಾತ್ರವೇ, ನೆಂಟಸ್ತಿಕೆ, ಒಕ್ಕಲಗಿತ್ತಿ, ಹೆಸರು, ಅಡ್ಡ ಹೆಸರು, ಅಡ್ನಾಡಿ ಹೆಸರುಗಳು, ಹೆಸರನ್ನೇ ಮರೆತಾಗ, ನಿಂದೆ, ಟೀಕೆ, ವಿಮರ್ಶೆ ಮುಂತಾದ್ದು, ಮನಃ ಶಾಂತಿಯ ಸಪ್ತ ಸೂತ್ರಗಳು, ನನ್ನಷ್ಟಕ್ಕೆ ನಾನು, ಮರಣ ಸಂಭ್ರಮ, ಹಾಲಿನ ಮೇಲಿನ ಕೆನೆ, ವಿದೇಶಗಳಲ್ಲಿ ನಾ ಕಂಡ ನಾರಿಯರು, ಪುಣೆ ಹಾಗೂ ಪುಣೇರಿ, ವಿಮಾನದಲ್ಲಿ ಜಲಬಾಧೆ, ಈ ಮರಾಠೀ ಮಹಿಳೆ, ಸನ್ಯಾಸ ಮತ್ತು ಸಂಸಾರ, ದೊಡ್ಡ ದೊಡ್ಡೋರ ಜಗಳ ಹಾಗೂ ಹೀಗಿದ್ದಾರೆ ಈ ಭೈರಪ್ಪನವರು ಎಂಬ 18 ಲೇಖನಗಳು ಸಂಕಲನಗೊಂಡಿವೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books