ಒಂದು ಹಿಡಿ ಮುತ್ತು

Author : ವಿಜಯಕಾಂತ ಪಾಟೀಲ

Pages 60

₹ 40.00




Year of Publication: 2008
Published by: ಸುಮುಖ ಪ್ರಕಾಶನ
Address: ಬೆಂಗಳೂರು

Synopsys

‘ಒಂದು ಹಿಡಿ ಮುತ್ತು’ ಲೇಖಕ ವಿಜಯಕಾಂತ ಪಾಟೀಲರು ಸಂಪಾದಿಸಿರು ಸಂದರ್ಶನ ಲೇಖನಗಳ ಸಂಕಲನ. ಒಂದು ಕಾಲದಲ್ಲಿ ಲೇಖಕ ಪತ್ರಿಕೋದ್ಯಮದಲ್ಲೂ ಸಕ್ರೀರಾಗಿದ್ದರ ಕುರುಹಾಗಿ ಈ ಸಂದರ್ಶನಗಳ ಸಂಕಲನ ಹೊರಬಂದಿದೆ. ತುಷಾರ, ಅಗ್ನಿ, ಕರ್ಮವೀರ, ವಾರಪತ್ರಿಕೆ, ಹೊಸತು, ಪ್ರಪಂಚ ಪತ್ರಿಕೆಗಳಲ್ಲಿ ಪ್ರಕಟಗೊಂಡ ಸಂದರ್ಶನಗಳು ಇಲ್ಲಿ ಸಂಗ್ರಹಗೊಂಡಿವೆ. ಪಾಪು, ಕಣವಿ, ಎನ್ಕೆ, ಚಂಪಾ, ಕಾಪಸೆ, ಮಾಲತಿ ಪಟ್ಟಣಶೆಟ್ಟಿ, ಹಕಾರಿ, ಮೊಗಸಾಲೆ, ಅಶೋಕ ಶೆಟ್ಟರ, ಢುಂಡಿರಾಜ್, ಸ.ಉಷಾ ಮೊದಲಾದವರ ವಿಶಿಷ್ಟ ಸಂದರ್ಶನಗಳು ಇಲ್ಲಿವೆ. ಇವರ ವ್ಯಕ್ತಿತ್ವ, ನಡೆಯನ್ನು ಅರಿತುಕೊಳ್ಳಲು ಇವು ಸಹಕಾರಿಯಾಗುತ್ತವೆ.

About the Author

ವಿಜಯಕಾಂತ ಪಾಟೀಲ
(09 August 1969)

ವಿಜಯಕಾಂತ ಪಾಟೀಲ- ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದ್ದು; ಪ್ರಾಥಮಿಕ, ಪ್ರೌಢಶಿಕ್ಷಣ: ಕ್ಯಾಸನೂರು, ಶಕುನವಳ್ಳಿ (ಸೊರಬ); ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿ ಧಾರವಾಡ; ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ; ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ. ಪ್ರಕಟಿತ ಕೃತಿಗಳು: ಮಾಸದ ಕಲೆಗಳು (1994), ಸಲಸಲದ ಪಾಡು : (2003), ನೂರು ಬಣ್ಣದ ಕಣ್ಣು (2012), ಹೌದು ನಾನು ಕೌದಿ (2013), ಇಂತಿ ನದಿ (20050)ಕವನ ಸಂಕಲನ. ಪ್ರಬಂಧ: ವಜನುಕಟ್ಟು (2005), ಮಕ್ಕಳ ಸಾಹಿತ್ಯ: ...

READ MORE

Related Books