ಊಸರವಳ್ಳಿಗಳು ಬಣ್ಣ ಬದಲಿಸುವುದು ಹೇಗೆ?

Author : ಎ.ಓ. ಆವಲ ಮೂರ್ತಿ

Pages 72

₹ 65.00




Year of Publication: 2022
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್‌, ಕ್ರಿಸೆಂಟ್‌ ರಸ್ತೆ, ಬೆಂಗಳೂರು- 560001
Phone: 080 22161900

Synopsys

ಲೇಖಕ ಡಾ. ಎ.ಓ. ಆವಲಮೂರ್ತಿ ಅವರು ಬರೆದ ವಿಜ್ಞಾನ ಸಂವಾದ ಕೃತಿ ʻಊಸರವಳ್ಳಿಗಳು ಬಣ್ಣ ಬದಲಿಸುವುದು ಹೇಗೆ?ʼ. ʻಇದು ಪುಟ್ಟ- ಕಿಟ್ಟಿ ವಿಜ್ಞಾನ ಸಂವಾದʼದ ಇಪ್ಪತ್ತನೇ ಪುಸ್ತಕವಾಗಿದೆ. ಸಾಮಾನ್ಯವಾಗಿ ಮಕ್ಕಳು ಬೆಳೆಯುತ್ತಾ ಹೋಗುತ್ತಿದ್ದ ಹಾಗೆ ಅವರಲ್ಲಿ ವಿಜ್ಞಾನದ ಕುರಿತಾದ ಹಲವಾರು ಪ್ರಶ್ನೆಗಳು ಮೂಡುತ್ತವೆ. ಅಂತಹ ಪ್ರಶ್ನೆಗಳನ್ನು ಕೇಳುವ ಅವರ ಉತ್ಸಾಹಕ್ಕೆ ನೀರೆರಚದೆ ಪುಸ್ತಕದ ಮೂಲಕ ಉತ್ತರ ಕೊಡುವ ಕೆಲಸ ಇಲ್ಲಿ ನಡೆದಿದೆ. ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ, “ನಮ್ಮ ಇವತ್ತಿನ ಶಾಲಾ-ಕಾಲೇಜು ಶಿಕ್ಷಣದಲ್ಲಿ ಪ್ರಶ್ನೆಗಳಿಗೆ ಜಾಗವೇ ಇಲ್ಲ. ವಿದ್ಯಾರ್ಥಿಗಳ ಎದುರಿಗೆ ಅವರೇ 'ಆಲೋಚಿಸಿ' ಉತ್ತರವನ್ನು ಕಂಡುಹಿಡಿದು ಬರೆಯಬೇಕಾದಂಥ ಸಂದರ್ಭಗಳೇ ಇಲ್ಲ. ಆಲೋಚಿಸುವ ಪ್ರಕ್ರಿಯೆಯನ್ನು ರೂಢಿಸುವ ಪ್ರಯತ್ನಗಳೂ ನಡೆಯುತ್ತಿಲ್ಲ. ಎಲ್ಲ ಸಿದ್ಧ ಪ್ರಶ್ನೆಗಳಿಗೂ ಶಿಕ್ಷಕರೇ ಅಥವಾ ಗೈಡ್‌ಗಳೇ ಸಿದ್ಧ ಉತ್ತರಗಳನ್ನು ಸರಬರಾಜು ಮಾಡುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಪ್ರಶೋತ್ತರವನ್ನು ಕಥನ ರೂಪದಲ್ಲಿ ನಿಜ ಸಂದರ್ಭಗಳ ನಡುವೆ ಸಹಜವಾಗಿ ಏಳುವ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವ ಪ್ರಕ್ರಿಯೆಯ ರೂಪದಲ್ಲಿ ನೀಡಲಾಗಿದೆ”. ಕೂದಲು ಬೆಳೆಯುವುದು ಹೇಗೆ?, ಶಕ್ತಿ ಮತ್ತು ಪರಿಸರ, ಭೂಕಂಪ ಅಳೆಯುವುದು ಹೇಗೆ?, ಭೂಮಿಯ ಮೇಲೆ ಜೀವಿಗಳಿರುವುದೇಕೆ?, ಹಿಮನದಿಗಳ ಸ್ಫೋಟ ಎಂದರೇನು?, ಇಲೆಕ್ಟ್ರಾನಿಕ್ ಸೂಕ್ಷ್ಮದರ್ಶಕದ ಅಂತರಂಗ, ಜೀವಸತ್ವಗಳಲ್ಲಿ ಎಷ್ಟು ಬಗೆ?, ಬಣ್ಣಗುರುಡರಲ್ಲಿ ಗಂಡಸರೇ ಹೆಚ್ಚು ಏಕೆ?, ವಿದ್ಯುತ್‌ ಮೀಟರ್‌ಗಳು ಕೆಲಸ ಮಾಡುವುದು ಹೇಗೆ?, ಚಿಗಟಗಳೇಕೆ ಬೆಕ್ಕು ಮತ್ತು ನಾಯಿಗಳ ಮೇಲೆ ವಾಸಿಸುತ್ತವೆ?, ಊಸರವಳ್ಳಿಗಳು ಬಣ್ಣ ಬದಲಿಸುವುದು ಹೇಗೆ? ಸೇರಿ 14 ಲೇಖನಗಳಿವೆ.

About the Author

ಎ.ಓ. ಆವಲ ಮೂರ್ತಿ

ಎ.ಓ. ಆವಲಮೂರ್ತಿ ಅವರು ಭೌತ ವಿಜ್ಞಾನದ ವಿಶ್ರಾಂತ ಅಧ್ಯಾಪಕರು. ಕಳೆದ ಕೆಲವು ವರ್ಷಗಳಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಏನು ಮಾಡಬೇಕು ಎಂಬುದನ್ನು ಕುರಿತು ಚಿಂತನೆ, ಅಧ್ಯಯನ, ಪ್ರಯೋಗಗಳು ಮತ್ತು ಬರವಣಿಗೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಹಲವು ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಬರೆದಿದ್ದಾರೆ. ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕುರಿತೇ ಸಂಶೋಧನ ಪ್ರಬಂಧವನ್ನು ಬರೆದು ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಲ್ಲದೆ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವೆಲ್ಲದರ ಮುಂದುವರಿದ ಭಾಗವಾಗಿ, ಇಂದಿನ ಶಿಕ್ಷಣದಲ್ಲಿ ಇರುವ ಚಿಂತನಶೀಲತೆಯನ್ನು ಮೈಗೂಡಿಸುವುದನ್ನೇ ಪ್ರಮುಖ ...

READ MORE

Related Books