ಆಪರೇಷನ್ ಕೈಟಿನ್

Author : ಧನಪಾಲ ನಾಗರಾಜಪ್ಪ

Pages 72

₹ 80.00




Year of Publication: 2021
Published by: ಧನಪಾಲ ನಾಗರಾಜಪ್ಪ
Address: ನೆಲವಾಗಿಲು ಗ್ರಾಮ & ಅಂಚೆ, ನಂದಗುಡಿ ಹೋಬಳಿ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562122,
Phone: 7892546523

Synopsys

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ತೆಲುಗು ಮೂಲದ ಲೇಖಕ ಸಲೀಂ ಅವರ ‘ಆಪರೇಷನ್ ಕೈಟಿನ್’ ಮಕ್ಕಳ ಕಾದಂಬರಿಯನ್ನು ಲೇಖಕ ಧನಪಾಲ ನಾಗರಾಜಪ್ಪ ನೆಲವಾಗಿಲು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ತೆಲುಗು ಅಸೋಷಿಯೇಶನ್ ಆಫ್ ನಾರ್ತ್ ಅಮೆರಿಕ (ತಾನಾ) ಸಂಸ್ಥೆಯಿಂದ ಈ ಕೃತಿಗೆ ‘ಮಕ್ಕಳ ಉತ್ತಮ ಪುಸ್ತಕ ಪ್ರಶಸ್ತಿ’  ಲಭಿಸಿದೆ. 

ಶಿವರಾಮ್ ಕಾನ್ ಸೇನ್ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಈ ಕಾದಂಬರಿಯು ಮಕ್ಕಳಲ್ಲಿ ವೈಜ್ಞಾನಿಕ ವಿಚಾರಗಳನ್ನು ತುಂಬುತ್ತದೆ. ಕರೊನಾ, ಎಬೋಲಾ, ಸಾರ್ಸ್ ಇಂತಹ ವೈರಾಣುಗಳು ಏನೂ ಮಾಡಲಾರವು. ಎಲ್ಲ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರವಿದೆ ಎಂಬುದನ್ನು ಸಾಬೀತುಪಡಿಸುತ್ತದೆ-ಕೈಟಿನ್. ವಯೋಮಾನದ ಹಂಗಿಲ್ಲದೇ ಎಲ್ಲರೂ ಓದಬಹುದು. ಸಂಶೋಧನಾಸಕ್ತಿಯ ಪ್ರತಿಭೆಗಳಿಗೆ ವೈಜ್ಞಾನಿಕ, ಮಾನವೀಯತೆ ಸೇರಿಬಿಟ್ಟರೆ ಯಾವುದೇ ಮೂಢನಂಬಿಕೆಗಳು ದ್ವೇಷ ಅಶಾಂತಿಗೆ ಅವಕಾಶವೇ ಇರುವುದಿಲ್ಲ ಎಂಬುದನ್ನು ಈ ಕಾದಂಬರಿ ಸಾರಿ ಹೇಳುತ್ತದೆ. ಅನ್ಯಗ್ರಹಗಳ ಪ್ರತಿನಿಧಿಗಳೊಂದಿಗೆ ವ್ಯವಹರಿಸುವಾಗಲೂ ಸ್ನೇಹ-ಗೌರವ-ವಿಶ್ವಾಸ ಕಾಪಾಡಿಕೊಳ್ಳುವ ಅಗತ್ಯವಿರುತ್ತದೆ. ಭೂಮಿಯ ಮೇಲಿರುವ ನಾವೆಲ್ಲರೂ ಪರಸ್ಪರ ವಿಶ್ವಾಸದೊಂದಿಗೆ ಇರಬೇಕು. ಆಗಲೇ ವಸುಂಧರೆ ಸುಂದರ ಎಂಬ ಸಂದೇಶದೊಂದಿಗೆ ಮಕ್ಕಳ ಕುತೂಹಲ ಕೆರಳಿಸುತ್ತ ಸಾಗುವ ಕಾದಂಬರಿ ಇದು’ ಎಂದು ಪ್ರಶಂಸಿಸಿದ್ದಾರೆ.    

About the Author

ಧನಪಾಲ ನಾಗರಾಜಪ್ಪ
(20 June 1987)

ಧನಪಾಲ ನಾಗರಾಜಪ್ಪನವರು ಅನುವಾದಕರಾಗಿ ಚಿರಪರಿಚಿತರು. ನಾಗರಾಜಪ್ಪ ಹಾಗೂ ರಾಮಚಂದ್ರಮ್ಮ ದಂಪತಿಯ ಮಗನಾಗಿ 20-06-1987 ರಂದು ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ. ಜನಿಸಿದರು. ಭಾರತೀಯ ವಾಯು ಸೈನ್ಯದಲ್ಲಿ PBOR ಶ್ರೇಣಿಯಲ್ಲಿ ಕಳೆದ 15 ವರ್ಷಗಳಿಂದ ಏರ್ ಮೆನ್ ಆಗಿ ವೈದ್ಯಕೀಯ ಸಹಾಯಕನ ವೃತ್ತಿ. ಕಳೆದ 15 ವರ್ಷಗಳಿಂದ ಸಾಹಿತ್ಯಿಕ ಕೃಷಿಯಲ್ಲಿ ನಿರತನಾಗಿದ್ದು ಸ್ವ ರಚನೆ, ಸಂಪಾದನೆ, ಪ್ರಕಾಶನ ಮತ್ತು ಅನುವಾದದ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಿವೇದನೆ (ಕವನ ಸಂಕಲನ), ಮಿತ್ರವಾಣಿ (ಪ್ರಧಾನ ಸಂಪಾದಕತ್ವದ ಕವನ ಸಂಕಲನ), ಕಾಡುವ ಕಥೆಗಳು (ಅನುವಾದಿತ ಕಥಾ ಸಂಕಲನ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ತಣ್ಣೀರ ...

READ MORE

Related Books