ಪಾ.ವೆಂ. ಆಚಾರ್ಯ ಆಯ್ದ ನಗೆ ಬರಹಗಳು

Author : ಶ್ರೀನಿವಾಸ ಹಾವನೂರ

Pages 120

₹ 60.00




Year of Publication: 2003
Published by: ಪ್ರಿಸಮ್ ಬುಕ್ಸ್ ಪ್ರೈ ಲಿ
Address: ನಂಬರ್ 53, 1ನೇ ಮಹಡಿ, 30ನೇ ತಿರುವು, 9ನೇ ಮುಖ್ಯರಸ್ತೆ, ಬನಶಂಕರಿ, ಬೆಂಗಳೂರು- 560070
Phone: 8026714108

Synopsys

ಪಾ.ವೆಂ. ಆಚಾರ್ಯರ ಸಮಗ್ರ ಸಾಹಿತ್ಯ ಸಂಪುಟದ ಭಾಗ-2ರ ಸರಣಿಯಲ್ಲಿ ಆಯ್ದ ನಗೆ ಬರೆಹಗಳು ಶೀರ್ಷಿಕೆಯಡಿ ಚಿಂತಕರಾದ ಶ್ರೀನಿವಾಸ ಹಾವನೂರು ಹಾಗೂ ಪ್ರೊ. ಅ.ರಾ. ಮಿತ್ರ ಅವರು ಸಂಪಾದಿಸಿದ ಕೃತಿ ಇದು. ಪಾ.ವೆಂ. ಆಚಾರ್ಯರು ದೇಶ ವಿದೇಶದ ವಿಸ್ಮಯಕಾರಿ, ಕುತುಹಲಕಾರಿ ಘಟನೆ, ಮಾನವಾಸಕ್ತಿಯ ಅಂಶಗಳ ಬಗ್ಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ.ಜೊತೆಗೆ ನಗೆ ಬರೆಹಗಳೂ ಇವೆ. ಆ ಪೈಕಿ, ರಾಜಕಾರಣ, ಸಾಮಾಜಿಕ ಸನ್ನಿವೇಶ, ಶಿಕ್ಷಣ ವಲಯ ಹೀಗೆ ಹತ್ತು ಹಲವು ವಲಯದಲ್ಲಿ ನಗೆ ಬರೆಹಗಳನ್ನು ಬರೆದಿರುವುದು ಅವರ ಓದು ಹಾಗೂ ಸಾಮಾಜಿಕ ಸಂಪರ್ಕದ ವೈಶಾಲ್ಯತೆಯನ್ನು ಗುರುತಿಸಬಹುದು. ಈ ಕೃತಿಯಲ್ಲಿ ಬೀದಿಯಲ್ಲಿ ಕಾಮಣ್ಣರು, ಅಮ್ಮಾವ್ರ ಗಂಡಾಯಣ, ಸಾಯಲಿಕ್ಕೆ ಪುರುಷೊತ್ತಾಗಲಿಲ್ಲ, ಮಂಗಾಯಣಂ, ಸೀರೆ ಮತ್ತು ಮಹಾಭಾರತ, ಮದುವೆಯಾದರೂ ಸುಖ ಪಡುವುದು ಹೇಗೆ? ಇಂತಹ ಒಟ್ಟು 17 ನಗೆಬರಹಗಳನ್ನು ಈ ಸಂಕಲನವು ಒಳಗೊಂಡಿದೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books