ಪಾ.ವೆಂ. ಆಚಾರ್ಯ

Author : ಶ್ರೀನಿವಾಸ ಹಾವನೂರ

Pages 48

₹ 33.00




Year of Publication: 2007
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ನಾಡಿಗೆ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 12ನೇ ಪುಸ್ತಕ ಪತ್ರಕರ್ತರ ಆಚಾರ್ಯ ಪಾ.ವೆಂ. ಆಚಾರ್ಯ. ’ ಪಾವೆಂ’ ಎಂಬ ಹೆಸರಿನಲ್ಲಿ ಬರೆಯುತ್ತಿದ್ದ  ಪಾಡಿಗಾರು ವೆಂಕಟರಮಣಾಚಾರ್ಯ ಅವರು ’ಕಸ್ತೂರಿ’ ಪತ್ರಿಕೆಯನ್ನು ರೂಪಿಸಿದವರು. ವಿಸ್ತಾರವಾದ ಓದು, ವೈವಿಧ್ಯಮಯ ಬರೆಹಗಳು ಪಾವೆಂ ಅವರದ್ದಾಗಿದ್ದವು. ಬಹು ಶ್ರುತತ್ವ ಅವುಗಳ ವೈಶಿಷ್ಟ್ಯ. ಮಾಸ್ತರಿಕೆ, ಕಾರಕೂನಿಕೆ, ಹೋಟೇಲಿನ ಬಿಲ್‌ರೈಟರ್‌ ಮೊದಲಾದ ಕೆಲಸಗಳನ್ನು ಬದುಕಿನ ಮೊದಲ ದಿನಗಳಲ್ಲಿ ಮಾಡಿದ್ದರು. ಕೊನೆಗೆ ಅವರು ಬಂದು ಸೇರಿದ್ದು ಪತ್ರಿಕೋದ್ಯಮಕ್ಕೆ. ಎಂದೂ ಜರ್ನಲಿಸಂನ ಪಾಠವನ್ನು ಸ್ವತಃ ಹೇಳಿಸಿಕೊಳ್ಳದ ಅವರು ಬದುಕಿದ ಮತ್ತು ಬರೆದ ರೀತಿ ಇಂದಿನ ಪತ್ರಕರ್ತರಿಗೆ ಮಾದರಿಯಾಗಬಲ್ಲ ಪಠ್ಯ ಮತ್ತು ಪಾಠದ ಹಾಗೆ ಇದೆ. ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಸಾಧ್ಯ ಎನ್ನಬಹುದಾಗಿದ್ದ, 'ರೀಡರ್ ಡೈಜೆಸ್ಟ್'ನಂಥ ಮಾಸಪತ್ರಿಕೆಯ ಸೃಜನಶೀಲ ಧಾರಣ ಶಕ್ತಿ ಕನ್ನಡ ಭಾಷೆಗೂ ಇದೆ ಎಂಬುದನ್ನು ಅವರು, ’ಕಸ್ತೂರಿ'ಯ ಮೂಲಕ ರುಜುವಾತು ಪಡಿಸಿದರು. "ಪದಾರ್ಥ ಚಿಂತಾಮಣಿ"ಯಂತಹ ಅಪರೂಪದ ಶಬ್ದಾರ್ಥಗಳನ್ನು ಅವರು ಸದಾ ಬೆನ್ನು ಹತ್ತಿದ್ದರು. ಅವರೊಳಗೆ ಇದ್ದ ಒಬ್ಬ ಅಪರೂಪದ ಕವಿ ಮತ್ತು ಕತೆಗಾರನನ್ನು ಪೂರ್ಣ ಪ್ರಮಾಣದಲ್ಲಿ ಹೊರಹಾಕಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಅವರೊಳಗೆ ಅಡಗಿ ಕುಳಿತಿದ್ದ ಸಜ್ಜನ ಚಿಂತಕ ಮಾತ್ರ ಬರಹಗಳಲ್ಲಿ ಕಾಣಿಸುತ್ತಿದ್ದ. ಪಾ.ವೆಂ. ಅವರನ್ನು ಕುರಿತ ಪರಿಚಯಾತ್ಮಕ ಕೃತಿಯಿದು.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books