ಪಾಂಚಾಳ ಸಾಹಿತ್ಯ ಮತ್ತು ಸಂಸ್ಕೃತಿ

Author : ವೀರೇಶ ಬಡಿಗೇರ

Pages 268

₹ 300.00




Year of Publication: 2019
Published by: ಮಾಯಾ ಪ್ರಕಾಶನ
Address: ಕಮಲಾಪುರ, ಹೊಸಪೇಟೆ ತಾಲೂಕು, ಬಳ್ಳಾರಿ ಜಿಲ್ಲೆ- 583221

Synopsys

ಸುದೀರ್ಘ ಸಾಂಸ್ಕೃತಿಕ ಇತಿಹಾಸವಿರುವ ಪಾಂಚಾಳ ಅಥವಾ ವಿಶ್ವಕರ್ಮ ಸಮುದಾಯ ಕುರಿತು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳಲ್ಲಿ ಅಪಾರ ಮಾಹಿತಿ ಸಿಗುತ್ತದೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ವ್ಯಕ್ತಿ ಮತ್ತು ಜಾತಿ ಕೇಂದ್ರಿತವಾಗಿಸಿಕೊಂಡು ಮಾಡಿದ ಅಭಿಜಾತ ಮತ್ತು ಎಂಪೀರಿಕಲ್ ಅಧ್ಯಯನ ಮಾದರಿಗಳು ಪಾಂಚಾಳರಂತಹ ಕ್ರಿಯಾಶೀಲ ಸಮುದಾಯದ ನೆಲೆಗಳನ್ನು ಉಪೇಕ್ಷೆಗೆ ತಳ್ಳಿವೆ. ಬ್ರಾಹ್ಮಣ, ಲಿಂಗಾಯತ, ವೀರಶೈವ, ದಲಿತ, ಮಹಿಳೆ ಹೀಗೆ ವಿವಿಧ ಜಾತಿ ಅಥವಾ ಮತ ಆಧಾರಿತ ಅಧ್ಯಯನಗಳು ಕನ್ನಡದಲ್ಲಿ ನಡೆದಿವೆ. ಕರ್ನಾಟಕದ ರಾಜಕೀಯ, ಆರ್ಥಿಕ, ಧಾರ್ಮಿಕ, ಸಾಮಾಜಿಕ, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ನಿರ್ಮಿತಿಗೆ ಕಾರಣವಾದ ಪಾಂಚಾಳ ಸಮುದಾಯದ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರತಿನಿಧೀಕರಣದ ವಿಧಾನಗಳೆಲ್ಲವೂ ಈ ಕಾರಣದಿಂದದ ಅಧೀನ ನೆಲೆಗಳಿಗೆ ಸೀಮಿತಗೊಂಡಿವೆ. 

ಪಾಂಚಾಳ ಸಮುದಾಯ ಹಾಗೂ ಅವರ ತಿಳಿವನ್ನು ಕೇವಲ ಜಾತಿ ವರ್ಗ ಅಥವಾ ಸಮಾಜಶಾಸ್ತ್ರೀಯವಾದ ಅನುಕಂಪದ ಒಲವುಗಳಿಂದ ನೋಡದೆ, ಅವಗಣನೆಗೆ ಒಳಗಾದ ಅವುಗಳ ಬೌದ್ಧಿಕ ಹಾಗೂ ಸಾಂಸ್ಕೃತಿಕ ಚಹರೆಗಳನ್ನು ಕ್ರೋಢೀಕರಿಸಿ ನೋಡಬೇಕಾಗಿದೆ. ಸಾಮಾನ್ಯವಾಗಿ ಇಂಥ ಅಧ್ಯಯನಗಳು ಸಮುದಾಯದ ಭೌತಿಕ ಅಸ್ತಿತ್ವದಲ್ಲಿ ಆದ ಪಲ್ಲಟಗಳನ್ನು ಗುರುತಿಸುತ್ತವೆಯೇ ಹೊರತು ಆ ಸಮುದಾಯದ ಅರಿವಿನ ಪಲ್ಲಟದಲ್ಲಾದ ಸಂಗತಿಗಳನ್ನು ನೋಡುವುದಿಲ್ಲ ಹೀಗೆ ಅರಿವಿನ ಪಲ್ಲಟದ ರಾಜಕಾರಣವನ್ನು ಕಡೆಗಣಿಸಿ ಬೆಳೆಯುವ ಅಧ್ಯಯನಗಳಿಂದ ಯಾವುದೇ ಸಮುದಾಯದ ಏಳ್ಗೆಯನ್ನು ಬಯಸಲು ಸಾಧ್ಯವಿಲ್ಲ. ಇಂಥಹ ವಿಚಾರಗಳ ಆಳವಾದ ಅಧ್ಯಯನದೊಂದಿಗೆ ಈ ಕೃತಿ ರಚಿಸಲಾಗಿದೆ. 

About the Author

ವೀರೇಶ ಬಡಿಗೇರ
(04 April 1966)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ, ಕನ್ನಡದ ಹಸ್ತಪ್ರತಿ ತಜ್ಞರಲ್ಲಿ ಒಬ್ಬರು. 1966 ಏಪ್ರಿಲ್‌ 4 ರಂದು ಜನಿಸಿದರು. ಎಂ. ಎ., ಪಿಎಚ್.ಡಿ. ಹಾಗೂ ಬಿ.ಇಡ್, ಡಿಪ್ಲೊಮಾ ಇನ್ ಎಪಿಗ್ರಾಫಿ ಮಾಡಿದ್ದು, ಕನ್ನಡ ಸಾಹಿತ್ಯ, ಸಂಸ್ಕೃತಿ, ಜಾನಪದ, ಸಂಗೀತ, ತಂತ್ರಜ್ಞಾನ ಆಸಕ್ತಿ ಕ್ಷೇತ್ರಗಳು. 28 ವರ್ಷ ಕಾಲ ಬೋಧನೆ ಹಾಗೂ ಸಂಶೋಧನೆಯ ಅನುಭವ ಇದೆ. ಬಾಗಲಕೋಟೆಯ  ಪಿ. ಎಂ. ನಾಡಗೌಡಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ  ಅರೆಕಾಲಿಕ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. 1992 ರಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕೆಲಸಕ್ಕೆ ಸೇರಿದರು. 1996 ಆಗಸ್ಟನಿಂದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿಉಪನ್ಯಾಸಕರಾದರು. 1996ರಲ್ಲಿ ಉತ್ತರ ಕರ್ನಾಟಕದ ಜಾನಪದ ...

READ MORE

Related Books