ಪ್ಯಾಪಿಲಾನ್ ೨

Author : ಕೆ.ಪಿ. ಪೂರ್ಣಚಂದ್ರ ತೇಜಸ್ವಿ

Pages 264

₹ 162.00




Year of Publication: 2014
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570 009
Phone: 0821-2545774, 9448203730

Synopsys

ಜಾಗತಿಕ ಮಟ್ಟದಲ್ಲಿ ಪ್ರಸಿದ್ದವಾದ ಕೃತಿಯನ್ನು ಕನ್ನಡಿಗರಿಗೆ ನೀಡಬೇಕೆಂಬ ಆಶಯದಿಂದ ಕನ್ನಡಕ್ಕೆ ತಂದಿದ್ದಾರೆ. ಯಾವ ತಪ್ಪನ್ನೂ ಮಾಡದ ವ್ಯಕ್ತಿಯೊಬ್ಬ ಕೊಲೆಯ ಪ್ರಸಂಗದಲ್ಲಿ ಸಿಕ್ಕಿಹಾಕಿಕೊಂಡು ಜೀವಾವಧಿ ಶಿಕ್ಷೆಗೆ ಒಳಪಟ್ಟು ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರೋಚಕ ಕಥೆ ಇದು. ಈ ಕೃತಿಯ ಸಂಗ್ರಹಾನುವಾದೊಂದಿಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ ಕೆಂಜಿಗೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಜಾಗತಿಕ ಭೂಗತ ಲೋಕದ ಅನೇಕ ವೃತ್ತಾಂತಗಳು, ಸರಕಾರದ ಭದ್ರತಾವ್ಯವಸ್ಥೆಗಳ ಕ್ರೌರ್ಯದ ಅನಾವರಣ ಮಾಡುತ್ತಲೇ, ಶ್ರೀಸಾಮಾನ್ಯನೊಬ್ಬ ವ್ಯವಸ್ಥೆಯ ಅಡಿಯಲ್ಲಿ ಸಿಕ್ಕಿಕೊಂಡಾಗ ಅನುಭವಿಸುವ ಯಾತನೆಯ ಕರಾಳ ಚಿತ್ರಗಳು, ಆಧುನಿಕ ಸಂಸ್ಕೃತಿ-ನಾಗರಿಕತೆಯ ದರ್ಶನ, ಅದರ ಅಮಾನುಷತೆಯ ಹಲವು ಮುಖಗಳನ್ನು ಓದುಗರ ಮುಂದಿಡುತ್ತದೆ ಪ್ಯಾಪಿಲಾನ್. ಈ ಕೃತಿಯು ಮೂರು ಭಾಗಗಳಲ್ಲಿ ಪ್ರಕಟವಾಗಿದ್ದು; ಒಂದು ಮತ್ತು ಎರಡನೇ ಸಂಪುಟವನ್ನು ತೇಜಸ್ವಿ-ಪ್ರದೀಪ್ ಕೆಂಜಿಗೆ ಒಟ್ಟಿಗೆ ಸೇರಿ ಅನುವಾದಿಸಿದ್ದಾರೆ. ಮೂರನೇ ಸಂಪುಟವನ್ನು ತೇಜಸ್ವಿ ನಿಧನ ನಂತರ ಪ್ರದೀಪ್ ಕೆಂಜಿಗೆ ಅವರು ಈ ಹಿಂದಿನ ಸಂಪುಟಗಳ ಹಾಗೆಯೇ ಆಕರ್ಷಕವಾಗಿ ಕನ್ನಡೀಕರಿಸಿದ್ದಾರೆ.

About the Author

ಕೆ.ಪಿ. ಪೂರ್ಣಚಂದ್ರ ತೇಜಸ್ವಿ
(08 September 1938 - 05 April 2007)

ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ  ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...

READ MORE

Related Books