ಪೆಸಿಫಿಕ್ ದ್ವೀಪಗಳು (ಮಿಲನಿಯಮ್-೩)

Author : ಕೆ.ಪಿ. ಪೂರ್ಣಚಂದ್ರ ತೇಜಸ್ವಿ

Pages 112

₹ 87.00




Year of Publication: 2013
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570 009
Phone: 0821-2545774, 9448203730

Synopsys

ಮಿಲನಿಯಮ್ ಸರಣಿ ಸಹಸ್ರಾರು ವರ್ಷಗಳ ಹಲವು ವಿದ್ಯಮಾನಗಳನ್ನು ಕುರಿತ ಪುಸ್ತಕ ಮಾಲೆ. ಮಿಲನಿಯಮ್ ಸರಣಿಯ ಮೂರನೆ ಪುಸ್ತಕ ’ಪೆಸಿಫಿಕ್ ದ್ವೀಪಗಳು’. ಪೆಸಿಫಿಕ್ ದ್ವೀಪಗಳ ವೈವಿಧ್ಯಮಯ ಬದುಕನ್ನು ಚಿತ್ರಿಸುವ ಪುಸ್ತಕ. ನರಭಕ್ಷಕರಾಗಿದ್ದ ಫಿಜಿಯನ್ನರು ಮತ್ತು ಸಾವಿರಾರು ಮೈಲು ಪಯಣಿಸುವ ಸಾಹಸಿ ನಾವಿಕರೆನಿಸಿದ್ದ ಪಾಲಿನೇಷ್ಯನ್ನರಂಥ ಬುಡಕಟ್ಟು ಜನಾಂಗಗಳು ಪೆಸಿಫಿಕ್ ಸಾಗರದ ವಿಶಾಲ ಜಲರಾಶಿಯಲ್ಲಿ ವಿರಳವಾಗಿ ಹರಡಿಕೊಂಡಿರುವ ದ್ವೀಪಗಳಲ್ಲಿ ಬದುಕುತ್ತಿದ್ದರು. ನಾಗರೀಕ ಪ್ರಪಂಚದ ಸ್ಪರ್ಶವೇ ಇಲ್ಲದಿದ್ದ ಈ ಸುಂದರ ದ್ವೀಪಗಳು ಪಾಶ್ಚಾತ್ಯರು ಹೆಜ್ಜೆಯಿಟ್ಟಂತೆಲ್ಲ ಕಲುಷಿತಗೊಂಡವು. ಕ್ರೈಸ್ತ ಧರ್ಮ ಮತ್ತು ಆಧುನೀಕರಣದ ತುಳಿತಕ್ಕೆ ಸಿಕ್ಕಿ, ಅಲ್ಲಿನ ಮೂಲನಿವಾಸಿಗಳ ಬದುಕು ಅಸ್ತವ್ಯಸ್ತವಾಯಿತು. ಮಹಾಯುದ್ದಗಳ ಕಾಲದಲ್ಲಿ ಈ ದ್ವೀಪಗಳು ಎರಡೂ ಸೇನೆಗಳ ಸಮರ ವೇದಿಕೆಯಾಗಿದ್ದಲ್ಲದೆ, ಅನಂತರದಲ್ಲೂ ಇಲ್ಲಿ ಪರಮಾಣು ಸ್ಫೋಟ ಪ್ರಯೋಗಗಳು ನಡೆದವು. ಈ ಪುಸ್ತಕದ ಒಟ್ಟು ಉದ್ದೇಶ ಇದನ್ನು ಮನದಟ್ಟು ಮಾಡಿಸುವುದೇ ಆಗಿದೆ. ಪುಸ್ತಕದ ಕೊನೆಯಲ್ಲಿರುವ 'ರೈಟೀಯಾ' ಎಂಬ ಕಿರುಕಾದಂಬರಿ ಪೆಸಿಫಿಕ್ ದ್ವೀಪಗಳ ದುರಂತದ ಸ್ವರೂಪಗಳನ್ನು ಸೂಕ್ಷ್ಮವಾಗಿ ದಾಖಲಿಸುತ್ತದೆ.

About the Author

ಕೆ.ಪಿ. ಪೂರ್ಣಚಂದ್ರ ತೇಜಸ್ವಿ
(08 September 1938 - 05 April 2007)

ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ  ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...

READ MORE

Related Books