ಪಂಪ ಭಾರತಂ

Author : ಎನ್‌. ಅನಂತರಂಗಾಚಾರ್‌

Pages 791

₹ 300.00




Year of Publication: 2016
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018

Synopsys

ಲೇಖಕ ಎನ್. ಅನಂತರಂಗಾಚಾರ್ ಅವರು ಗದ್ಯಾನುವಾದ ಮಾಡಿದ ಕೃತಿ ʻಪಂಪ ಮಹಾಕವಿ ವಿರಚಿತ - ಪಂಪ ಭಾರತಂʼ. ಪುಸ್ತಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್‌ ಅವರು, “ಕನ್ನಡದ ಆದ್ಯ ಕವಿ ಪಂಪನ 'ಪಂಪ ಭಾರತಂ'ವು ಕನ್ನಡ ಸಾಹಿತ್ಯ ಪರಿಷತ್ತಿನ ಹೆಮ್ಮೆಯ ಪ್ರಕಟಣೆಗಳಲ್ಲಿ ಒಂದು. ಇದು, ಹಲವು ಮುದ್ರಣಗಳನ್ನು ಕಂಡ ಪ್ರಕಟಣೆಯೂ ಹೌದು. 1970ರ ದಶಕದಲ್ಲಿ ಮೊದಲ ಸಲ ಪ್ರಕಟಗೊಂಡ ಈ ಕಾವ್ಯದ ಗದ್ಯಾನುವಾದಗಳು ಕೇವಲ ಹಳೆಗನ್ನಡ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಅಧ್ಯಾಪಕರಿಗೆ ಮತ್ತು ಅಪಾರ ಸಂಖ್ಯೆಯ ಓದುಗ ವರ್ಗದ ನೆರವಿಗೂ ಬಂದುವು. ಹಳಗನ್ನಡ ಓದನ್ನು ಸುಲಭ ಮಾಡಿದ ಅದರ ರಸಘಟ್ಟೆಗಳನ್ನು ಮನನ ಮಾಡಿಕೊಳ್ಳಲು ಸಹಾಯಕ್ಕೆ ಬಂದ ಕೃತಿಗಳು ಇವು. ಅದಕ್ಕಾಗಿಯೇ ಇವು ಮತ್ತೆ ಮತ್ತೆ ಮರುಮುದ್ರಣ ಕಾಣುತ್ತಿವೆ. ಈ ಗ್ರಂಥಗಳ ಆರಂಭದಲ್ಲಿ ಬರೆದ ಸುದೀರ್ಘ ಪೀಠಿಕೆಗಳು ಈ ಮಹಾಕಾವ್ಯಗಳ ಓದಿಗೆ ಕೈ ದೀವಿಗೆಯಂತೆ ಇವೆ” ಎಂದು ಹೇಳಿದ್ದಾರೆ.

About the Author

ಎನ್‌. ಅನಂತರಂಗಾಚಾರ್‌
(23 May 1906 - 28 October 1997)

ಪ್ರಾಚೀನ ಸಾಹಿತ್ಯದಲ್ಲಿ ಬಹು ಆಸ್ಥೆ ಹೊಂದಿದ್ದ ಎನ್‌ ಅನಂತ ರಂಗಾಚಾರ್‌ರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ. ಎನ್.ಎಸ್. ಸುಬ್ಬರಾವ್, ಎಂ. ಹಿರಿಯಣ್ಣ, ಎ.ಆರ್. ವಾಡಿಯಾ ಇವರ ಗುರುಗಳು. ‘ಮಲ್ಲಿಕಾರ್ಜುನರ ಸೂಕ್ತಿ ಸುಧಾರ್ಣವ’ ಗ್ರಂಥವನ್ನು ಅಚ್ಚುಕಟ್ಟಾಗಿ ಸಂಶೋಧಿಸಿ ಸಂಕಲಿಸಿ ಅಕಾರಾದಿಯಾಗಿ ಪ್ರಕಟಿಸಿದ್ದಾರೆ. ಹಲವಾರು ಕೈಬರಹದ ಗ್ರಂಥಗಳ ಸಂಶೋಧನೆಗೆ ಮುಂದಾಗಿ ದೇಶದ ಒಳಗೂ ಹೊರಗೂ ಸಂಚಾರ ಕೈಗೊಂಡರು. ಇವರ ಪ್ರಮುಖ ಕ್ಷೇತ್ರ ಗ್ರಂಥ ಸಂಪಾದನೆ, ಸಂಶೋಧನೆ, ಸಾಹಿತ್ಯ ಚರಿತ್ರೆ ರಚನೆಗಳು. ಸೂಕ್ತಿ”ಸುಧಾರ್ಣವ’ದ 2000 ಪದ್ಯಗಳಿಗೆ, ಕಾವ್ಯಸಾರದ 3500 ಪದ್ಯಗಳಿಗೆ ತುಲನಾತ್ಮಕವಾಗಿ, ಕ್ರೋಢಿಕರಿಸಿ ಅಕಾರಾದಿಯನ್ನು ...

READ MORE

Related Books