ಪಂಪನ ನುಡಿಗಣಿ

Author : ಪಿ. ವಿ. ನಾರಾಯಣ

Pages 608

₹ 600.00




Year of Publication: 2014
Published by: ಕಾಮಧೇನು ಪುಸ್ತಕ ಭವನ
Address: 5/1 ನಾಗಪ್ಪ ಬೀದಿ ಶೇಷಾದ್ರಿಪುರಂ ಬೆಂಗಳೂರು -560020

Synopsys

ಕನ್ಪಡದ ಆದಿಕವಿ ಪಂಪನ ಪದಪುಂಜಗಳು ಯಾವತ್ತಿದ್ದರೂ ಸಾಹಿತ್ಯಾಸಕ್ತರ ಕುತೂಹಲದ ಖನಿಗಳು. ಹಾಗೆಂದೇ ಆತನ ಪದಗಳನ್ನು ವಿವರಿಸುವ ಸಾಹಸಕ್ಕೆ ಕೆಲ ವಿದ್ವಾಂಸರು ಕೈ ಹಾಕುತ್ತಲೇ ಇರುತ್ತಾರೆ. ಅಂತಹವರಲ್ಲಿ ಡಾ.ಪಿ.ವಿ. ನಾರಾಯಣ ಕೂಡ ಒಬ್ಬರು. 


ಪಂಪನ ಕೃತಿಗಳಾದ ’ಆದಿ ಪುರಾಣ’ ಮತ್ತು ’ಪಂಪ ಭಾರತ’ವನ್ನು ಕೂಲಂಕಷವಾಗಿ ಪರಿಶೀಲಿಸಿ ಅವುಗಳ ಆಧಾರದ ಮೇಲೆ ರಚಿಸಿದ ನುಡಿಕೋಶ ಇದು. ಪದಗಳ ಅರ್ಥದ ಜೊತೆಗೆ ಅವುಗಳು ಬಳಕೆಯಾದ ಸಂದರ್ಭವನ್ನೂ ವಿವರಿಸಲಾಗಿದೆ.
ಲೇಖಕ ಸುರೇಶ್‌ ನಾಗಲಮಡಕೆ ಅವರು ನಾಡಿನ ಪ್ರಸಿದ್ಧ ಪತ್ರಿಕೆ ವಿಜಯ ಕರ್ನಾಟಕದಲ್ಲಿ ಕೃತಿ ಕುರಿತು ಪ್ರಸ್ತಾಪಿಸುತ್ತಾ ’ಇತ್ತೀಚೆಗೆ ಕೆ ವಿ ನಾರಾಯಣ ಅವರು ‘ಅರಾಜಕತೆ’ ಎಂಬ ನುಡಿಯನ್ನು ವಿಶ್ಲೇಷಿಸುತ್ತಾ ಭಾಷಿಕವಾಗಿ ಚಲಿಸಿ ಆ ಪದ ನಮ್ಮ ಕಾಲದ ರಾಜಕೀಯ ನೆಲೆಗಟ್ಟನ್ನು ಹೇಳುವಲ್ಲಿ ಯಶಸ್ವಿಯಾಯಿತು. ಆ ರೀತಿಯ ಭಾಷಿಕ ಅರ್ಥಛಾಯೆಯಲ್ಲಿಯೇ ಸಮಕಾಲೀನ ದಂದುಗಗಳಿಗೆ ತೆರೆದುಕೊಳ್ಳುವ ವಿವರಗಳನ್ನು ನೀಡಬೇಕಾಗಿದೆ. ಪಿವಿಎನ್ ‘ಪಂಪನ ನುಡಿಗಣಿ’ಯಲ್ಲಿ ಆ ರೀತಿಯ ಅನೇಕ ಪದಗಳನ್ನು ಆಯ್ಕೆ ಮಾಡಿ ನೀಡಿದ್ದಾರೆ.

ಪಂಪನ ಹಾಗೆಯೇ ನಮ್ಮ ಹಲವು ಕವಿಗಳ ಪದಕೋಶಗಳು ಬೇಕಾಗಿವೆ, ಇಂತಹ ನುಡಿಗಣಿಗಳನ್ನು ಸಿದ್ಧಪಡಿಸುವಾಗ ಎಂಥ ಪದಗಳನ್ನು ಆರಿಸಿಕೊಳ್ಳಬೇಕೆಂಬ ಎಚ್ಚರವೂ ಇರಬೇಕು. ಹಿರಿಯರಾದ ಪಿವಿಎನ್ ಎಚ್ಚರ ಇಟ್ಟುಕೊಂಡೇ ಇದನ್ನು ರೂಪಿಸಿದ್ದಾರೆ. ಯುವತಲೆಮಾರಿನ ಬರೆಹಗಾರರು ‘ಪಂಪನ ನುಡಿಗಣಿ’ಯನ್ನು ಗಂಭೀರವಾಗಿ ಸ್ವೀಕರಿಸಬೇಕಾಗಿದೆ’ ಎಂದಿದ್ದಾರೆ.  

About the Author

ಪಿ. ವಿ. ನಾರಾಯಣ
(18 December 1942)

ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು.  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ  ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...

READ MORE

Related Books