ಪಂಚಾವರಂ

Author : ಮಹಾಂತೇಶ ನವಲಕಲ್

Pages 83

₹ 75.00




Year of Publication: 2021
Published by: ಶ್ರೀಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮ, ಕಲಬುರಗಿ- 585101

Synopsys

‘ಪಂಚಾವರಂ’ ಲೇಖಕ ಮಹಾಂತೇಶ ನವಲಕಲ್ ನಾಟಕ ಕೃತಿ. ಕೃತಿಗೆ ಡಾ. ಶರಣಬಸಪ್ಪ ವಡ್ಡನಕೇರಿ ಅವರ ಬೆನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಮಹಾಂತೇಶ ನವಲಕಲ್ ಕಥೆಗಾರರಾಗಿ ಹೆಸರುವಾಸಿಯಾದ ಹೆಸರು. ಅವರ ಬುದ್ಧಗಂಟೆಯ ಸದ್ದು ಯಾವ ಕಾಲದಲ್ಲೂ ಸದ್ದು ಮಾಡುವಂತಹದು. ಅದೇ ರೀತಿ ಇವರು ರಚಿಸಿದ ನಾಟಕ ನಾನು ಚಂದ್ರಗುಪ್ತನೆಂಬ ಮೌರ್ಯ ಸುಮಾರು 180 ಶೋ ಆಗಿ, ನಾಡಿನಾದ್ಯಂತ ಇವರ ಹೆಸರನ್ನು ಯಶಸ್ವಿ ನಾಟಕಕಾರರ ಹೆಸರಿನಲ್ಲಿ ಸೇರಿಸಿಕೊಂಡಿದೆ. ಮಹಾಂತೇಶರ ಬರವಣಿಗೆಯ ದೊಡ್ಡ ಶಕ್ತಿ ಎಂದರೆ ಎಲ್ಲವನ್ನು ಅಂತಃಕರಣದ ದುರ್ಭೀನಿನಿಂದ ನೋಡುವದು ಹಾಗೂ ಕಾರುಣ್ಯದ ಬೆಳಕಿನಲ್ಲಿ ಬದುಕನ್ನು ಹುಡುಕುವುದು. ಅವರ ಈ ಪಂಚಾವರಂ ನಾಟಕ ಬದುಕಿಗಾಗಿ ಒಪ್ಪಿತ ಶೋಷಿಣೆಯ ಅನೇಕ ಆಯಾಮಗಳನ್ನು ನಮಗೆ ಹೇಳುತ್ತದೆ. ನಾವು ಇಂತಹ ಕಾಲದಲ್ಲಿ ಇದ್ದೇವೆಯೇ ಎಂದು ಮನಸ್ಸು ಭಾರವಾಗುತ್ತದೆ ಇದು ನವಲಕಲ್ ಅವರ ಬರವಣಿಗೆಯ ಶಕ್ತಿ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಮಹಾಂತೇಶ ನವಲಕಲ್
(24 November 1970)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನವಲಕಲ್ಲಿನ ಮಹಾಂತೇಶ ನವಲಕಲ್ ಅವರು ಕೃಷಿ ಪದವೀಧರರು. ’ನೀರಿನ ನೆರಳು’ ಇವರ ಮೊದಲ ಕಥಾಸಂಕಲನ. ’ನಾನು ಚಂದ್ರಗುಪ್ತನೆಂಬ ಮೌರ್ಯ’ ನಾಟಕವು ಹಲವು ಯಶಸ್ವಿ ಪ್ರದರ್ಶನ ಕಾಣುವುದರ ಜೊತೆಗೆ ಪುಸ್ತಕವಾಗಿಯೂ ಪ್ರಕಟವಾಗಿ ಮೆಚ್ಚುಗೆ ಗಳಿಸಿದೆ. ಪುಂಚಾವರಂ ಕುರಿತಾದ ನಾಟಕ ವಿವಾದಕ್ಕೆ ಎಡೆ ಮಾಡಿತ್ತು. ಬೆಸಗರಹಳ್ಳಿ ರಾಮಣ್ಣ ಕಥಾಪುರಸ್ಕಾರ, ದೆಹಲಿ ಕರ್ನಾಟಕ ಸಂಘದ ನೃಪತುಂಗ ಪುರಸ್ಕಾರ, ಪಾಪು ಮರಸ್ಕಾರ, ಸಂಕ್ರಮಣ ಕಥಾ ಪುರಸ್ಕಾರ, ಅಮ್ಮ ಪುರಸ್ಕಾರ, ಉರಿಲಿಂಗ ಪೆದ್ದಿ ಪುರಸ್ಕಾರ, ರಾಜ್ಯೋತ್ಸವ ಪುರಸ್ಕಾರ, ಎರಡು ಬಾರಿ ಇವರ ಕತೆಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜಪುರೋಹಿತ ದತ್ತಿನಿಧಿಯ ಚಿನ್ನದ ...

READ MORE

Related Books