ಪಂಡಿತ ಎಸಗಿದ ಪ್ರಮಾದಗಳು

Author : ಪ್ರೇಮಶೇಖರ

Pages 200

₹ 210.00




Year of Publication: 2020
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020

Synopsys

ಲೇಖಕ ಪ್ರೇಮಶೇಖರ ಅವರು ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ಬರೆದ ಕೃತಿ-ಪಂಡಿತ ಎಸೆಗಿದ ಪ್ರಮಾದಗಳು. ‘ಎರಡು ದೇಶಗಳು ಒಮ್ಮತದಿಂದ ಒಂದು ಲಿಖತ ಒಪ್ಪಂದದಿಂದ ಸೃಷ್ಟಿಸದೇ ಕೇವಲ ಭಾರತ ಏಕಪಕ್ಷೀಯವಾಗಿ, ರಹಸ್ಯವಾಗಿ, ಅಂತರ ರಾಷ್ಟ್ರೀಯ ರಾಜಕಾರಣದ ನೀತಿ ನಿಯಮ, ಸಂಪ್ರದಾಯಗಳಿಗೆ ವಿರುದ್ಧವಾಗಿ ಗಡಿಯನ್ನು ಸೃಷ್ಟಿಸಿದ್ದು ಮತ್ತು ಅದರ ಬಗ್ಗೆ ಮಾತುಕತೆಗಳಿಗೆ ಅವಕಾಶವಿರಕೂಡದು ಎಂಬ ನಿಲುವನ್ನು ತಳೆದಿದ್ದು, ಗಡಿ ಸಮಸ್ಯೆಯನ್ನು ಶಾತಿಯುತವಾಗಿ ಪರಿಹರಿಸಲಾಗದ ಸ್ಥಿತಿಗೆ ಕೊಂಡೊಯ್ದಿತು. ನೆಹರೂ ಸರ್ಕಾರದ ಈ ನೀತಿ ಅವೈಜ್ಞಾನಿಕ, ಅತಾರ್ಕಿಕ, ರಾಜಕೀಯವಾಗಿ ಬೇಜವಾಬ್ದಾರಿಯುತ, ಸೇನಾ ದೃಷ್ಟಿಯಿಂದ ಆತ್ಮಹತ್ಯೀಯವಾಗಿತ್ತು’ ಎಂದು ಲೇಖಕರು ಚರ್ಚಿಸಿದ ಲೇಖನಗಳು ಒಳಗೊಂಡಿವೆ.

About the Author

ಪ್ರೇಮಶೇಖರ
(22 June 1960)

ಹೊರನಾಡ ಕನ್ನಡಿಗ ಪ್ರೇಮಶೇಖರ ಪಠ್ಯವಿಷಯಗಳ ಬಗ್ಗೆ ಇಂಗ್ಲೀಷಿನಲ್ಲಿ ಸಂಶೋಧನಾ ಲೇಖನಗಳನ್ನು ಹಾಗೂ ಕನ್ನಡದಲ್ಲಿ ಕಥೆಕಾದಂಬರಿಗಳನ್ನು ಬರೆಯುವುದರ ಮೂಲಕ ಬರವಣಿಗೆಯನ್ನಾರಂಭಿಸಿದವರು.. ಹುಟ್ಟಿದ್ದು 1960 ಜೂನ್ 22 ಕೊಳ್ಳೇಗಾಲದಲ್ಲಿ. ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿ, ಇಪ್ಪತ್ತೆರಡು ವರ್ಷಗಳ ಸುಧೀರ್ಘ ಕಾಲ ಪಾಂಡಿಚೆರಿ ವಿಶ್ವವಿದ್ಯಾಲಯದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಬೋಧಿಸಿ 2012ರಲ್ಲಿ ಸ್ವಯಂನಿವತಿ ಪಡೆದುಕೊಂಡಿದ್ದಾರೆ. ಪತ್ರಿಕಾರಂಗದಲ್ಲಿರುವ ಹಿತೈಷಿಗಳ ಬಯಕೆಯಂತೆ ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಕನ್ನಡದಲ್ಲಿ ಐನೂರರಷ್ಟು ಲೇಖನಗಳನ್ನು ಬರೆದಿದ್ದಾರೆ. ಇದುವರೆಗೆ ಎರಡು ಕಾದಂಬರಿಗಳನ್ನೂ, ಹತ್ತು ಕಥಾ ಸಂಕಲನಗಳನ್ನೂ, ಹನ್ನೊಂದು ಲೇಖನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರಿಗೆ ಕಥಾರಚನೆಯಲ್ಲಿ ತರಬೇತಿ ನೀಡುವ ಕಾರ್ಯಾಗಾರಗಳನ್ನು ...

READ MORE

Related Books