ಪರಾಗಸ್ಪರ್ಶ ನಲಿವಿನ ಟಚ್

Author : ಶ್ರೀವತ್ಸ ಜೋಶಿ

Pages 296

₹ 195.00




Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004

Synopsys

ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿನ ಆಯ್ದ ಅಂಕಣ ಬರಹಗಳ ಸಂಗ್ರಹವೇ ನಲಿವಿನ ಟಚ್ ಪುಸ್ತಕ. ಪ್ರತಿಯೊಂದು ಲೇಖನವೂ ಅದರ ವಸ್ತುನಿನ ಸುತ್ತ ಮಾತ್ರ ಸುತ್ತದೇ ವಿವಿಧ ಸಂಗತಿಗಳ ಸಾಧ್ಯತೆ, ಹೊಂದಿಕೆ, ಹೋಲಿಕೆಗಳಿಂದ ಸೃಜನಶೀಲವಾಗುತ್ತವೆ. ಯಾಂತ್ರಿಕ ಬದುಕಿನಲ್ಲಿ ನೈಜ ಜೀವನ ಸೌಂದರ್ಯವನ್ನೂ ಎಲ್ಲರಿಗೂ ತಿಳಿಸಬೇಕೆಂಬ ಅರ್ಥಪೂರ್ಣ ಕಾಳಜಿ ಮತ್ತು ಲಘು ಹಾಸ್ಯದ ಧಾಟಿಯಲ್ಲಿ ಓದುಗರನ್ನು ನಕ್ಕು ನಗಿಸುತ್ತಲೇ ಚಿಂತನೆಗೆ ಹಚ್ಚುವ ವಿಶಿಷ್ಟ ಕರಾಮತ್ತುಗಳು ಈ ಬರಹಗಳಲ್ಲಿ ವಿಫುಲವಾಗಿದೆ ತಾರ್ಕಿಕ ವಿಶ್ಲೇಷಣೆ, ಸಣ್ಣ ಸಣ್ಣ ಸಂಗತಿಗಲಲ್ಲೂ ಸ್ವಾರಸ್ಯವನ್ನು ಹುಡುಕುವ ಮನೋಭಾವ, ಅಕ್ಷರಗಳೊಂದಿಗೆ ಆಟವಾಡುತ್ತಾ ಪದವಿನೋದದಿಂದ ಹೊಸ ಹೊಸ ಅರ್ಥಗಳನ್ನು ಹುಟ್ಟುಹಾಕುತ್ತ ಸಾಗುವ ನವಿರಾದ ನಿರೂಪಣೆ ಇವೆಲ್ಲವೂ ಜೋಶಿಯವರ ಬರವಣಿಗೆಗೆತನ್ನದೇ ಛಾಪು ನೀಡುತ್ತದೆ. ಯಾವುದೇ ಪಕ್ಷ, ಪಂಗಡ, ಜಾತಿ, ಧರ್ಮ, ರಾಜಕೀಯದ ಬಗ್ಗೆ ಪೂರ್ವಗ್ರಹವಿಲ್ಲದೆ ಸಾಮಾನ್ಯ ವಿಷಯಗಳನ್ನೆತ್ತಿಕೊಂಡು ‘ಇದು ಹೀಗೂ ಇದೆಯೇ!’ ಎಂದು ಅಚ್ಚರಿಯಾಗುವಂತೆ ಬರೆಯುವ ಇವರ ಶೈಲಿ ಅಸಂಖ್ಯ ಓದುಗರ ಮನ ಗೆದ್ದಿದೆ. ಅಮೀಬದಿಂದ ಅನಂತದವರೆಗೂ ವಿಷಯಗಳು ಎಲ್ಲವನ್ನೂ ಒಳಗೊಂಡು ಸಾಗುತ್ತವೆ.. ವಾರದಿಂದ ವಾರಕ್ಕೆ ವಿಭಿನ್ನ ವಿಶಿಷ್ಟ ವಿಷಯಗಳನ್ನೆತ್ತಿಕೊಂಡು ಬರೆಯುವ ಜೋಶಿಯವರು ಕನ್ನಡದ ಮಟ್ಟಿಗೆ ಅಂಕಣ ಬರವಣಿಗೆಗೊಂದು ಹೊಸ ವ್ಯಾಖ್ಯೆ ಕೊಟ್ಟಿದ್ದಾರೆಂದರೆ ಉತ್ಪ್ರೇಕ್ಷೆಯಲ್ಲ.

About the Author

ಶ್ರೀವತ್ಸ ಜೋಶಿ

ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳದವರಾದ ಶ್ರೀವತ್ಸ ಜೋಶಿ ದಾವಣಗೆರೆಯ ಬಿ.ಡಿ.ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ತಾಂತ್ರಿಕ ಶಿಕ್ಷಣ ಪಡೆದರು. ಕಲಿತದ್ದು  ಎಂಜಿನಿಯರಿಂಗ್ ಆದರೂ ಕನ್ನಡದ ಬಗ್ಗೆ ಅಭಿಮಾನವಷ್ಟೇ ಅಲ್ಲದೆ ಪತ್ರಿಕಾರಂಗದ ಬಗ್ಗೆ ಆಸಕ್ತಿಯೂ ಹೊಂದಿದ್ದಾರೆ. ಪ್ರಸ್ತುತ ಅಮೆರಿಕದ ವರ್ಜೀನಿಯಾದಲ್ಲಿ ವೃತ್ತಿಜೀವನ ನಡೆಸುತ್ತಿರುವ ಶ್ರೀವತ್ಸ ಜೋಶಿ ಕನ್ನಡದ ಪ್ರಸಿದ್ಧ ಪತ್ರಿಕೆಗಳ ಅಂಕಣ ಬರಹಗಾರರಾಗಿಯೂ ಕೂಡ ಹೆಸರು ಮಾಡಿದ್ದಾರೆ. ಕನ್ನಡ ನಾಡು, ನುಡಿ, ಭಾಷೆಯ ಬಗ್ಗೆ ಅಭಿಮಾನ ಹೊಂದಿರುವ ಇವರು ದಟ್ಸ್ ಕನ್ನಡ.ಕಾಮ್ ಅಂತರ್ಜಾಲ ಕನ್ನಡ ಪತ್ರಿಕೆಯಲ್ಲಿ ಸತತ ಐದು ವರ್ಷಗಳ ವರೆಗೆ ವಿಚಿತ್ರಾನ್ನ ಹೆಸರಿನ ಸಾಪ್ತಾಹಿಕ ಅಂಕಣವನ್ನು ...

READ MORE

Related Books