ಪರಿಸರ ಪ್ರಜ್ಞೆ (ಲೇಖನಗಳ ಸಂಕಲನ)

Author : ಪ. ಮಾನು ಸಗರ

Pages 100

₹ 100.00




Year of Publication: 2021
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ
Address: ಗುಲಬರ್ಗಾ ವಿಶ್ವವಿದ್ಯಾಲಯ ರಸ್ತೆ, ಕಲಬುರಗಿ

Synopsys

ಲೇಖಕ ಪ.ಮಾನು ಸಗರ ಅವರು ಪರಿಸರ ಸಂಬಂಧಿ ಬರೆದ ಬರಹಗಳ ಕೃತಿ-ಪರಿಸರ ಪ್ರಜ್ಞೆ. ಪರಿಸರ ಎಂದರೇನು, ಪರಿಸರ ವಿಜ್ಞಾನ, ಜೀವ ಪರಿಸರ ವ್ಯವಸ್ಥೆ, ಜೀವವೈವಿಧ್ಯತೆ, ಪರಿಸರ ಮಾಲಿನ್ಯದ ಕಾರಣಗಳು,ಪರಿಸರ ಉಳಿಸುವ ವಿಧಾನಗಳು, ಮರಗಳ ಔದಾರ್ಯತೆ, ಪರಿಸರ ಕಾಯ್ದೆಗಳು, ಅಂತಾರಾಷ್ಟ್ರೀಯ ಸಮ್ಮೇಳನಗಳು, ಅರಣ್ಯ ಪರಿಸರ ಘೋಷಣೆಗಳು, ಸೇರಿದಂತೆ ಮರಗಳನ್ನು ರಕ್ಷಿಸಿದ ಮಹನೀಯರಾದ ಅಮೃತ ದೇವಿಯ ಅಮರತ್ವ, ಸುಂದರಲಾಲ್ ಬಹುಗುಣ, ಗೌರಾದೇವಿ, ಚಂಡಿಕಾ ಪ್ರಸಾದ್ ಭಟ್, ಸಾಲುಮರದ ತಿಮ್ಮಕ್ಕ ಕುರಿತು ಲೇಖನಗಳನ್ನು ಒಳಗೊಂಡಿದೆ. ಪರಿಸರ ಪ್ರೇಮಿಗಳಿಗೆ ಒಂದು ಆಕರ ಗ್ರಂಥವಾಗಿದೆ.

About the Author

ಪ. ಮಾನು ಸಗರ
(02 August 1950)

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಪ. ಮಾನು ಸಗರ, ಎಂ.ಎ. ಪದವೀಧರರು. ಅರಣ್ಯ ಇಲಾಖೆಯ ಆಡಳಿತ ವ್ಯವಸ್ಥಾಪಕರಾಗಿ ನಿವೃತ್ತಿಯಾಗಿದ್ದು, ಸಗರ ನಾಡ ಸಂಪದ (ಕವನ ಸಂಕಲನ) ಕಂಪನ (ಕವನ ಸಂಕಲನ), ಚಿತ್ತ-ಚಿತ್ತಾರ (ಹನಿಗವನಗಳು), ಪ್ರೊ. ಸೂಗಯ್ಯ ಹಿರೇಮಠ ಸಂಸ್ಮರಣಾ ಗ್ರಂಥ ’ಸಗರನಾಡಿನ ಮಾಣಿಕ್ಯ’ , ಧಾರ್ಮಿಕ, ಅಧ್ಯಾತ್ಮಿಕ, ಶರಣ ಚಳವಳಿ, ಜನಪದ ಸಾಹಿತ್ಯ ಹೀಗೆ ಹಲವು ಆಯಾಮಗಳನ್ನು ಬಿಂಬಿಸುವ ’ಸಗರನಾಡು ಪರಂಪರೆ’ ಕೃತಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವು ಪ್ರಶಸ್ತಿ-ಗೌರವಗಳು ಸಂದಿವೆ. ...

READ MORE

Related Books