ಪಾವನಗಂಗೆಯರು ಸಂಪುಟ -1

Author : ಎಸ್. ವಿ. ಪ್ರಭಾವತಿ

Pages 204

₹ 325.00




Year of Publication: 2022

Synopsys

ಎಸ್ . ವಿ ಪ್ರಭಾವತಿ ಅವರ ಕೃತಿ ಪಾವನಗಂಗೆಯರು ಸಂಪುಟ -1. " ಅನುದಿನ( ದ) ಅಂತರಗಂಗೆ " ಎಂಬ ಹೆಸರಿನ ಎರಡು ಸಂಪುಟಗಳಲ್ಲಿ ಪ್ರಕಟವಾದ ಈ ಎಂಟು ಕಾದಂಬರಿಗಳ ಪ್ರತಿಗಳು ಲಭ್ಯವಿಲ್ಲವಾಗಿ ಅದೇ ಪ್ರಕಾಶಕರಿಂದ ನಾಲ್ಕು ಸಂಪುಟಗಳಲ್ಲಿ " ಪಾವನ ಗಂಗೆಯರು " ( ಏಕೆಂದರೆ ಪ್ರತಿಭಾ ನಂದಕುಮಾರ್ ಅವರ ಆತ್ಮಕಥೆ ಯ ಹೆಸರು ಅನುದಿನದ ಅಂತರಗಂಗೆ ಎಂದಿದೆ ) ಎಂಬ ಹೆಸರಿನಿಂದ ಪ್ರಕಟವಾಗಿದೆ.

ಲೇಖಕಿಯ ಮಾತಿನಲ್ಲಿ, ‘.........ನೆನಪಿನಂಗಳದಲಿ ನಿಂತು ................ ಹದಿನೈದು ವರ್ಷಗಳ ನಂತರ ಹಿಂದಿರುಗಿ ನೋಡಿದಾಗ ನೆನಪುಗಳು ನುಗ್ಗಿ ನುಗ್ಗಿ ಬರುತ್ತಿವೆ . ಕವಿತೆಗಳ ಮೂಲಕವೇ ಸಾಹಿತ್ಯ ಪತ್ರಿಕೆಗಳಲ್ಲಿ ಅಸ್ತಿತ್ವ ಹುಡುಕುತ್ತಿದ್ದ ನನಗೆ ಕಾದಂಬರಿ ಬರೆಯುವ ಪ್ರಸ್ತಾಪ ಒದಗಿದ್ದು ಆಕಸ್ಮಿಕವೇ . ವಾರಪತ್ರಿಕೆಯೊಂದಕ್ಕೆ ಬರೆದ ಅರವತ್ತು ಪುಟಗಳ " ದ್ರೌಪದಿ " ನವಕರ್ನಾಟಕ ಪ್ರಕಾಶನದ ರಾಜಾರಾಂ ಅವರ ಕಣ್ಣಿಗೆ ಬಿದ್ದದ್ದು , ಅವರು ಅದನ್ನು ಮೆಚ್ಚಿ , ಮೂರರಷ್ಟು ಮಾಡಿಕೊಟ್ಟರೆ ಪ್ರಕಟಿಸುವುದಾಗಿ ಹೇಳಿದ್ದು , ಬಿಡುವೇ ಇಲ್ಲ ಎಂದಿದ್ದ ಜಿ ವೆಂಕಟಸುಬ್ಬಯ್ಯನವರು ಅದನ್ನು ಬಹುವಾಗಿ ಮೆಚ್ಚಿ ಮುನ್ನುಡಿ ಬರೆದದ್ದು , ಲಂಕೇಶ್ ಪತ್ರಿಕೆ ಅದಕ್ಕೆ ನೆಗೆಟಿವ್ ಎಂಬಂತಹ ಪ್ರಚಾರ ಕೊಟ್ಟದ್ದು ........ಎಲ್ಲಾ ಮುಗಿದ ಕತೆಯಾದರೂ ಇದೀಗ ನಡೆದಂತೆ ಅನಿಸುತ್ತಿದೆ . ಹೀಗಾಗಿ ನನ್ನ ಮೊದಲ ಕಾದಂಬರಿ ಯಿಂದಲೇ ನನಗೆ ತುಂಬಾ ಪ್ರೋತ್ಸಾಹ , ಮೆಚ್ಚುಗೆ ಎಲ್ಲಾ ದೊರೆತವು . ಅದಕ್ಕೆ ಅತ್ತಿಮಬ್ಬೆ ಟ್ರಸ್ಟ್ ನ ಪ್ರಶಸ್ತಿ ದೊರೆತು ಮೂರು ಮುದ್ರಣ ಕಂಡು ಗುಲಬರ್ಗಾ ಮತ್ತು ಬಿಜಾಪುರ ವಿ ವಿ ಗಳ ಪಠ್ಯವಾಯಿತು’ ಎಂದಿದ್ದಾರೆ. ಅಲ್ಲದೆ, ’ದ್ರೌಪದಿ ಬರೆಯುತ್ತಿರುವಾಗಲೇ " ಕುಂತಿ " ಬಗ್ಗೆ ಬರೆಯಬಹುದೆಂದು ನನಗೆ ಅನಿಸುತ್ತಿತ್ತು . ಬೆಂಗಳೂರಿನ ಮಹಿಳಾ ಚಳವಳಿ ಯಲ್ಲಿ ಬೆರೆತ ಮೇಲೆ ಇಡೀ ರಾಮಾಯಣ ಮಹಾಭಾರತ ಗಳನ್ನು ಸ್ತ್ರೀ ವಾದೀ ದೃಷ್ಟಿಕೋನದಿಂದ ಬರೆಯಬಹುದೆಂಬ ಮಾತು ಮತ್ತೆ ಮತ್ತೆ ಕಿವಿಯ ಮೇಲೆ ಬಿದ್ದಾಗ "ಕುಂತಿ " ಹುಟ್ಟಿದಳು . ಇಲ್ಲಿ ಸ್ಮರಣ ತಂತ್ರ ಬಳಸದೇ ನೇರವಾದ ನಿರೂಪಣೆ ಬಳಸಿದೆ. ಎಲ್ ಎಸ್ ಶೇಷಗಿರಿರಾವ್ ಅವರು ಬರೆದ ಮುನ್ನುಡಿ ಯಲ್ಲಿ ನನ್ನನ್ನು ಹೊಗಳಿದ್ದಾರೊ ತೆಗಳಿದ್ದಾರೋ ತಿಳಿಯಲಿಲ್ಲ .ಕೆಲವರಂತೂ ಅವರು ಬರೆದ ಮುನ್ನುಡಿ ಯನ್ನು ಬಿಟ್ಟು ಪ್ರಕಟಿಸುವಂತೆ ನನಗೆ ಸೂಚಿಸಿದರು . ಆದರೆ ನಾನು ಹಾಗೆ ಮಾಡದೇ ಅವರು ಬರೆದುದನ್ನು ಯಥಾವತ್ತಾಗಿ ಬಳಸಿಕೊಂಡೆ . ಈಗ ನೋಡಿದರೆ ಅವರು ಬರೆದುದು ಅತ್ಯುತ್ಕೃಷ್ಟ ವಾದ ವಿಮರ್ಶೆ ಅನಿಸುತ್ತದೆ .ಕುಂತಿ ಬರೆದ ಮೇಲೆ ನನಗನ್ನಿಸಿತು ಈ ಎರಡೂ ಕಾದಂಬರಿಗಳ ಮೇಲೆ ಎಸ್‌ ಎಲ್‌ ಭೈರಪ್ಪನವರ " ಪರ್ವ " ದ ಗಾಢವಾದ ಪ್ರಭಾವಕ್ಕೆ ಒಳಗಾಗಿವೆ ಎಂದು . ಅದರಿಂದ ಬಿಡಿಸಿಕೊಳ್ಳಬೇಕು ಎಂದು .

About the Author

ಎಸ್. ವಿ. ಪ್ರಭಾವತಿ
(27 May 1950)

ಸ್ತ್ರೀವಾದಿ ಚಿಂತಕಿ ಎಂದೇ ಹೆಸರು ಗಳಿಸಿರುವ ಪ್ರಭಾವತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ‘ಕನ್ನಡ ಸಾಹಿತ್ಯದಲ್ಲಿ ದ್ರೌಪದಿ’ ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆ ಪ್ರಾರಂಭಿಸಿದ ಅವರ ಮೊದಲ ಕವನ ಪ್ರಕಟವಾದುದು ಕನ್ನಡ ಪ್ರಭ ಪತ್ರಿಕೆಯಲ್ಲಿ. ನಂತರ ಕಥೆ, ಕವನ, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ನಾಲ್ಕು ಕಿರು ಕಾದಂಬರಿಗಳು ಮುಂಬಯಿಯ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಪ್ರಕಟ. ಕನ್ನಡಿಗರ ಕನ್ನಡಿ, ...

READ MORE

Related Books