ಪಾವನಗಂಗೆಯರು ಸಂಪುಟ -2

Author : ಎಸ್. ವಿ. ಪ್ರಭಾವತಿ

Pages 290

₹ 325.00




Year of Publication: 2022

Synopsys

" ಅನುದಿನ( ದ) ಅಂತರಗಂಗೆ " ಎಂಬ ಹೆಸರಿನ ಎರಡು ಸಂಪುಟಗಳಲ್ಲಿ ಪ್ರಕಟವಾದ ಈ ಎಂಟು ಕಾದಂಬರಿಗಳ ಪ್ರತಿಗಳು ಲಭ್ಯವಿಲ್ಲವಾಗಿ ಅದೇ ಪ್ರಕಾಶಕರಿಂದ ನಾಲ್ಕು ಸಂಪುಟಗಳಲ್ಲಿ " ಪಾವನ ಗಂಗೆಯರು " ಎಂಬ ಹೆಸರಿನಿಂದ ಪ್ರಕಟವಾಗಿದೆ. ಇದರ 2ನೇ ಸಂಪುಟ ಪಾವನಗಂಗೆಯರು ಸಂಪುಟ -2 (ಸೀತೆ-ಅಹಲ್ಯಾ).

ಲೇಖಕಿಯ ಮಾತಿನಲ್ಲಿ, ’ಅಹಲ್ಯಾ ಬರುವುದು ರಾಮಾಯಣ ದಲ್ಲಿ . ಅದೂ ಉಪಕಥೆ ಯಾಗಿ . ಕೇವಲ 38 ಶ್ಲೋಕಗಳಲ್ಲಿ ಬರುವ ಕತೆಗೆ ಪುರಾಣ ನಾಮ ಚೂಡಾಮಣಿಯ ವಿವರಗಳನ್ನು ಬೆರೆಸಿದರೂ ಮೂಲವಸ್ತು ಅತ್ಯಲ್ಪ . ಹೀಗಾಗಿ ನನ್ನ ಕಲ್ಪನೆಯನ್ನೇ ಆಶ್ರಯಿಸಿ ಅಹಲ್ಯಾ ಇಂದ್ರನನ್ನು ಬಯಸಿದ್ದನ್ನು ಯುಕ್ತಿ ಯುಕ್ತ ವಾಗಿ ಸಮರ್ಥಿಸಿ ಅವಳನ್ನು ಕಲ್ಲಾಗಿಸದೇ , ಗೌತಮನ ಸಾಧನೆಯನ್ನು ಅಲ್ಲಗಳೆಯದೇ ರಾಮನನ್ನು ಮಾನವೀಯವಾಗಿಸಿದ್ದು ನನಗೆ ಅತ್ಯಂತ ಪ್ರೀತಿಯ ವಿಷಯವಾಗಿತ್ತು . ಈ ಚಿಕ್ಕ ಕಾದಂಬರಿ ನನ್ನ ಮಹತ್ವಾಕಾಂಕ್ಷೆಯದಾಗಿತ್ತು .ಮಲ್ಲಿಕಾ ಘಂಟಿಯವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದರು. ಈ ಪುಸ್ತಕವನ್ನೋದಿದ ನನ್ನ ವಿದ್ಯಾರ್ಥಿನಿಯರೂ ರಾಮನ ಮಾತೆಲ್ಲ ನಿಮ್ಮದೇ ಎಂದರು . ಅಷ್ಟು ದಟ್ಟವಾಗಿ ಅಲ್ಲಿ ಸ್ತ್ರೀ ಸಂವೇದನೆ ಪ್ರತಿಪಾದಿತವಾಗಿತ್ತು . ಅಹಲ್ಯೆಯನ್ನು ಒಂಟಿಯಾಗಿ ನಿಲ್ಲಿಸಬೇಕಿತ್ತು ಎಂದರು ಕೆಲ ಉಗ್ರ ಸ್ತ್ರೀ ವಾದಿಗಳು . ಸ್ತ್ರೀ ವಾದವು ಆಧುನಿಕ ಪರಿವೇಷಗಳನ್ನು ಕಳಚಿ ಕೊಂಡು ಮಾಗುತ್ತಿರುವ ಈ ದಿನಗಳಲ್ಲಿ ಅಂತಹ ಅತಿರೇಕದ ಅವಶ್ಯಕತೆ ನನಗೆ ಕಾಣಲಿಲ್ಲ. ಅದು ನನ್ನ ಉದ್ದೇಶವೂ ಆಗಿರಲಿಲ್ಲ . ಆದರೆ ಭಗವಾನ್ ಬುದ್ಧ ನ ಹೆಂಡತಿ ಯಶೋಧರೆಯನ್ನು ಕೇಂದ್ರವಾಗಿಟ್ಟುಕೊಂಡು ಬರೆಯುವ ವೇಳೆಗೆ ಇಡೀ ಆ ಕಾಲ ಘಟ್ಟದ ಚಿತ್ರಣವಾದರೆ ಕೃತಿಗೆ ಇನ್ನೂ ತೂಕ ಎಂಬ ಕೆಲವು ಹಿತೈಷಿಗಳ ಮಾತು ಕೇಳಿ ಈ ಕಾದಂಬರಿ ಯ ಪ್ರಾರಂಭದಲ್ಲಿ ವೇದನಿಂದೆ ಏಕೆ ಪ್ರಾರಂಭವಾಯಿತು ಎಂಬ ಪ್ರಶ್ನೆಯ ಹಿನ್ನೆಲೆಯಲ್ಲಿ ಬೌದ್ಧ ಧರ್ಮದ ಅಗತ್ಯವನ್ನು ಪ್ರತಿಪಾದಿಸಬಹುದೆನ್ನಿಸಿತು . ಅದಕ್ಕೆ ಸಂಬಂಧಿಸಿದ ಪುಟಗಳು ಸೂಕ್ಷ್ಮವಾಗಿವೆ , ಸೂಚ್ಯವಾಗಿವೆ , ಪ್ರಾಜ್ಙರಿಗೆ ಅರ್ಥವಾಗುತ್ತದೆ . ಅದು " ಸರಿ " ಯಾಗಿದೆಯೇ ಎಂಬ ಕಾಳಜಿ ನನಗೆ ಮುಖ್ಯವಲ್ಲ. ಗೌತಮ ಬುದ್ಧನ ಸಾಧನೆಯನ್ನು ನಗಣ್ಯ ವಾಗಿಸದೇ ಯಶೋಧರೆಯ ಅಳಲನ್ನು ಚಿತ್ರಿಸಿರುವುದು , ಶುದ್ಧೋಧನನ ಪಾತ್ರಕ್ಕೆ ಮಹತ್ವ ವಿತ್ತಿರುವುದು ಇವು ಗಳನ್ನು ಪ್ರಸಂಶಿಸಿದ ವಿಮರ್ಶಾತ್ಮಕ ಇದರ ಕೆಲವು ಘಟನೆಗಳು ಇತಿಹಾಸ ದಿಂದ ದೂರವಾಗಿವೆ ಅಥವಾ ಇತಿಹಾಸದಲ್ಲಿ ಇಲ್ಲ ಎಂಬರ್ಥದ ವಿಮರ್ಶೆ ಬರೆದರು . ಹಾಗೆ ನೋಡಿದರೆ ಸಿದ್ಧಾರ್ಥನಿಗೆ ಯಶೋಧರೆಯಲ್ಲದೆ ಇನ್ನೂ ಹಲವು ಹೆಂಡಿರಿದ್ದರು ಎಂಬ ಚರಿತ್ರೆ ಯ ಅಂಶವನ್ನೇ ನಾನು ಕೈ ಬಿಟ್ಟಿರುವೆ . ಹಾಗಾಗಿ ಒಂದು ಕಾದಂಬರಿ ಯಾಗಿ ಇದು ಚರಿತ್ರೆ ಯನ್ನು ಅಷ್ಟೊಂದು ಪಾಲಿಸಬೇಕಿಲ್ಲ ಎಂಬುದು ನನ್ನ ನಂಬಿಕೆ.

ಸೀತಾ , ಶಾಕುಂತಲಾ ಬರೆಯುವ ವೇಳೆಗೆ ಉದ್ಯೋಗ ಪರ್ವ ಮತ್ತು ಸಾಂಸಾರಿಕ ಪರ್ವಗಳೆರಡೂ ಅನಿರೀಕ್ಷಿತ ತಿರುವು ತೆಗೆದು ಕೊಂಡು ಬದುಕನ್ನು ಅಸಹನೀಯವಾಗಿಸಿದ್ದವು . ಅದರ ಛಾಯೆ ಈ ಎರಡರ ಮೇಲೆ ಆಗಿದ್ದರೂ ಗುಣಮಟ್ಟವನ್ನು ಕಾಯ್ದುಕೊಂಡಿರುವೆ . ಆ ಕಾಲಘಟ್ಟದ ಚಿತ್ರಣ ಎಂಬ ಉದ್ದೇಶದಿಂದ * ಸೀತಾ * ಕಾದಂಬರಿಗೆ ಹಿನ್ನೆಲೆಯಾಗಿ ವಾಲ್ಮೀಕಿ ಎಂಬ ಪರಂಪರೆಯೊಂದಿಗೆ ರಾಮಾಯಣ ಕತೆ ಯ ವೈದಿಕ ರೂಪವನ್ನು ರಚನೆಗಿಳಿಸುವ ಕಾಲದ ಜೈನ ಬೌದ್ಧ ಜಾನಪದ ಕತೆಗಳ ಎಳೆಗಳನ್ನು ಸೂಚ್ಯವಾಗಿ ವಿಶ್ಲೇಷಣೆ ಮಾಡಿ ಬರೆದೆ . ಸೀತೆಯ ಪಾತ್ರ ದ ಅನಿಸಿಕೆ ವಾಲ್ಮೀಕಿ ಯಲ್ಲಿ ಅತ್ಯಲ್ಪ . ಅದನ್ನು ಈಗಾಗಲೇ ತೆಲುಗು ಪ್ರತಿಭಟನಾ ಸಾಹಿತ್ಯ ವು ಪ್ರಶ್ನಿಸಿಬಿಟ್ಟಿದೆ - ಪೋಲಂಕಿ ರಾಮಮೂರ್ತಿ , ಮುಪ್ಪಾಳು ರಂಗನಾಯಕಮ್ಮ , ಆರುದ್ರ - ಒಬ್ಬ ವಿಮರ್ಶಕರು ಗುರುತಿಸಿರುವಂತೆ ಸೀತೆಯ ಪಾತ್ರ ಸ್ಪೋಟಗೊಳ್ಳುವುದಿಲ್ಲ ಎಂಬುದು ಆಶ್ಚರ್ಯ ದ ಸಂಗತಿ ಯಾದರೂ ಸತ್ಯ .

About the Author

ಎಸ್. ವಿ. ಪ್ರಭಾವತಿ
(27 May 1950)

ಸ್ತ್ರೀವಾದಿ ಚಿಂತಕಿ ಎಂದೇ ಹೆಸರು ಗಳಿಸಿರುವ ಪ್ರಭಾವತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ‘ಕನ್ನಡ ಸಾಹಿತ್ಯದಲ್ಲಿ ದ್ರೌಪದಿ’ ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆ ಪ್ರಾರಂಭಿಸಿದ ಅವರ ಮೊದಲ ಕವನ ಪ್ರಕಟವಾದುದು ಕನ್ನಡ ಪ್ರಭ ಪತ್ರಿಕೆಯಲ್ಲಿ. ನಂತರ ಕಥೆ, ಕವನ, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ನಾಲ್ಕು ಕಿರು ಕಾದಂಬರಿಗಳು ಮುಂಬಯಿಯ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಪ್ರಕಟ. ಕನ್ನಡಿಗರ ಕನ್ನಡಿ, ...

READ MORE

Related Books