ಪೆರಿಯಾರ್ ಫಿಲಾಸಫಿ

Author : ಕೆ. ಮಾಯಿಗೌಡ

Pages 101

₹ 59.00




Year of Publication: 2014
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560009
Phone: 08040114455

Synopsys

ತಮಿಳುನಾಡು ಮೂಲದ ಎಂ. ಪೆರಿಯಾರ್ ರಾಮಸ್ವಾಮಿ ಆಯ್ಯಂಗಾರ್ ಅವರ ವಿಚಾರಧಾರೆ ಕುರಿತು ತೆಲುಗಿನಲ್ಲಿ ಲೇಖಕ ಕೆ. ವೀರಮಣಿ ಅವರು ಬರೆದ ಕೃತಿಯನ್ನು ಲೇಖಕ ಕೆ. ಮಾಯಿಗೌಡರು ಕನ್ನಡಕ್ಕೆ ಅನುವಾದಿಸಿದ ಕೃತಿ-ಪೆಯಾರ್ ಫಿಲಾಸಫಿ. ಭಾರತದ ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದಲ್ಲದೇ ಇಂದಿಗೂ ಆ ಪದ್ಧತಿ ಮುಂದುವರಿದುಕೊಂಡು ಬರುವ ಹುನ್ನಾರವನ್ನು ಆ ಕಾಲಕ್ಕೇ ಅವರು ಪ್ರಬಲವಾಗಿ ಖಂಡಿಸುತ್ತಾ ಬಂದವರು. ಭಾರತದಲ್ಲಿ ಜಾತಿ ವ್ಯವಸ್ಥೆ ಹೋಗಬೇಕಾದರೆ ಮೊದಲು ಇಲ್ಲಿಯ ಪುರೋಹಿತಶಾಹಿಯನ್ನು ಹೊಡೆದೋಡಿಸಬೇಕು. ಆಗ ಮಾತ್ರ ಎಲ್ಲ ರೀತಿಯ ಶೋಷಣೆಗಳಿಂದ ಭಾರತ ಮುಕ್ತವಾಗುತ್ತದೆ ಎಂದು ಖಡಾಖಂಡಿತವಾಗಿ ಹೇಳಿದ ನಾಯಕ ಈತ. ಪೆರಿಯಾರರ ವಿಚಾರಗಳನ್ನು ಒಂದೆಡೆ ಕಟ್ಟಿಕೊಟ್ಟ ಕೃತಿ ಇದು.

About the Author

ಕೆ. ಮಾಯಿಗೌಡ

ಕೆ. ಮಾಯಿಗೌಡ ಅವರು ಮಂಡ್ಯ ಜಿಲ್ಲೆಯ ನವಿಲುಮಾರನಹಳ್ಳಿಯವರು. ನಿವೃತ್ತ ಮುಖ್ಯೋಪಾಧ್ಯಯರು ರಾಷ್ಟ್ರಕವಿ ಕುವೆಂಪು ಅವರೊಂದಿಗೆ ಒಡನಾಟ. ಸ್ವಾತಂತ್ಯ್ರಯೋಧ ಕನಕಪುರದ ಕರಿಯಪ್ಪನವರು, ಅಂಬೇಡ್ಕರ್, ಕೋವೂರ್, ಬಸವ, ಮಾರ್ಕ್ಸ್ , ಪೆರಿಯಾರ್ ಚಿಂತನೆಗಳಿಂದ ಪ್ರೇರಣೆ. ಸ್ಥಳೀಯ ಪತ್ರಿಕೆಯಲ್ಲೂ ಕೆಲಸ ಮಾಡಿದರು. ಮಾಜಿ ಸಚಿವ ಬಿ. ಬಸಲಿಂಗಪ್ಪ ಅವರ ಒಡನಾಟದಿಂದ (1978) ಪಾಂಡವಪುರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. ನಂತರ, ದೇವರಾಜ ಅರಸು ಅವರೊಂದಿಗೆ ಇದ್ದ ಆತ್ಮೀಯ ಒಡನಾಟವು ಇತ್ತು.  ಕೋವೂರು ಕಂಡ ವೈಜ್ಞಾನಿಕ ಸತ್ಯ-ಇವರ ಅನುವಾದಿತ ಕೃತಿ.   ...

READ MORE

Related Books