ಪಿಸುಣಾರಿ ಪ್ರೇಮ ಪ್ರಕರಣ

Author : ರಾಜೇಂದ್ರ ಕಾರಂತ

Pages 88

₹ 50.00




Year of Publication: 2021
Published by: ಅಂಕಿತ ಪುಸ್ತಕ
Address: #53, ಶಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು-560004
Phone: 26617100

Synopsys

‘ಪಿಸುಣಾರಿ ಪ್ರೇಮ ಪ್ರಕರಣ’ ಕೃತಿಯು ರಾಜೆಂದ್ರ ಕಾರಮತ ಅವರ ನಾಟಕ ಕೃತಿ. ಕನ್ನಡ ರಂಗಭೂಮಿ ಅನೇಕ ತಿರುವುಗಳನ್ನು ಪಡೆಯುತ್ತಾ, ನಾನಾ ಅವಸ್ಥಾಂತರಗಳನ್ನು ಹೊಂದುತ್ತಾ ಸಾಗಿದಂತೆ ನಗೆನಾಟಕಗಳ ಯುಗ ಮುಗಿದೇ ಹೋಯಿತು ಎಂದುಕೊಳ್ಳುತ್ತಿರುವಾಗಲೇ, ರಾಜೇಂದ್ರ ಕಾರಂತರಂತವರು ಅಲ್ಲಲ್ಲಿ ಕಾಣಿಸಿಕೊಂಡು ಮತ್ತೆ ಜನರನ್ನು ರಂಗಭೂಮಿಗೆ ಎಳೆತಂದರು. ಒಂದು ಕಡೆ ಗಂಭೀರ ನಾಟಕಗಳನ್ನು ರಚಿಸುತ್ತಾ ರಂಗಭೂಮಿಯಲ್ಲಿ ತಮ್ಮ ಅಸ್ತಿತ್ವವನ್ನು ಭದ್ರಪಡಿಸುಕೊಳ್ಳುತ್ತಲೇ ನಗೆ ನಾಟಕಗಳೆಡೆಗೂ ಇಲ್ಲಿ ವಾರೆನೋಟ ಬೀರಿದ್ದಾರೆ. ‘ಪಿಸುಣಾರಿ ಪ್ರೇಮ ಪ್ರಕರಣ’ ಈಗಾಗಲೇ ಹಲವಾರು ಪ್ರಯೋಗಗಳನ್ನು ಕಂಡ ನಾಟಕವಾಗಿದೆ. ಇಲ್ಲಿರುವ ವಿಚಾರಗಳು ಅಭಿನಯಿಸಲು ಸುಲಭವಾಗಿದ್ದು, ರಂಗಸಜ್ಜಿಕೆ, ಬೆಳಕು ಎಲ್ಲವೂ ಸರಳವಾಗಿದೆ. ಸುಲಭವಾಗಿ ರಂಗಕ್ಕೆ ಒಗ್ಗುವುದರಿಂದ ಎಲ್ಲಾ ಪ್ರದೇಶಗಳಿಗೂ ಈ ನಾಟಕದಲ್ಲಿನ ವಿಚಾರಗಳು ಸಲ್ಲುತ್ತದೆ. ಜನರನ್ನು ಮರಳಿ ರಂಗಭೂಮಿಗೆ ತರುವಲ್ಲಿ ಈ ಕೃತಿಯು ಯಶಸ್ವಿಯಾಗಿದೆ.

About the Author

ರಾಜೇಂದ್ರ ಕಾರಂತ

ರಂಗಭೂಮಿಯ ನಟ, ನಿರ್ದೇಶಕ, ನಾಟಕಕಾರ ರಾಜೇಂದ್ರ ಕಾರಂತ್, 40ಕ್ಕೂ ಹೆಚ್ಚು ಕನ್ನಡ ನಾಟಕಗಳನ್ನು  ರಚಿಸಿದ್ದಾರೆ. 1500ಕ್ಕೂ ಹೆಚ್ಚು ರಂಗ ಪ್ರಯೋಗಗಳ ರೂವಾರಿ, ನಾಟಕ ಸ್ಪರ್ಧೆಗಳಲ್ಲಿ ಅಸಂಖ್ಯಾತ ಬಹುಮಾನಗಳನ್ನು ಗಳಿಸಿದ್ದಾರೆ. ಹುಟ್ಟಿದ್ದು ಕುಂದಾಪುರದ ಕೋಣಿ ಗ್ರಾಮದಲ್ಲಿ. ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ.  ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ನಂತರ ಅವರು ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ವೃತ್ತಿ ಜೀವನ ಆರಂಭಿಸಿದರು. ಇವರ ಮೂರು ನಾಟಕಗಳು 100ಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ. ರೇಡಿಯೋ, ಟಿವಿ, ಚಲನಚಿತ್ರ ಮಾಧ್ಯಮಗಳಲ್ಲೂ ಸಾಕಷ್ಟು ಹೆಸರು ಮಾಡಿರುವ ಕಾರಂತರಿಗೆ 2008ರ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕೆ.ಎಸ್.ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆಯನ್ನು ...

READ MORE

Related Books