ಪೂತನಿ

Author : ಆಶಾ ರಘು

Pages 296

₹ 300.00




Year of Publication: 2022
Published by: ಸಾಹಿತ್ಯ ಲೋಕ ಪಬ್ಲಿಕೇಷನ್ಸ್‌
Address: #745, 12ನೇ ಮುಖ್ಯ ರಸ್ತೆ, 3ನೇ ಬ್ಲಾಕ್‌, ರಾಜಾಜಿನಗರ, ಬೆಂಗಳೂರು- 560010
Phone: 9945939436

Synopsys

ಲೇಖಕಿ ಆಶಾ ರಘು ಅವರ ನಾಟಕ ಕೃತಿ ʻಪೂತನಿʼ ಹಾಗೂ ಮತ್ತಿತರ ನಾಟಕಗಳು. ಪುಸ್ತಕದ ಮುನ್ನುಡಿಯಲ್ಲಿ ರಂಗ ನಿರ್ದೇಶಕ ಡಾ. ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರು, “ 'ಪೂತನಿ ಮತ್ತಿತರ ನಾಟಕಗಳು' ಕೃತಿಯಲ್ಲಿ ಒಟ್ಟು ಒಂಭತ್ತು ನಾಟಕಗಳು ಇದ್ದಾವೆ. ಬುದ್ದನ ಕಥೆ ಆಧಾರಿತ 'ಪಟಾಚಾರ', ಮಹಾಭಾರತದ ಕಥೆ ಆಧಾರಿತ, ಏಕವ್ಯಕ್ತಿ ರಂಗಪ್ರಸ್ತುತಿ 'ಪೂತನಿ', ರಾಮಾಯಣ ಕಥೆ ಆಧಾರಿತ ಗೀತನಾಟಕ `ಚೂಡಾಮಣಿ', ಹೆಣ್ಣಿನ ಮೇಲಿನ ಶೋಷಣೆ ಹಾಗೂ ಕೌರ್ಯವನ್ನು ಬಿಂಬಿಸುವ 'ಕ್ಷಮಾದಾನ' ಹಾಗೂ ಮಕ್ಕಳ ನಾಟಕಗಳಾದ 'ಬಂಗಾರದ ಪಂಜರ', 'ಎಣ್ಣೆಗಾಯ್', ʻಕೃಷ್ಟ ಸುದಾಮ', 'ಒನಕೆ ಪೂಜೆʼ, ʻಚಿನ್ನದ ಮಾವಿನ ಹಣ್ಣುʼ. ಹೀಗೆ ಹಲವು ವಸ್ತುಗಳನ್ನು ಗರ್ಭೀಕರಿಸಿಕೊಂಡಿರುವ ನಾಟಕಗಳನ್ನು ರಂಗಕ್ಕೆ ಕೊಡುಗೆ ನೀಡುವುದರ ಮೂಲಕ ಆಶಾ ರಘು ಅವರು ಮಹಿಳಾ ನಾಟಕಕಾರ್ತಿಯರ ಕೊರತೆಯನ್ನು ನೀಗಿದ್ದಾರೆ. ಇಲ್ಲಿರುವ ಬಹುತೇಕ ನಾಟಕಗಳು ಮಹಿಳಾಪ್ರಧಾನ ನಾಟಕಗಳಾಗಿ ಸ್ತ್ರೀ ಸಂವೇದನೆಯನ್ನು ಪ್ರತಿಬಿಂಬಿಸುತ್ತವೆ. ಹೆಣ್ಣಿನ ದನಿಯಾಗಿ ಮಾತಾಡುತ್ತವೆ” ಎಂದು ಹೇಳಿದ್ದಾರೆ.

About the Author

ಆಶಾ ರಘು
(18 June 1979)

ಆಶಾ ರಘು ಅವರು ಕನ್ನಡದ ಪ್ರಮುಖ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಇವರು ಕೇಶವ ಅಯ್ಯಂಗಾರ್ ಹಾಗೂ ಸುಲೋಚನ ದಂಪತಿಗಳ ಹಿರಿಯ ಮಗಳಾಗಿ 1979ರ ಜೂನ್ 18 ನೇ ತಾರೀಖಿನಂದು ಬೆಂಗಳೂರಿನಲ್ಲಿ ಹುಟ್ಟಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು, ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. 'ಆವರ್ತ', 'ಗತ', 'ಮಾಯೆ', 'ಚಿತ್ತರಂಗ' ಮೊದಲಾದ ಕಾದಂಬರಿಗಳನ್ನೂ, 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು' ಮೊದಲಾದ ಕಥಾಸಂಕಲನಗಳನ್ನೂ, 'ಚೂಡಾಮಣಿ', 'ಕ್ಷಮಾದಾನ', 'ಬಂಗಾರದ ...

READ MORE

Related Books