ಪ್ರಬುದ್ಧ ಸಮಾಜದತ್ತ

Author : ನಾ. ದಿವಾಕರ

Pages 520

₹ 470.00




Year of Publication: 2021
Published by: ನಾ. ದಿವಾಕರ
Address: ನಂ.79, 5ನೇಯ ಅಡ್ಡ ರಸ್ತೆ, ನಾಗಲಕ್ಷ್ಮಿ ಮಾರ್ಗ ಎಂ.ಎಂ.ಜಿ ಟೆಂಪಲ್ ಬೆಲ್ ಬಡಾವಣೆ, ಲಿಂಗಾಬುಧಿ ರಸ್ತೆ, ಶ್ರೀರಾಮಪುರ 2ನೇ ಹಂತ, ಮೈಸೂರು- 570023

Synopsys

‘ಪ್ರಬುದ್ಧ ಸಮಾಜದತ್ತ’ ಲೇಖಕ ನಾ. ದಿವಾಕರ ಅವರ ವೈಚಾರಿಕ ಲೇಖನಗಳ ಸಂಕಲನ. ಈ ಕೃತಿಗೆ ಸನತ್ಕುಮಾರ ಬೆಳಗಲಿ ಅವರ ಮುನ್ನುಡಿ ಇದೆ. ಕೃತಿಯ ಕುರಿತು ಬರೆಯುತ್ತಾ ವೈಚಾರಿಕವಾಗಿ ಮಾರ್ಕ್ಸ್ ವಾದಿಯಾದ ನಾ. ದಿವಾಕರ ಅವರು ತಾನು ನಂಬಿದ ಸಿದ್ಧಾಂತದ ಕರ್ಮಠ ಅನುಯಾಯಿಯಲ್ಲ. ಮಾರ್ಕ್ಸ್ ವಾದವನ್ನು ಒಂದು ವಿಜ್ಞಾನ ಎಂದು ತಿಳಿದು ಬದಲಾದ ಕಾಲಘಟ್ಟ ಮತ್ತು ಸನ್ನಿವೇಶಗಳಿಗೆ ಅದನ್ನು ಅನ್ವಯಿಸುತ್ತ ತಮ್ಮ ಬರಹದ ಮೊನಚನ್ನು ಉಳಿಸಿಕೊಂಡವರು ಎಂದಿದ್ದಾರೆ. ಜೊತೆಗೆ ಆತ್ಮೀಯ ದಿವಾಕರ ಅವರ ವೈಚಾರಿಕ ಲೇಖನಗಳ ಸಂಗ್ರಹದ ಐದುನೂರಕ್ಕೂ ಹೆಚ್ಚು ಪುಟಗಳಲ್ಲಿ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲಿ ತಮ್ಮದೇ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಿದ್ದಾರೆ. ಮುಖ್ಯವಾಗಿ ದೇವರು, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮೌಢ್ಯ ಎನ್ನುವುದು ಔದ್ಯಮಿಕ ಸ್ವರೂಪ ಪಡೆಯುತ್ತಿರುವ ಬಗ್ಗೆ, ಲಾಭ ತರುವ ಬಂಡವಾಳ ಆಗಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಕರ್ನಾಟಕ ಸರ್ಕಾರ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ತಂದ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ಬಗ್ಗೆಯಬ ಪ್ರಸ್ತಾಪಿಸುತ್ತ ಮೌಢ್ಯದ ಸುತ್ತ ಆವರಿಸಿದ ಮಾರುಕಟ್ಟೆ ವ್ಯವಸ್ಥೆಯನ್ನು ಬುಡಸಮೇತ ಕಿತ್ತು ಹಾಕದೇ ಮೌಢ್ಯ ನಿವಾರಣೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇಂತಹ ಹಲವಾರು ವೈಚಾರಿಕ ಲೇಖನಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.

About the Author

ನಾ. ದಿವಾಕರ

ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...

READ MORE

Related Books