ಪ್ರಾಚೀನ ಕಾವ್ಯ ಚಿಂತನ

Author : ರಾಮೇಗೌಡ (ರಾಗೌ)

Pages 492

₹ 200.00




Year of Publication: 2015
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಪ್ರಾಚೀನ ಸಾಹಿತ್ಯ ಸಂದರ್ಭದ ಮೇರು ಕವಿಗಳಾದ ಪಂಪ, ರನ್ನ, ದುರ್ಗಸಿಂಹ, ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ ಮೊದಲಾದವರ ಜೀವನ, ಕೃತಿಗಳು, ಅವರ ಚಾರಿತ್ರಿಕ ನೆಲೆ, ಸಾಮಾಜಿಕ ಪ್ರಜ್ಞೆ, ಕೃತಿಗಳ ವಸ್ತುವಿಮರ್ಶೆ, ಬಸವಾದಿ ಶರಣರ ಕವಿತ್ವ ಮತ್ತು ವಿಚಾರವಾದ, ದಾಸರ ಕೀರ್ತನೆಗಳ ವಿವೇಚನೆ, ಸರ್ವಜ್ಞ ಕವಿಯ ಕರ್ತೃತ್ವ ವೈವಿಧ್ಯತೆ ಹೀಗೆ ಹಲವು ಕಾವ್ಯಘಟ್ಟದ ಸಮಗ್ರ ಒಳನೋಟವನ್ನು ಈ ಕೃತಿಯೂ ಕಟ್ಟಿಕೊಟ್ಟಿದೆ. ಕನ್ನಡದ ಪ್ರಾಚೀನ ಕಾವ್ಯಗಳ ಬಗ್ಗೆ ವಿವಿಧ ಕಾಲ ಗಟ್ಟಗಳಲ್ಲಿ ಡಾ. ರಾಗೌರವರು ಬರೆದ ಚಿಂತನಾತ್ಮಕ ಲೇಖನಗಳನ್ನು ಸಂಗ್ರಹಿಸಿ ಈ ಕೃತಿಯಲ್ಲಿ ಕೊಡಲಾಗಿದೆ.

About the Author

ರಾಮೇಗೌಡ (ರಾಗೌ)

ಜಾನಪದ ವಿದ್ವಾಂಸ ಡಾ. ರಾಮೇಗೌಡ (ರಾಗೌ) ಅವರು ಕವಿ, ನಾಟಕಕಾರ, ವಿಮರ್ಶಕ, ಸಂಶೋಧಕರು ಕೂಡ. ಯಾತ್ರೆ, ತೆಪ್ಪ, ಮೋಡ ಮುಸುಕಿದ ಆಕಾಶ, ನೆಲದ ಮರೆಯ ನಿಧಾನ, ಮಾತು ಮೌನಗಳ ನಡುವೆ, ಆರದಿರಲಿ ಈ ಬೆಳಕು, ಮಾತು ಮಾರ್ಗ, ನಿನ್ನೆ ನಾಳೆಗಳ ನಡುವೆ (ಸಮಗ್ರ) ಅವರ ಪ್ರಕಟಿತ ಕವನ ಸಂಕಲನಗಳು. ದೊರೆ ದುರ್ಯೋಧನ (ನಾಟಕ) ಮತ್ತು ಕುಮಾರ ರಾಮ, ಕಂದನ ಕವನಗಳು, ಆರು ಪ್ರಾಣಿಕಥೆಗಳು (ಮಕ್ಕಳ ಸಾಹಿತ್ಯ) ಕೃತಿಗಳನ್ನು ಪ್ರಕಟಿಸಿದ್ದಾರೆ.  ರಾಘವಾಂಕ, ಕಾವ್ಯಾನುಶೀಲನ, ಅವಗಾಹನ, ಕುವೆಂಪು ಸಾಹಿತ್ಯ ವಿಮರ್ಶನ, ದುರ್ಗಸಿಂಹ, ಪ್ರಾಸ್ತಾವಿಕ(ವಿಮರ್ಶೆ) , ಲಕ್ಷೀಶನ ಕಾವ್ಯ ಪ್ರವೇಶ, ರನ್ನನ ಕಾವ್ಯಾಧ್ಯಯನ (ಸಂಶೋಧನ ಕೃತಿಗಳು)   ಕೆ.ಎಸ್.ನರಸಿಂಹಸ್ವಾಮಿ (ಜೀವನ ಚರಿತ್ರೆ),  ಸಾಹಸ , ಭೀಮವಿಜಯ, ಅಜಿತತೀರ್ಥಂಕರ ಪುರಾಣ, ಲಕ್ಷ್ಮೀಶನ ಜೈಮಿನಿ ಭಾರತ (ಗ್ರಂಥಸಂಪಾದನೆ) ಮತ್ತು ನಮ್ಮ ಗಾದೆಗಳು, ಕಿಟ್ಟೆಲ್ ಕೋಶದ ಗಾದೆಗಳು, ಕರ್ಣಾಟಕದ ಜನಪದ ಕಥೆಗಳು, ನಮ್ಮ ...

READ MORE

Related Books