ಪ್ರಗತಿಶೀಲತೆ

Author : ಎಚ್.ಎಸ್. ರಾಘವೇಂದ್ರರಾವ್

Pages 144

₹ 100.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಆಧುನಿಕ ಕನ್ನಡ ಸಾಹಿತ್ಯ ಚಳವಳಿಗಳ ಸಂದರ್ಭದಲ್ಲಿ ನವೋದಯ ಮತ್ತು ನವ್ಯ ಚಳವಳಿಯ ನಡುವೆ ಪ್ರಗತಿಶೀಲ ಎಂಬ ತೊರೆಯೊಂದು ಹಾದುಹೋಗಿದೆ. ಆದರೆ ಅದು ಅಪ್ಪಟ ಸಾಹಿತ್ಯಕ ಪರಿಭಾಷೆಗೆ ಸೇರಿದ್ದೆ ಅಥವಾ ಸಾಮಾಜಿಕವಾದುದೇ ಎಂಬುದರ ಚರ್ಚೆಯ ಜೊತೆಗೆ ಚಳವಳಿಯೊಂದರ ಆಚೆಗೂ ಪ್ರಗತಿಶೀಲತೆಯ ಮನೋಧರ್ಮ ಹೇಗೆ ಚಾಚಿಕೊಂಡಿದೆ ಎಂಬುದನ್ನು ಕೃತಿ ವಿವರಿಸುತ್ತದೆ. 

ಸಮಾಜದಿಂದ ಆವಿರ್ಭವಿಸಿದ ಪರಿಕಲ್ಪನೆಯೊಂದು ಸಾಹಿತ್ಯವನ್ನು ಮುಟ್ಟಿದ ತಟ್ಟಿದ ರೀತಿಯೂ ಕೃತಿಯಲ್ಲಿ ವಿಷದವಾಗಿ ಚರ್ಚಿತವಾಗಿದೆ.

About the Author

ಎಚ್.ಎಸ್. ರಾಘವೇಂದ್ರರಾವ್
(01 August 1948)

ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...

READ MORE

Related Books