ಪ್ರಾಕೃತ-ಕನ್ನಡ ಬೃಹತ್ ನಿಘಂಟು

Author : ಆರ್. ಲಕ್ಷ್ಮೀನಾರಾಯಣ

Pages 1190

₹ 500.00




Year of Publication: 2019
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ, ಆವರಣದ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು- 560056

Synopsys

ಒಂದು ಕಾಲಕ್ಕೆ ಪ್ರಾಕೃತ ಭಾಷೆಯು ಜನಸಾಮಾನ್ಯರ ಮಾತೃ ಭಾಷಾಯಾಗಿತ್ತು. ಪ್ರಾಕೃತದಿಂದ ಸಂಸ್ಕೃತ ಹುಟ್ಟಿತ್ತು ಎಂದು ಕೆಲವರು ವಾದಿಸಿದರೆ ಮತ್ತೆ ಕೆಲವರು ಸಂಸ್ಕೃತದಿಂದ ಪ್ರಾಕೃತ ಹುಟ್ಟಿತ್ತು ಎಂದು ಹೇಳುವವರಿದ್ದಾರೆ. ಎರಡು ವಾದಗಳನ್ನೂ ಪರಿಶೀಲಿಸಿ ಪ್ರಾಚೀನ ಪ್ರಾಕೃತ ಭಾಷೆಯಿಂದ ವೈದಿಕ ಸಂಸ್ಕೃತಿ ಮತ್ತು ಪ್ರಾಕೃತಗಳೆರಡೂ ಹುಟ್ಟಿಕೊಂಡಿರಬೇಕು ಎಂದು ಊಹಿಸುವವರೂ ಇದ್ದಾರಾ. ಕನ್ನಡವೂ ಸಹ ಪ್ರಾಕೃತಿದಿಂದ ಸಾಕಷ್ಟು ಪದಗಳು ಪ್ರಾಕೃತದ ಮೂಲದವು ಇಂತಹ ಪದಗಳ ಸ್ವರೂಪ ಯಾವ ರೀತಿಯಲ್ಲಿತ್ತು ಎಂಬುದನ್ನು ಅರಿಯಲು ಈ ನಿಘಂಟು ಸಹಕಾರಿಯಾಗುತ್ತದೆ. ಹಳಗನ್ನಡದ ಕೆಲವು ಕವಿಗಳು ಪ್ರಾಕೃತದೊಡನೆ ಅನುಸಂಧಾನ ನಡೆಸಿದ್ದಾರೆ.

ಜೈನ ಕಾವ್ಯ ಪುರಾಣಗಳನ್ನು ಅರ್ಥಮಾಡಿಕೊಳ್ಳಲು ಪ್ರಾಕೃತದ ತಿಳುವಳಿಕೆಯ ಅಗತ್ಯ ಸಾಕಷ್ಟಿದೆ. ಪ್ರಸ್ತುತ ಈ ನಿಘಂಟು ಈ ದಿಕ್ಕಿನಲ್ಲಿ ಬಹಳಷ್ಟು ಸಹಕಾರಿಯಾಗುತ್ತದೆ. ಭಾಷಾ ವಿಜ್ಞಾನಿಗಳಿಗೆ, ಸಂಶೋಧಕರಿಗೆ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಈ ನಿಘಂಟನ್ನು ವಿದ್ವಾಂಸರಾದ ಡಾ. ಆರ್. ಲಕ್ಷ್ಮೀನಾರಾಯಣ ಅವರು ಅಪಾರ ತಾಳ್ಮೆ ಮತ್ತು ಪರಿಶ್ರಮದಿಂದ ಸಿದ್ಧಪಡಿಸಿಕೊಟ್ಟಿದ್ದಾರೆ. 

About the Author

ಆರ್. ಲಕ್ಷ್ಮೀನಾರಾಯಣ
(02 December 1949)

ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕೃತ ಆರ್. ಲಕ್ಷ್ಮೀನಾರಾಯಣ ಅವರು ಹುಟ್ಟಿದ್ದು 1949ರ ಡಿಸೆಂಬರ್ 2ರಂದು ತುಮಕೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದಿರುವ ಇವರು ಹಲವಾರು ಸರ್ಕಾರಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕ ಹಾಗೂ ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿ, ಕೆಲಕಾಲ ಧಾರವಾಡದಲ್ಲಿ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.  ಇವರು ಬರೆದಿರುವ ಕೃತಿಗಳೆಂದರೆ; ಮಾಸ್ತಿ, ಆಹ್ಲಾದ, ಎಸ್.ವಿ. ಪರಮೇಶ್ವರ ಭಟ್ಟ-ವಿಮರ್ಶಾ ಕೃತಿಗಳು. ಚಿನ್ನದ ಕಳಶ ಬರ್ಟೋಲ್ಟ್ ಬ್ರೆಕ್ಸ್, ವಾಜಿಯ ವಿವೇಕ, ಇನ್ನೊಬ್ಬ ದ್ರೋಣಾಚಾರ್ಯ, ಅನುರೂಪ ಅನುವಾದಿತ ಕೃತಿಗಳು.  ಇವರಿಗೆ  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ...

READ MORE

Related Books