ಪ್ರತಾಪರುದ್ರೀಯ

Author : ಎಚ್‌. ತಿಪ್ಪೇರುದ್ರಸ್ವಾಮಿ

Pages 428

₹ 200.00




Year of Publication: 2010
Published by: ಡಿ.ವಿ.ಕೆ. ಮೂರ್ತಿ
Address: ಮೈಸೂರು-4

Synopsys

ಕಾವ್ಯ ಮತ್ತು ಛಂದಸ್ಸಿಗೆ ಸಂಬಂಧಿಸಿದ ಕೃತಿಯಿದು. ಸಂಸ್ಕೃತ ಅಲಂಕಾರ ಗ್ರಂಥದ ಕನ್ನಡ ಅನುವಾದ. ಅಯಕ ಪ್ರಕರಣ, ಕಾವ್ಯ ಪ್ರಕರಣ, ನಾಟಕ ಪ್ರಕರಣ, ರಸ ಪ್ರಕರಣ, ದೋಷ ಪ್ರಕರಣ, ಗುಣ ಪ್ರಕರಣ, ಶಬ್ದಾಲಂಕಾರ ಪ್ರಕರಣ, ಅರ್ಥಾಲಂಕಾರ ಪ್ರಕರಣ, ಮಿಶ್ರಾಲಂಕಾರ ಪ್ರಕರಣ ಎಂದು ವರ್ಗೀಕರಿಸಲಾಗಿದೆ.

ಈ ಕೃತಿಯ ಪ್ರಾಸ್ತಾವಿಕ ಮಾತುಗಳಲ್ಲಿ ಬಿ. ರಾಜಶೇಖರಯ್ಯ ಅವರು ಕೃತಿಯನ್ನು ಹೀಗೆ ಪರಿಚಯಿಸಿದ್ದಾರೆ-

ಪ್ರತಾಪರುದ್ರೀಯ ದೃಶ್ಯಕಾವ್ಯದ ಮಹತ್ವವನ್ನುಳ್ಳ, ಲಕ್ಷಣ-ಲಕ್ಷ್ಮಗಳನ್ನು ಸಮಗ್ರವಾಗಿ ಸಂಕ್ಷಿಪ್ತವಾಗಿ ಒಳಗೊಂಡಿರುವ ಮತ್ತು ಅಲಂಕಾರಶಾಸ್ತ್ರದ ಪ್ರಮೇಯಾಂಶಗಳೆನಿಸಿರುವ ಕಾವ್ಯ, ಕಾವ್ಯಲಕ್ಷಣ, ಕಾವ್ಯಪ್ರಯೋಜನ, ಕಾವ್ಯವೈವಿಧ್ಯ, ಗುಣ, ಅಲಂಕಾರ, ರೀತಿ, ವೃತ್ತಿ, ರಸ, ಧ್ವನಿ, ಶಬ್ದಾಲಂಕಾರ, ಅರ್ಥಾಲಂಕಾರಾದಿಗಳನ್ನು ಸಮಗ್ರವಾಗಿ - ಆದರೆ ಸಂಕ್ಷಿಪ್ತವಾಗಿ ಸರಳರೀತಿಯಲ್ಲಿ ವಾಕ್ಯಾರ್ಥಶೈಲಿಯನ್ನೂ, ಪ್ರೌಢ ಶೈಲಿಯನ ಬಿಟ್ಟು ಒಳಗೊಂಡಿರುವ ಪ್ರತಾಪರುದ್ರೀಯ ಯಶೋಭೂಷಣಮ್ ಅಥವಾ ಪ್ರತಾಪರುದ್ರೀಯಮ್ ಎಂಬ ವಿದ್ಯಾನಾಥನ ಈ ಸಂಸ್ಕೃತ ಕೃತಿಯು ಉತ್ತಮ ವಿದ್ವಾಂಸರಾದ ದಿ. ಡಾ. ಎಚ್. ತಿಪ್ಪೇರುದ್ರಸ್ವಾಮಿಯವರ ಅನುವಾದದೊಂದಿಗೆ ಪ್ರಕಟಗೊಳ್ಳುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಸಂಸ್ಕೃತ ಹಾಗೂ ಕನ್ನಡವನ್ನು ಅಧ್ಯಯನಮಾಡತಕ್ಕ ವಿದ್ಯಾರ್ಥಿಗಳಿಗೆ, ವಿದ್ವಾಂಸರುಗಳಿಗೆ, ಅಲಂಕಾರಶಾಸ್ತ್ರದ ಪ್ರಾರಂಭಿಕ ಅಭ್ಯಾಸಿಗಳಿಗೆ-ಈ ಗ್ರಂಥವು ಅತ್ಯವಶ್ಯಕವಾಗಿ ಅಧೀಯ ಗ್ರಂಥವಾಗಿರುತ್ತದೆ. ಈ ಗ್ರಂಥದಲ್ಲಿನ ಪ್ರಮೇಯಾಂಶಗಳನ್ನು ಚೆನ್ನಾಗಿ ಮನನಮಾಡಿಕೊಂಡ ಬಳಿಕ ಮಮ್ಮಟ, ವಿಶ್ವನಾಥ, ಆನಂದವರ್ಧನರ ಕೃತಿಗಳು ಸುಲಭವಾಗಿ ಗ್ರಹಣಯೋಗ್ಯಗಳಾಗುತ್ತವೆಂಬುದು ಸತ್ಯ. ಅಂತೆಯೇ ಪ್ರತಾಪರುದ್ರೀಯ ಗ್ರಂಥವು ದಕ್ಷಿಣಭಾರತದಲ್ಲಿ ಅತ್ಯಾದರಣೀಯವೂ, ಅದಿಯ ಗ೦ಡವೂ ಆಗಿರುವುದರಿಂದ, ಅನೇಕ ತರಗತಿಗಳಿಗೆ ಈ ಕೃತಿಯನ್ನು ಪಾಠಗ್ರಂಥವಾಗಿ ಗೊತ್ತುಮಾಡಿರುವುದು ಇದರ ಮಹತ್ವವನ್ನು ಸ್ಪಷ್ಟಪಡಿಸುತ್ತದೆ.

 

About the Author

ಎಚ್‌. ತಿಪ್ಪೇರುದ್ರಸ್ವಾಮಿ
(03 February 1928 - 28 October 1994)

ಶರಣರನ್ನು ಕುರಿತು ಕಾದಂಬರಿ ರಚಿಸುವ ಮೂಲಕ ಜನಪ್ರಿಯರಾಗಿರುವ ಎಚ್. ತಿಪ್ಪೇರುದ್ರಸ್ವಾಮಿ ಅವರು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯವರಾದ ತಿಪ್ಪೇರುದ್ರಸ್ವಾಮಿ ಜನಿಸಿದ್ದು 1928ರ ಫೆಬ್ರುವರಿ 3ರಂದು. ತಂದೆ ಚೆನ್ನಮಲ್ಲಯ್ಯ, ತಾಯಿ ಬಸಮ್ಮ. ಹೊನ್ನಾಳಿ, ಶಿರಾಳಕೊಪ್ಪ ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಆರಂಭಿಕ ಶಿಕ್ಷಣ ಪಡೆದ ತಿಪ್ಪೇರುದ್ರಸ್ವಾಮಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ (ಎಂ.ಎ.) ಪಡೆದರು. ಶರಣರ ಅನುಭಾವ ಪ್ರಪಂಚ ಮಹಾಪ್ರಬಂಧಕ್ಕೆ ಡಾಕ್ಟೊರೇಟ್‌ ಪದವಿ (1962) ಪಡೆದರು. ಹಾಸನದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ತಿಪ್ಪೇರುದ್ರಸ್ವಾಮಿ ...

READ MORE

Related Books