ಪ್ರವಾದಿ ಮುಹಮ್ಮದ್

Author : ಎಂ. ಅಬ್ದುಲ್ ರೆಹಮಾನ್ ಪಾಷಾ

Pages 48

₹ 25.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌, ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 080-22161900

Synopsys

ಪ್ರವಾದಿ ಮುಹಮ್ಮದರು ಹುಟ್ಟುವ ಮೊದಲು ಅರೇಬಿಯದ ತುಂಬಾ ಚಿಕ್ಕ ದೊಡ್ಡ ಬುಡಕಟ್ಟುಗಳು. ಅನಕ್ಷರತೆ ಹಾಗೂ ಬಡತನ. ಕೃಷಿಯು ಅಪರಿಚಿತ. ಮೋಸ, ವಂಚನೆ, ಸುಲಿಗೆ, ಅತ್ಯಾಚಾರ, ಕುಡಿತ ಜೂಜುಗಳು ಅವ್ಯಾಹತ. ಹುಟ್ಟಿದ ಹೆಣ್ಣುಮಕ್ಕಳ ತಲೆಯನ್ನು ಉಸುಕಿನಲ್ಲಿ ಹೂತು ಕೊಲ್ಲುತ್ತಿದ್ದರು. ಇಂತಹ ಪರಿಸರದಲ್ಲಿ ಜನಿಸಿದ ಪ್ರವಾದಿ ಮುಹಮ್ಮದರು, ಇಸ್ಲಾಂ ಧರ್ಮವನ್ನು ಸ್ಥಾಪಿಸಿದರು. ಪ್ರವಾದಿ ಮುಹಮ್ಮದರು ಅನಕ್ಷರಸ್ಥರಾಗಿದ್ದರೂ ಮಹಾ ಚಾಣಾಕ್ಷರು! ಕಾಬಾ ಭವನದ ಪುನರ್ನಿರ್ಮಾಣದ ಕಾಲ. ಪವಿತ್ರ ಶಿಲೆಯನ್ನು ಯಾವ ಬುಡಕಟ್ಟಿನವರು ಸ್ಥಾಪಿಸಬೇಕು ಎಂದು ಕಲಹವೇರ್ಪಟ್ಟಿತು. ಮುಹಮ್ಮದರು ಒಂದು ಶಾಲಿನ ಮೇಲೆ ಪವಿತ್ರ ಹಜರುಲ್ ಅಸ್ವದ್ ಶಿಲೆಯನ್ನಿಟ್ಟರು. ಎಲ್ಲ ಬುಡಕಟ್ಟಿನ ನಾಯಕರು ಶಾಲಿನ ಅಂಚನ್ನು ಹಿಡಿದುಕೊಂಡು ಭವನದ ಬಳಿಗೆ ಕೊಂಡೊಯ್ದರು. ನಂತರ ತಾವೇ ಶಿಲೆಯನ್ನು ನಿಗದಿತ ಸ್ಥಾನದಲ್ಲಿ ಪ್ರತಿಷ್ಠಾಪಿಸಿದರು! ಅಂತಃಕಲಹವನ್ನು ತಪ್ಪಿಸಿದರು. ಈ ರೀತಿಯ ಹಲವು ಕಥೆಗಳು ಹಾಗೂ ದೃಷ್ಟಾಂತಗಳ ಮೂಲಕ ಪ್ರವಾದಿ ಮಹಮ್ಮದರ ಕುರಿತಾಗಿನ ಜೀವನವನ್ನು ನವಿರಾಗಿ ವರ್ಣಿಸಿದ್ದಾರೆ. ಕೇವಲ ಅವರ ತತ್ವಗಳನ್ನು ಮಾತ್ರ ಪ್ರಚುರ ಪಡಿಸದೇ, ತತ್ವಗಳನ್ನು ಜೀವನದಲ್ಲಿ ಯಾವ ರೀತಿಯಲ್ಲಿ ಅಳವಡಿಸಿಕೊಳ್ಳಬಹುದೆಂದು ತಿಳಿಸಿಕೊಡುವ ಪುಸ್ತಕವಿದು.

About the Author

ಎಂ. ಅಬ್ದುಲ್ ರೆಹಮಾನ್ ಪಾಷಾ

ಸಿನಿಮಾ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದಂತೆ  ಬರೆಯುವ ಅಬ್ದುಲ್ ರೆಹಮಾನ್ ಪಾಷಾ ಕನ್ನಡ ಲೇಖಕರು. ಗಾಂಧೀ ನೆಹರೂ ಆಯ್ದ ಪತ್ರಗಳು, ಅಭಿವೃದ್ಧಿ ಸಂವಹನ ಕೌಶಲ್ಯಗಳು, ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ, ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ, ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ, ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆಯಲ್ಲಿ ಮಹಾತ್ಮ ಗಾಂಧಿ, ಟೀಪು ಸುಲ್ತಾನ, ಜವಾಹರಲಾಲ್ ನೆಹರೂ, ಪ್ರವಾದಿ ಮುಹಮ್ಮದ್ ಕಿರುಹೊತ್ತಿಗೆಗಳು ಮುದ್ರಣ ಕಂಡಿವೆ. ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ’ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015), ಶಿವಮೊಗ್ಗದ ...

READ MORE

Related Books