ಪುರುಷೋತ್ತಮ ಪರ್ವ

Author : ಎಸ್‌.ಎಲ್‌. ಎನ್‌. ಸ್ವಾಮಿ

Pages 352

₹ 250.00




Year of Publication: 2018
Published by: ತೇಜು ಪಬ್ಲಿಕೇಷನ್
Address: #1014, 24ನೇ ಮುಖ್ಯ ರಸ್ತೆ, 16ನೇ ಕ್ರಾಸ್‌, ಬನಶಂಕರಿ ಎರಡನೇ ಹಂತ, ಬೆಂಗಳೂರು - 70
Phone: 9900195626

Synopsys

ಪಾಯಸವೆ ಪೀಯೂಷ ಪತ್ನಿಯರ ಗರ್ಭಕ್ಕೆ ಪಾಯವಾಯಿತು ರಾಮಕಥೆಗಾ ಸಿಹಿಯ ಪಾತ್ರೆ ಪೇಯವಾಯ್ತಲ್ಲರಿಗು ವಾಲ್ಮೀಕಿ ರಚಿತ ಕೃತಿ ಗಾಯನಕೆ ಪಠಣಕ್ಕೆ ದರುಶನಕೆ ಕಾವ್ಯಸುಧೆ ಪುರುಷರಲ್ಲುತ್ತಮನ ಪರಶುನಡೆಯೊಳುಮರ್ಥ ದರುಶನವು ದೊರೆಯ ಧೇನಿಸುವುದನಿವಾರ್ಯ ಪುರಜನರೆ ಶ್ರೇಷ್ಠರೈ ಪರಿಪಾಲಿಪನಿಗೆಂದು ಪರಿಪರಿಯೊಳೊರೆವುದೆ ರಾಮಾಯಣದ ಸಾರ ಮುಕ್ತಿಯಿತ್ತನು ರಾಮ ಮುನಿಪತ್ನಿ ಕಲುಷತೆಗೆ ಶಕ್ತಿಯಿತ್ತನು ಜಲಧಿ ಪಾಠ ಹನುಮನಿಗಂದು ರಕ್ತಿಗುಂ ವಿರಕ್ತಿಗುಂ ಸಾದೃಶವು ರಾಮನು ಕ್ಷಿತಿಗೀಶ ಕೃತಿಗೀಶ ಸನ್ಮತಿಗುಮೀಶನೋ ದಶರಥನ ಮರಣದಿಂ ದಶಕಂಠ ವಧೆಯನಕ ವಿಷಯ ವಿಶದತೆಯೆನಿತೋ ವಿಷಮ ಕುಟಿಲತೆಯನಿತು ಪಶುವಾದ ಪೌಲಸ್ಯ ಶಿಶುವಾದ ಶ್ರೀವಿಷ್ಣು ಕಲೆ ಬೀಸುತಿರೆ ವಿಧಿಯು ದಿಶೆ ದಿಶೆಗು ಬೆರಗು ಮತಿ ಕಥಿತ ಮನಮಥನ ಹೃತ್ಕದದ ಕಟಕಟನ ವ್ಯಥಿತರನು ಪೊರೆದವನ ಕಥನಪರಿ ಮನಭರಣ ತುತಿಸುವರು ರಾಮನನು ಪ್ರಕಾಶರೆಂದೆಂದು ಕೃತಿ ನಿರುಕಿಸುವರಿಂದು ಸ್ವಾಮಿಯನುಗ್ರಹ ಸಂದು ಪುರುಷೋತ್ತಮನ ಪರ್ವ ಪ್ರಕಟಿಪರಿಗುಂ ಗರ್ವ ಚಿರಕಾಲ ಸ್ಮರಣಕ್ಕೆ ಹೊಸೆದಿಹುದು ಸರಿಪಥವ ಗುರುಗಳಿಗೆ ಪ್ರಿಯವಾಯ್ತು ಗುರುಲಘುವಿನಾಟದೊಳು ಹಿರಿಯರಿಗು ಕಿರಿಯರಿಗು ರುಚಿಪುದೀ ಹುರಿಗಾಳು.

About the Author

ಎಸ್‌.ಎಲ್‌. ಎನ್‌. ಸ್ವಾಮಿ

ಎಸ್‌.ಎಲ್‌. ಎನ್‌. ಸ್ವಾಮಿ ಮೂಲತಃ ಚಾಮರಾಜನಗರದವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪತ್ರಿಕೋದ್ಯಮದಲ್ಲಿ ಡಿಪ್ಲೋಮೊ ಕೋರ್ಸ್ ಪಡೆದಿದ್ದಾರೆ. ಉದಯ ಟಿವಿ, ಜೀ ಕನ್ನಡ,ಈ ಟಿವಿಯಲ್ಲಿ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಯಲಹಂಕದ 'ರಂಗಸ್ಥಳ' ರಂಗಶಿಕ್ಷಣ ಕೇಂದ್ರದಲ್ಲಿ ಯೋಜನಾ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಅಧ್ವೆತ ಅನುಸಂಧಾನಂ, ಪುರುಷೋತ್ತಮ ಪರ್ವ, ಯಲಹಂಕ ಕ್ಷೇತ್ರ ದರ್ಶಿನಿ, ...

READ MORE

Related Books