ಪುಸ್ತಕ ಸನ್ನಿಧಿ

Author : ಟಿ.ಪಿ. ಅಶೋಕ

Pages 240

₹ 140.00




Year of Publication: 2013
Published by: ವಸಂತ ಪ್ರಕಾಶನ
Address: ನಂ.360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್ ಜಯನಗರ, ಬೆಂಗಳೂರು- 560011
Phone: 08022443996

Synopsys

ಲೇಖಕ ಟಿ.ಪಿ. ಅಶೋಕ ಅವರು ವಿವಿಧ ಪತ್ರಿಕೆಗಳಿಗೆ ಬರೆದ ಇಪ್ಪತ್ತೈದು ವಿಮರ್ಶಾ ಲೇಖನಗಳ ಸಂಗ್ರಹ ‘ಪುಸ್ತಕ ಸನ್ನಿಧಿ’. ರುಕಿಯಾ ಶೇಖಾವತ್ ಹುಸೇನ್ ಅವರ ‘ಸುಲ್ತಾನಾಳ ಕನಸು’ ಮತ್ತು ‘ಪದ್ಮರಾಗ’, ರವೀಂದ್ರನಾಥ ಠಾಕೂರ್ ಅವರ ‘ಗೋರಾ’, ಗೋಪಾಲಕೃಷ್ಣ ಅಡಿಗರ ಕುರಿತ ‘ಅಡಿಗರ ಕಾವ್ಯ’, ನರಸಿಂಹ ಸ್ವಾಮಿ ಅವರ ‘ಮಲ್ಲಿಗೆಯ ಮಾಲೆ’ ಮುಂತಾದ ಲೇಖನಗಳನ್ನು ಇಲ್ಲಿ ಸಂಕಲಿಸಿದ್ದಾರೆ. ಕಾರಂತರ ‘ಚೋಮನ ದುಡಿ’, ‘ಸರಸಮ್ಮನ ಸಮಾಧಿ’, ಭೈರಪ್ಪನವರ ‘ಮಂದ್ರ’ ಮುಂತಾದ ಕೃತಿಗಳು ಹಾಗೂ ಇತರ ಕೃತಿಗಳ ಕುರಿತು ಲೇಖನಗಳು ಇಲ್ಲಿವೆ.

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books