ನವೋದಯದ ಮೂವರು ಪ್ರವರ್ತಕ ಕವಿಗಳಲ್ಲಿ ಒಬ್ಬರಾದ ಪು.ತಿ.ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಮಹತ್ತರದ ಸಾಧನೆಯನ್ನು ಮಾಡಿದ್ದಾರೆ. ಅವರನ್ನು ಕನ್ನಡ ವಜ್ರದ ಕಿರೀಟ ಎಂದೇ ಹೇಳ ಬಹುದು. ಭಾಷೆಗೆ ಗೌರವವನ್ನು ತರುವಂತಹ ಅವರ ಕವನಗಳು, ಶ್ರೇಷ್ಠ ಪ್ರಬಂಧಗಳು, ಅನನ್ಯವಾಗಿರುವ ಅವರ ನೃತ್ಯ ರೂಪಕಗಳು, ಮಹಾ ಕಾವ್ಯವಾದ ಶ್ರೀ ಹರಿಚರಿತೆ, ಹಾಗೂ ನಾಟಕಗಳು ಅವರ ಕೃತಿ ಸಾಮರ್ಥ್ಯದ ರಸಪ್ರಜ್ಞೆಯ, ಹಾಗೂ ಭಗವತ್ ಗೀತೆಯ ಕುರುಹುಗಳಾಗಿವೆ. ಈ ಎಲ್ಲಾ ವಿಭಾಗಗಳಿಂದಲೂ ಪ್ರಾತಿನಿಧಿಕವಾದವುಗಳನ್ನು ಆಯ್ದು ಈ ಕೃತಿಯಲ್ಲಿ ಕೊಡಲಾಗಿದೆ.
©2024 Book Brahma Private Limited.